<p><strong>ಬಸವಕಲ್ಯಾಣ: </strong>ತಾವು ವಾಸಿಸುವ ಪರಿಸರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ದೂರ ದೂರಕ್ಕೆ ನೋಡದೆ ನಮ್ಮಲ್ಲಿನ ಸಮಸ್ಯೆ -ಸವಾಲುಗಳನ್ನು ಬಿಡಿಸಲು, ನಮ್ಮ ಭಾಗದ ಸಾಹಿತ್ಯದ ಸಂರಕ್ಷಣೆಗೆ ಯತ್ನಿಸಬೇಕಾಗಿದೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ತಾಲ್ಲೂಕಿನ ನಾರಾಯಣಪುರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ವಲಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಲ್ಯಾಣವೆಂದರೆ ವಚನ ಸಾಹಿತ್ಯದ ನೆಲೆ. ವಚನ ಸಾಹಿತ್ಯವನ್ನು ತೆಗೆದರೆ ಕನ್ನಡದಲ್ಲಿ ಏನೂ ಉಳಿಯುವುದಿಲ್ಲ. ಇಂಥ ಸಮ್ಮೇಳನಗಳು ಈ ರೀತಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯಕ್ಕೆ ಸಹಕಾರಿಯಾಗುತ್ತವೆ ಎಂದರು. ಗಡಿಭಾಗದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.<br /> <br /> ಸಮ್ಮೇಳನಾಧ್ಯಕ್ಷರಾದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ ನಾರಾಯಣಪುರದ ಐತಿಹಾಸಿಕ ಹಿನ್ನೆಲೆ ಹೇಳಿದರು. ಈ ಗ್ರಾಮದ ಸುತ್ತಲಿನ ರಸ್ತೆಗಳ ಸುಧಾರಣಾ ಕಾರ್ಯ ನಡೆಯಬೇಕಾಗಿದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗ ಹಿಂದುಳಿದಿದೆ ಎಂದರು.<br /> <br /> ನಂಜುಂಡಪ್ಪ ವರದಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಇನ್ನಷ್ಟು ವಿಸ್ತರಣೆಗೊಳ್ಳಬೇಕು. ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.<br /> <br /> ಉದ್ಘಾಟನೆ ನೆರವೇರಿಸಿದ ಹಾರಕೂಡ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಆಡುವ ಭಾಷೆ ಅಷ್ಟೇ ಅಲ್ಲ, ಆಡಳಿತ ಭಾಷೆ ಕನ್ನಡವಾಗಬೇಕು. ಎಲ್ಲರ ಹೃದಯದಲ್ಲಿ ಈ ಭಾಷೆ ನಲಿನಲಿದಾಡಬೇಕು ಎಂದರು.<br /> ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ ಜಿಲ್ಲೆಯ ಸಾಹಿತಿಗಳು ದೇಶಿ ಭಾಷೆ ಬಳಸಿ ಬರೆಯುತ್ತಿರುವುದು ಸಂತಸಕರ ಸಂಗತಿ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ತಾವು ವಾಸಿಸುವ ಪರಿಸರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ದೂರ ದೂರಕ್ಕೆ ನೋಡದೆ ನಮ್ಮಲ್ಲಿನ ಸಮಸ್ಯೆ -ಸವಾಲುಗಳನ್ನು ಬಿಡಿಸಲು, ನಮ್ಮ ಭಾಗದ ಸಾಹಿತ್ಯದ ಸಂರಕ್ಷಣೆಗೆ ಯತ್ನಿಸಬೇಕಾಗಿದೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ತಾಲ್ಲೂಕಿನ ನಾರಾಯಣಪುರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ವಲಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಲ್ಯಾಣವೆಂದರೆ ವಚನ ಸಾಹಿತ್ಯದ ನೆಲೆ. ವಚನ ಸಾಹಿತ್ಯವನ್ನು ತೆಗೆದರೆ ಕನ್ನಡದಲ್ಲಿ ಏನೂ ಉಳಿಯುವುದಿಲ್ಲ. ಇಂಥ ಸಮ್ಮೇಳನಗಳು ಈ ರೀತಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯಕ್ಕೆ ಸಹಕಾರಿಯಾಗುತ್ತವೆ ಎಂದರು. ಗಡಿಭಾಗದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.<br /> <br /> ಸಮ್ಮೇಳನಾಧ್ಯಕ್ಷರಾದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ ನಾರಾಯಣಪುರದ ಐತಿಹಾಸಿಕ ಹಿನ್ನೆಲೆ ಹೇಳಿದರು. ಈ ಗ್ರಾಮದ ಸುತ್ತಲಿನ ರಸ್ತೆಗಳ ಸುಧಾರಣಾ ಕಾರ್ಯ ನಡೆಯಬೇಕಾಗಿದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗ ಹಿಂದುಳಿದಿದೆ ಎಂದರು.<br /> <br /> ನಂಜುಂಡಪ್ಪ ವರದಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಇನ್ನಷ್ಟು ವಿಸ್ತರಣೆಗೊಳ್ಳಬೇಕು. ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.<br /> <br /> ಉದ್ಘಾಟನೆ ನೆರವೇರಿಸಿದ ಹಾರಕೂಡ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಆಡುವ ಭಾಷೆ ಅಷ್ಟೇ ಅಲ್ಲ, ಆಡಳಿತ ಭಾಷೆ ಕನ್ನಡವಾಗಬೇಕು. ಎಲ್ಲರ ಹೃದಯದಲ್ಲಿ ಈ ಭಾಷೆ ನಲಿನಲಿದಾಡಬೇಕು ಎಂದರು.<br /> ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ ಜಿಲ್ಲೆಯ ಸಾಹಿತಿಗಳು ದೇಶಿ ಭಾಷೆ ಬಳಸಿ ಬರೆಯುತ್ತಿರುವುದು ಸಂತಸಕರ ಸಂಗತಿ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>