<p><span style="font-size: 26px;"><strong>ಬೆಂಗಳೂರು: </strong>ಗಿರಿನಗರ ಬಳಿಯ ಮುನೇಶ್ವರ ಬ್ಲಾಕ್ನಲ್ಲಿ ಭಾನುವಾರ ರಾತ್ರಿ ವಿನಯ್ (22) ಎಂಬ ಯುವಕನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.</span><br /> ಹನುಮಂತನಗರ ಸಮೀಪದ ಗುಟ್ಟಹಳ್ಳಿಯ ವಿನಯ್, ರಸ್ತೆಗೆ ಡಾಂಬರು ಹಾಕುವ ಕೆಲಸ ಮಾಡುತ್ತಿದ್ದ.<br /> <br /> ವಿನಯ್, ಪ್ರದೀಪ್ ಮತ್ತು ಗಣೇಶ್ ಎಂಬ ಸ್ನೇಹಿತರೊಂದಿಗೆ ಶ್ರೀನಗರದ ಬಾರ್ ಒಂದರಲ್ಲಿ ಮಧ್ಯಾಹ್ನ ಮದ್ಯಪಾನ ಮಾಡಿದ್ದ. ನಂತರ ಪ್ರದೀಪ್ನ ಬೈಕ್ ತೆಗೆದುಕೊಂಡು ಹೋಗಿದ್ದ ವಿನಯ್ ಸಂಜೆವರೆಗೂ ವಾಪಸ್ ಬಂದಿರಲಿಲ್ಲ. ಈ ವಿಷಯವಾಗಿ ಅವರ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಪ್ರದೀಪ್, ಸಹಚರರ ಜತೆ ಸೇರಿಕೊಂಡು ಆತನನ್ನು ಆಟೊಗಳಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪ್ರಕರಣ ಸಂಬಂಧ ಪ್ರದೀಪ್, ಆತನ ಸಹಚರರಾದ ದೀಪು, ಶಿವ, ಅಜಯ್, ಗಣೇಶ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.<br /> <br /> <strong>ಯುವಕ ಆತ್ಮಹತ್ಯೆ</strong><br /> ಹೆಣ್ಣೂರು ಸಮೀಪದ ವಡ್ಡರಪಾಳ್ಯದಲ್ಲಿ ನಾಗರಾಜ್ (22) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಡ್ಡರಪಾಳ್ಯ ನಿವಾಸಿ ಮುನಿಯಪ್ಪ ಎಂಬುವರ ಮಗನಾದ ನಾಗರಾಜ್, ಟೈಲರ್ ಆಗಿದ್ದರು. ಮನೆಯ ಸಮೀಪವೇ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಅವರು ಅಂಗಡಿಯಲ್ಲೇ ರಾತ್ರಿ ನೇಣು ಹಾಕಿಕೊಂಡಿದ್ದಾರೆ.<br /> <br /> `ಚೀಟಿ ವ್ಯವಹಾರ ಮಾಡುತ್ತಿದ್ದ ತಮ್ಮ, ನೇತ್ರಾವತಿ ಎಂಬುವರಿಗೆ ್ಙ 10 ಸಾವಿರ ಹಣ ಕೊಡಬೇಕಿತ್ತು. ಈ ವಿಷಯವಾಗಿ ನೇತ್ರಾವತಿ ಮತ್ತು ಅವರ ಸಂಬಂಧಿಕ ಕೇಶವ ಅವರು ರಾತ್ರಿ ಮನೆಯ ಬಳಿ ಬಂದು ತಮ್ಮನ ಜತೆ ಜಗಳವಾಡಿದರು. ಆಗ ಜಗಳ ವಿಕೋಪಕ್ಕೆ ತಿರುಗಿ ನೇತ್ರಾವತಿ ಅವರು ತಮ್ಮನಿಗೆ ಚಪ್ಪಲಿಯಿಂದ ಹೊಡೆದಿದ್ದರು.</p>.<p>ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ನಾಗರಾಜ್ ಅವರ ಅಣ್ಣ ಆಂಜನಪ್ಪ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.