<p>ಭಾರತದ ಸಂಸತ್ತು ಅನೇಕ ಉತ್ತಮ ಸಂಸದರನ್ನು ಕಂಡಿದೆ. ಅದಲ್ಲಿ ಕೆಲವರು ಸಂಸತ್ತಿನ ಆರಂಭದ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಿದವರು. ಅಂಥವರಲ್ಲಿ ಒಬ್ಬರು ಎಂ.ಅನಂತಶಯನಂ ಅಯ್ಯಂಗಾರ್(1891–1978). ಮೊದಲೆರಡು ಲೋಕಸಭೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.<br /> <br /> ಗಾಂಧೀಜಿಯವರ ಅನುಯಾಯಿಯಾಗಿದ್ದ ಸಮಾಜವಾದಿ ಸಿದ್ಧಾಂತದ ಅನಂತಶಯನಂ, ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದರು. ಮುಂದೆ ದೇಶ ಸ್ವತಂತ್ರವಾದ ಮೇಲೆ 1952 ರಲ್ಲಿ ಸಂಸತ್ನ ಮೊದಲ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಆಗ ಗಣೇಶ ವಾಸುದೇವ್ ಮಾವಳಂಕರ್ ಸ್ಪೀಕರ್ ಆಗಿದ್ದರು.<br /> <br /> ಮುಂದೆ 1956ರಲ್ಲಿ ಅನಂತಶಯನಂ ಅವರು ಲೋಕಸಭೆಯ ಸ್ಪೀಕರ್ ಆದರು. ಅವರು ಮೊದಲೆರಡು ಲೋಕಸಭೆಗಳಿಗೆ ಕ್ರಮವಾಗಿ ತಿರುಪತಿ ಮತ್ತು ಚಿತ್ತೂರ್ ನಿಂದ ಆಯ್ಕೆಯಾಗಿದ್ದರು.<br /> <br /> ಡೆಪ್ಯುಟಿ ಸ್ಪೀಕರ್ ಸ್ಥಾನದಲ್ಲಿ ದ್ವಿಪಾತ್ರಾಭಿನಯ ಮಾಡಬೇಕಾಗುತ್ತದೆ. ಕೆಲವು ಸಲ ತಮ್ಮ ಪಕ್ಷದ ಪರ ಮಾತನಾಡಿ ನಂತರ ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ಅನೇಕ ಉತ್ತಮ ನಡವಳಿಕೆಗಳನ್ನು ಜಾರಿಗೆ ತಂದರು. ಈ ಹುದ್ದೆಗೆ ಬಂದ ನಂತರ ಮಾಡಿದ ಮೊದಲ ಭಾಷಣದಲ್ಲಿ ಅವರು ‘ಎಲ್ಲ ಪಕ್ಷಗಳ ನಡುವೆ ಸಹಕಾರ ಭಾವನೆ ಇರಬೇಕು ಮತ್ತು ಅವು ಜಗಳ ಆಡಬೇಕಾಗಿ ಬಂದಾಗ ದ್ವೇಷ, ವೈಷಮ್ಯದ ಸೋಂಕು ಇರಬಾರದು.<br /> ಮನಸ್ಸಿಗೆ ತುಂಬಾ ಹಚ್ಚಿಕೊಳ್ಳದೆ, ನಿರಾಶೆಯನ್ನು ಸಹಿಸಿಕೊಳ್ಳುವ ಉದಾರ ಭಾವನೆ ಇರಬೇಕು. ಈ ಬಗೆಯ ಸ್ವಭಾವ ಜನತಂತ್ರದ ಬೆಳವಣಿಗೆಗೆ ಸದಾ ಅನುಕೂಲಕರ’ ಎಂದಿದ್ದರು.