<p><strong>ಸೋಮವಾರ, 16-4-1962<br /> </strong><strong>ರಾಷ್ಟ್ರೈಕ್ಯತೆ ಭಾವನೆಹೆಚ್ಚುವುದು ಅಗತ್ಯ<br /> ಮುಂಬೈ,</strong> ಏ. 15- ಭಾರತವನ್ನು ಆಕ್ರಮಣಕಾರರು ಆಕ್ರಮಿಸಿದ್ದರೆ ಅದು ಅವರ ಸ್ವಶಕ್ತಿಯಿಂದಲ್ಲ. ನಮ್ಮಲ್ಲಿದ್ದ ಅನೈಕ್ಯತೆಯಿಂದ ಜಯಗಳಿಸಿದರು ಎಂಬುದನ್ನು ಇತಿಹಾಸ ಸಾರುತ್ತದೆ ಎಂದು ರಕ್ಷಣಾ ಸಚಿವ ಶ್ರಿ ವಿ.ಕೆ. ಕೃಷ್ಣಮೆನನ್ ನಿನ್ನೆ ಇಲ್ಲಿ ತಿಳಿಸಿದರು.<br /> <br /> ಇತ್ತೀಚೆಗೆ ಭಾರತ ತೆಗೆದುಕೊಂಡ ವಿಮಾನ ವಾಹಕ ವಿಕ್ರಾಂತ ನೌಕೆಯ ಅಧಿಕಾರಿ ವರ್ಗ ರಕ್ಷಣಾ ಸಚಿವರಿಗೆ ಗೌರವರಕ್ಷೆ ನೀಡಿದ ಸಮಾರಂಭದಲ್ಲಿ ನೌಕಾಧಿಕಾರಿಗಳನ್ನುದ್ದೇಶಿಸಿ ಶ್ರಿ ಕೃಷ್ಣಮೆನನ್ ಮಾತನಾಡುತ್ತಾ ಮೇಲ್ಕಂಡಂತೆ ತಿಳಿಸಿದರು.<br /> <br /> <strong>ಕಾಂಗ್ರೆಸ್ ಅಧ್ಯಕ್ಷ ನೀಲಂ ರಾಜೀನಾಮೆ ಒಪ್ಪಿಗೆ<br /> ನವದೆಹಲಿ,</strong> ಏ.15- ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ನೀಲಂ ಸಂಜೀವರೆಡ್ಡಿ ಅವರಿತ್ತ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಅಂಗೀಕರಿಸಿತು. ಮುಂದಿನ ಏಐಸಸಿ ಸಭೆಯಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ ರೆಡ್ಡಿ ಅವರು ಅಧಿಕಾರದಲ್ಲಿ ಮುಂದುವರಿಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರ, 16-4-1962<br /> </strong><strong>ರಾಷ್ಟ್ರೈಕ್ಯತೆ ಭಾವನೆಹೆಚ್ಚುವುದು ಅಗತ್ಯ<br /> ಮುಂಬೈ,</strong> ಏ. 15- ಭಾರತವನ್ನು ಆಕ್ರಮಣಕಾರರು ಆಕ್ರಮಿಸಿದ್ದರೆ ಅದು ಅವರ ಸ್ವಶಕ್ತಿಯಿಂದಲ್ಲ. ನಮ್ಮಲ್ಲಿದ್ದ ಅನೈಕ್ಯತೆಯಿಂದ ಜಯಗಳಿಸಿದರು ಎಂಬುದನ್ನು ಇತಿಹಾಸ ಸಾರುತ್ತದೆ ಎಂದು ರಕ್ಷಣಾ ಸಚಿವ ಶ್ರಿ ವಿ.ಕೆ. ಕೃಷ್ಣಮೆನನ್ ನಿನ್ನೆ ಇಲ್ಲಿ ತಿಳಿಸಿದರು.<br /> <br /> ಇತ್ತೀಚೆಗೆ ಭಾರತ ತೆಗೆದುಕೊಂಡ ವಿಮಾನ ವಾಹಕ ವಿಕ್ರಾಂತ ನೌಕೆಯ ಅಧಿಕಾರಿ ವರ್ಗ ರಕ್ಷಣಾ ಸಚಿವರಿಗೆ ಗೌರವರಕ್ಷೆ ನೀಡಿದ ಸಮಾರಂಭದಲ್ಲಿ ನೌಕಾಧಿಕಾರಿಗಳನ್ನುದ್ದೇಶಿಸಿ ಶ್ರಿ ಕೃಷ್ಣಮೆನನ್ ಮಾತನಾಡುತ್ತಾ ಮೇಲ್ಕಂಡಂತೆ ತಿಳಿಸಿದರು.<br /> <br /> <strong>ಕಾಂಗ್ರೆಸ್ ಅಧ್ಯಕ್ಷ ನೀಲಂ ರಾಜೀನಾಮೆ ಒಪ್ಪಿಗೆ<br /> ನವದೆಹಲಿ,</strong> ಏ.15- ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ನೀಲಂ ಸಂಜೀವರೆಡ್ಡಿ ಅವರಿತ್ತ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಅಂಗೀಕರಿಸಿತು. ಮುಂದಿನ ಏಐಸಸಿ ಸಭೆಯಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ ರೆಡ್ಡಿ ಅವರು ಅಧಿಕಾರದಲ್ಲಿ ಮುಂದುವರಿಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>