<p>ರಾಮಾಪುರ: ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಆರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಕುರಟ್ಟಿ ಹೊಸೂರು ಗ್ರಾಮದ ಸ್ಥಿತಿ ಇಂದಿಗೂ ಹಾಗೆಯೇ ಇದೆ.<br /> <br /> ಈಗ ಉಪ ಚುನಾವಣೆಗೆ ಗ್ರಾಮ ಸಜ್ಜಾಗಿದೆ. ಅನೇಕ ಅಭ್ಯರ್ಥಿಗಳು ಕಣಕ್ಕೆ ಧುಮುಕಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರ ಕಣದಲ್ಲಿದ್ದು, ಪ್ರಚಾರದ ಕಾವು ಏರತೊಡಗಿದೆ. ಆದರೆ ದಶಕಗಳಿಂದ ಗ್ರಾಮದ ಸಮಸ್ಯೆಗಳ ಬಗ್ಗೆ ಯಾವ ಜನ ನಾಯಕರೂ ತಲೆ ಕೆಡಿಸಿಕೊಂಡಿಲ್ಲ.<br /> <br /> ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳಿವೆ. ಅವು ಈಡೇರಿಸುವಂತೆ ಆರು ತಿಂಗಳ ಹಿಂದೆಯೇ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಡಂಚಿನ ಗ್ರಾಮಗಳಾದ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಭದ್ರಯ್ಯನಹಳ್ಳಿ, ಚೆನ್ನೂರು, ಅರಬಗೆರೆ 75, ಹೊಸಳ್ಳಿ, ದಂಟಳ್ಳಿ, ಚಂಗಡಿ, ಮುನಿಶೆಟ್ಟಿ ದೊಡ್ಡಿ, ವಿ.ಎಸ್. ದೊಡಿ ಇತ್ಯಾದಿ ಹಳ್ಳಿಗಳು ಒಳಪಡುತ್ತವೆ. <br /> <br /> ಈ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಶಾಲೆಗೆ ತಡೆಗೋಡೆ ಮತ್ತು ಗೇಟ್, ರಸ್ತೆ ಡಾಂಬರೀಕರಣ, ಹೆರಿಗೆ ಆಸ್ಪತ್ರೆ, ಪಶು ಚಿಕಿತ್ಸಾಲಯ, ಬಡವರಿಗೆ ವಸತಿ, ವಸತಿ ನಿಲಯದ ಕಟ್ಟಡ ಕೊಟರೆ ಮುಂತಾದ ಸಮಸ್ಯೆಗಳನ್ನು ಈ ಗ್ರಾಮಗಳು ಎದುರಿಸುತ್ತಿವೆ. <br /> <br /> ಈ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮಾಪುರ: ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಆರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಕುರಟ್ಟಿ ಹೊಸೂರು ಗ್ರಾಮದ ಸ್ಥಿತಿ ಇಂದಿಗೂ ಹಾಗೆಯೇ ಇದೆ.<br /> <br /> ಈಗ ಉಪ ಚುನಾವಣೆಗೆ ಗ್ರಾಮ ಸಜ್ಜಾಗಿದೆ. ಅನೇಕ ಅಭ್ಯರ್ಥಿಗಳು ಕಣಕ್ಕೆ ಧುಮುಕಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರ ಕಣದಲ್ಲಿದ್ದು, ಪ್ರಚಾರದ ಕಾವು ಏರತೊಡಗಿದೆ. ಆದರೆ ದಶಕಗಳಿಂದ ಗ್ರಾಮದ ಸಮಸ್ಯೆಗಳ ಬಗ್ಗೆ ಯಾವ ಜನ ನಾಯಕರೂ ತಲೆ ಕೆಡಿಸಿಕೊಂಡಿಲ್ಲ.<br /> <br /> ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳಿವೆ. ಅವು ಈಡೇರಿಸುವಂತೆ ಆರು ತಿಂಗಳ ಹಿಂದೆಯೇ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಡಂಚಿನ ಗ್ರಾಮಗಳಾದ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಭದ್ರಯ್ಯನಹಳ್ಳಿ, ಚೆನ್ನೂರು, ಅರಬಗೆರೆ 75, ಹೊಸಳ್ಳಿ, ದಂಟಳ್ಳಿ, ಚಂಗಡಿ, ಮುನಿಶೆಟ್ಟಿ ದೊಡ್ಡಿ, ವಿ.ಎಸ್. ದೊಡಿ ಇತ್ಯಾದಿ ಹಳ್ಳಿಗಳು ಒಳಪಡುತ್ತವೆ. <br /> <br /> ಈ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಶಾಲೆಗೆ ತಡೆಗೋಡೆ ಮತ್ತು ಗೇಟ್, ರಸ್ತೆ ಡಾಂಬರೀಕರಣ, ಹೆರಿಗೆ ಆಸ್ಪತ್ರೆ, ಪಶು ಚಿಕಿತ್ಸಾಲಯ, ಬಡವರಿಗೆ ವಸತಿ, ವಸತಿ ನಿಲಯದ ಕಟ್ಟಡ ಕೊಟರೆ ಮುಂತಾದ ಸಮಸ್ಯೆಗಳನ್ನು ಈ ಗ್ರಾಮಗಳು ಎದುರಿಸುತ್ತಿವೆ. <br /> <br /> ಈ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>