<br /> <br /> ಅವರು ಆರಂಭಿಸಿದ ಒಂದು ಮುಖ್ಯ ಸಂಪ್ರದಾಯವೆಂದರೆ, ಪ್ರಶ್ನೆಗಳಿಗೆ ಸಂಬಂಧಿಸಿದ್ದು. ಸದನದಲ್ಲಿ ಅವರು ಕೆಲವು ಸದಸ್ಯರನ್ನು ಪ್ರಶ್ನೆ ಕೇಳಲು ಕರೆಯಬೇಕಿತ್ತು. ಪ್ರಶ್ನೆ ಕೇಳಬೇಕಾದ ಆ ಸದಸ್ಯರು ಅಧಿವೇಶನಕ್ಕೆ ಬರಲಾಗುವುದಿಲ್ಲವೆಂದು ಅನುಮತಿ ಕೇಳಿದ್ದರೂ ಅಥವಾ ವಿದೇಶ ಪ್ರವಾಸದಲ್ಲಿದ್ದರೂ ಅಂಥವರ ಹೆಸರು ಕಡ್ಡಾಯವಾಗಿ ಕರೆಯಬೇಕಿತ್ತು. ಪ್ರಶ್ನೆ ಕೇಳಿದವರೇ ಇಲ್ಲವೆಂದ ಮೇಲೆ ಆ ಪ್ರಶ್ನೆ ಎತ್ತಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಅನಂತಶಯನಂ ಭಾವಿಸಿದರು. ಅಂಥ ಸದಸ್ಯರ ಪ್ರಶ್ನೆಗಳನ್ನು ಲಿಖಿತವಾಗಿ ಉತ್ತರಿಸುವ ಪ್ರಶ್ನೆಗಳ ಪಟ್ಟಿಗೆ ಸೇರಿಸುವಂತೆ ಮಾಡಿದರು.<br /> <br /> ರಾಷ್ಟ್ರಪತಿಯವರ ಸಂದೇಶವನ್ನು ಸದಸ್ಯರಿಗೆ ಓದಿ ಹೇಳುವಾಗ, ಸದನದಲ್ಲಿರುವ ಸದಸ್ಯರು ತಮ್ಮ ತಮ್ಮ ಸ್ಥಳದಲ್ಲೇ ಎದ್ದು ನಿಂತು ಗೌರವ ಸೂಚಿಸುವ ಹೊಸ ಸಂಪ್ರದಾಯ ವನ್ನು ಅನಂತಶಯನಂ ಆರಂಭಿಸಿದರು. 1957ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತದ ಸಂಸತ್ತು ಅನೇಕ ಉತ್ತಮ ಸಂಸದರನ್ನು ಕಂಡಿದೆ. ಅದಲ್ಲಿ ಕೆಲವರು ಸಂಸತ್ತಿನ ಆರಂಭದ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಿದವರು. ಅಂಥವರಲ್ಲಿ ಒಬ್ಬರು ಎಂ.ಅನಂತಶಯನಂ ಅಯ್ಯಂಗಾರ್(1891–1978). ಮೊದಲೆರಡು ಲೋಕಸಭೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.<br /> <br /> ಗಾಂಧೀಜಿಯವರ ಅನುಯಾಯಿಯಾಗಿದ್ದ ಸಮಾಜವಾದಿ ಸಿದ್ಧಾಂತದ ಅನಂತಶಯನಂ, ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದರು. ಮುಂದೆ ದೇಶ ಸ್ವತಂತ್ರವಾದ ಮೇಲೆ 1952 ರಲ್ಲಿ ಸಂಸತ್ನ ಮೊದಲ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಆಗ ಗಣೇಶ ವಾಸುದೇವ್ ಮಾವಳಂಕರ್ ಸ್ಪೀಕರ್ ಆಗಿದ್ದರು.<br /> <br /> ಮುಂದೆ 1956ರಲ್ಲಿ ಅನಂತಶಯನಂ ಅವರು ಲೋಕಸಭೆಯ ಸ್ಪೀಕರ್ ಆದರು. ಅವರು ಮೊದಲೆರಡು ಲೋಕಸಭೆಗಳಿಗೆ ಕ್ರಮವಾಗಿ ತಿರುಪತಿ ಮತ್ತು ಚಿತ್ತೂರ್ ನಿಂದ ಆಯ್ಕೆಯಾಗಿದ್ದರು.