<br /> ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೆಣ್ಣೂರು ಪೊಲೀಸರು ನೇತ್ರಾವತಿ ಮತ್ತು ಕೇಶವ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬೆಂಗಳೂರು: </strong>ಗಿರಿನಗರ ಬಳಿಯ ಮುನೇಶ್ವರ ಬ್ಲಾಕ್ನಲ್ಲಿ ಭಾನುವಾರ ರಾತ್ರಿ ವಿನಯ್ (22) ಎಂಬ ಯುವಕನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.</span><br /> ಹನುಮಂತನಗರ ಸಮೀಪದ ಗುಟ್ಟಹಳ್ಳಿಯ ವಿನಯ್, ರಸ್ತೆಗೆ ಡಾಂಬರು ಹಾಕುವ ಕೆಲಸ ಮಾಡುತ್ತಿದ್ದ.<br /> <br /> ವಿನಯ್, ಪ್ರದೀಪ್ ಮತ್ತು ಗಣೇಶ್ ಎಂಬ ಸ್ನೇಹಿತರೊಂದಿಗೆ ಶ್ರೀನಗರದ ಬಾರ್ ಒಂದರಲ್ಲಿ ಮಧ್ಯಾಹ್ನ ಮದ್ಯಪಾನ ಮಾಡಿದ್ದ. ನಂತರ ಪ್ರದೀಪ್ನ ಬೈಕ್ ತೆಗೆದುಕೊಂಡು ಹೋಗಿದ್ದ ವಿನಯ್ ಸಂಜೆವರೆಗೂ ವಾಪಸ್ ಬಂದಿರಲಿಲ್ಲ. ಈ ವಿಷಯವಾಗಿ ಅವರ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಪ್ರದೀಪ್, ಸಹಚರರ ಜತೆ ಸೇರಿಕೊಂಡು ಆತನನ್ನು ಆಟೊಗಳಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪ್ರಕರಣ ಸಂಬಂಧ ಪ್ರದೀಪ್, ಆತನ ಸಹಚರರಾದ ದೀಪು, ಶಿವ, ಅಜಯ್, ಗಣೇಶ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.<br /> <br /> <strong>ಯುವಕ ಆತ್ಮಹತ್ಯೆ</strong><br /> ಹೆಣ್ಣೂರು ಸಮೀಪದ ವಡ್ಡರಪಾಳ್ಯದಲ್ಲಿ ನಾಗರಾಜ್ (22) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಡ್ಡರಪಾಳ್ಯ ನಿವಾಸಿ ಮುನಿಯಪ್ಪ ಎಂಬುವರ ಮಗನಾದ ನಾಗರಾಜ್, ಟೈಲರ್ ಆಗಿದ್ದರು. ಮನೆಯ ಸಮೀಪವೇ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಅವರು ಅಂಗಡಿಯಲ್ಲೇ ರಾತ್ರಿ ನೇಣು ಹಾಕಿಕೊಂಡಿದ್ದಾರೆ.<br /> <br /> `ಚೀಟಿ ವ್ಯವಹಾರ ಮಾಡುತ್ತಿದ್ದ ತಮ್ಮ, ನೇತ್ರಾವತಿ ಎಂಬುವರಿಗೆ ್ಙ 10 ಸಾವಿರ ಹಣ ಕೊಡಬೇಕಿತ್ತು. ಈ ವಿಷಯವಾಗಿ ನೇತ್ರಾವತಿ ಮತ್ತು ಅವರ ಸಂಬಂಧಿಕ ಕೇಶವ ಅವರು ರಾತ್ರಿ ಮನೆಯ ಬಳಿ ಬಂದು ತಮ್ಮನ ಜತೆ ಜಗಳವಾಡಿದರು. ಆಗ ಜಗಳ ವಿಕೋಪಕ್ಕೆ ತಿರುಗಿ ನೇತ್ರಾವತಿ ಅವರು ತಮ್ಮನಿಗೆ ಚಪ್ಪಲಿಯಿಂದ ಹೊಡೆದಿದ್ದರು.</p>.<p>ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ನಾಗರಾಜ್ ಅವರ ಅಣ್ಣ ಆಂಜನಪ್ಪ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.<br /> ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೆಣ್ಣೂರು ಪೊಲೀಸರು ನೇತ್ರಾವತಿ ಮತ್ತು ಕೇಶವ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>