<br /> <br /> ಡೆಪ್ಯುಟಿ ಸ್ಪೀಕರ್ ಸ್ಥಾನದಲ್ಲಿ ದ್ವಿಪಾತ್ರಾಭಿನಯ ಮಾಡಬೇಕಾಗುತ್ತದೆ. ಕೆಲವು ಸಲ ತಮ್ಮ ಪಕ್ಷದ ಪರ ಮಾತನಾಡಿ ನಂತರ ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ಅನೇಕ ಉತ್ತಮ ನಡವಳಿಕೆಗಳನ್ನು ಜಾರಿಗೆ ತಂದರು. ಈ ಹುದ್ದೆಗೆ ಬಂದ ನಂತರ ಮಾಡಿದ ಮೊದಲ ಭಾಷಣದಲ್ಲಿ ಅವರು ‘ಎಲ್ಲ ಪಕ್ಷಗಳ ನಡುವೆ ಸಹಕಾರ ಭಾವನೆ ಇರಬೇಕು ಮತ್ತು ಅವು ಜಗಳ ಆಡಬೇಕಾಗಿ ಬಂದಾಗ ದ್ವೇಷ, ವೈಷಮ್ಯದ ಸೋಂಕು ಇರಬಾರದು.<br /> ಮನಸ್ಸಿಗೆ ತುಂಬಾ ಹಚ್ಚಿಕೊಳ್ಳದೆ, ನಿರಾಶೆಯನ್ನು ಸಹಿಸಿಕೊಳ್ಳುವ ಉದಾರ ಭಾವನೆ ಇರಬೇಕು. ಈ ಬಗೆಯ ಸ್ವಭಾವ ಜನತಂತ್ರದ ಬೆಳವಣಿಗೆಗೆ ಸದಾ ಅನುಕೂಲಕರ’ ಎಂದಿದ್ದರು.<br /> <br /> ಅವರು ಆರಂಭಿಸಿದ ಒಂದು ಮುಖ್ಯ ಸಂಪ್ರದಾಯವೆಂದರೆ, ಪ್ರಶ್ನೆಗಳಿಗೆ ಸಂಬಂಧಿಸಿದ್ದು. ಸದನದಲ್ಲಿ ಅವರು ಕೆಲವು ಸದಸ್ಯರನ್ನು ಪ್ರಶ್ನೆ ಕೇಳಲು ಕರೆಯಬೇಕಿತ್ತು. ಪ್ರಶ್ನೆ ಕೇಳಬೇಕಾದ ಆ ಸದಸ್ಯರು ಅಧಿವೇಶನಕ್ಕೆ ಬರಲಾಗುವುದಿಲ್ಲವೆಂದು ಅನುಮತಿ ಕೇಳಿದ್ದರೂ ಅಥವಾ ವಿದೇಶ ಪ್ರವಾಸದಲ್ಲಿದ್ದರೂ ಅಂಥವರ ಹೆಸರು ಕಡ್ಡಾಯವಾಗಿ ಕರೆಯಬೇಕಿತ್ತು. ಪ್ರಶ್ನೆ ಕೇಳಿದವರೇ ಇಲ್ಲವೆಂದ ಮೇಲೆ ಆ ಪ್ರಶ್ನೆ ಎತ್ತಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಅನಂತಶಯನಂ ಭಾವಿಸಿದರು. ಅಂಥ ಸದಸ್ಯರ ಪ್ರಶ್ನೆಗಳನ್ನು ಲಿಖಿತವಾಗಿ ಉತ್ತರಿಸುವ ಪ್ರಶ್ನೆಗಳ ಪಟ್ಟಿಗೆ ಸೇರಿಸುವಂತೆ ಮಾಡಿದರು.<br /> <br /> ರಾಷ್ಟ್ರಪತಿಯವರ ಸಂದೇಶವನ್ನು ಸದಸ್ಯರಿಗೆ ಓದಿ ಹೇಳುವಾಗ, ಸದನದಲ್ಲಿರುವ ಸದಸ್ಯರು ತಮ್ಮ ತಮ್ಮ ಸ್ಥಳದಲ್ಲೇ ಎದ್ದು ನಿಂತು ಗೌರವ ಸೂಚಿಸುವ ಹೊಸ ಸಂಪ್ರದಾಯ ವನ್ನು ಅನಂತಶಯನಂ ಆರಂಭಿಸಿದರು. 1957ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>