<p><strong>ಬೆಂಗಳೂರು</strong>: ದೆಹಲಿಯಲ್ಲಿ ಬಾಂಬ್ ಸ್ಫೋಟದ ನಂತರ ಇಲ್ಲಿಯ ಹೈಕೋರ್ಟ್ನಲ್ಲಿಯೂ ಗುರುವಾರ ಆತಂಕದ ವಾತಾವರಣ ಕಂಡುಬಂತು. ಸುದ್ದಿ ಕಾಳ್ಗಿಚ್ಚಿನಂತೆ ಕೋರ್ಟ್ನಲ್ಲಿ ಹರಡುತ್ತಲೇ, ಟಿ.ವಿ. ವೀಕ್ಷಿಸಲು ವಕೀಲರು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದರು.<br /> <br /> ಇನ್ನೊಂದೆಡೆ, ಕೋರ್ಟ್ ಆವರಣದಲ್ಲಿ ತಕ್ಷಣ ಜಮಾಯಿಸಿದ ಕೆಲ ವಕೀಲರು ರಾಜ್ಯದಲ್ಲಿನ ಎಲ್ಲ ಕೋರ್ಟ್ಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದರು.<br /> <br /> `ಹೈಕೋರ್ಟ್ನಲ್ಲಿ ಈಗ ಇರುವ ಭದ್ರತೆ ಸಾಲದು. ಅಧೀನ ಕೋರ್ಟ್ಗಳಲ್ಲಿ ಕನಿಷ್ಠ ಭದ್ರತೆಯೂ ಇಲ್ಲ. ಇದೇ ರೀತಿ ರಾಜ್ಯದಲ್ಲಿನ ಇತರ ಕೋರ್ಟ್ಗಳ ಪರಿಸ್ಥಿತಿಯೂ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಸೂಕ್ತ ರಕ್ಷಣೆ ಅಗತ್ಯ~ ಎಂದು ಅವರು ಹೇಳಿದರು.<br /> <br /> ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು, `ಹೈಕೋರ್ಟ್ ಮಟ್ಟಿಗೆ ಹೇಳುವುದಾದರೆ ಈಗಾಗಲೇ ಸಾಕಷ್ಟು ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. <br /> <br /> ಪೊಲೀಸರಿಗೆ ವಕೀಲರು ಸಹಕರಿಸುವುದು ಮುಖ್ಯ. ಬಾಂಬ್ ಸ್ಫೋಟದಂತಹ ಕೃತ್ಯ ಯಾವಾಗ ಎಲ್ಲಿ ಬೇಕಾದರೂ ಆಗಬಹುದು. ಎಲ್ಲೋ ಬಾಂಬ್ ಸ್ಫೋಟ ಆಗಿದೆ ಎಂಬ ಸುದ್ದಿ ತಿಳಿದ ಕ್ಷಣದಲ್ಲಿ ಮಾತ್ರ ಎಚ್ಚರಿಕೆ ವಹಿಸುವುದು ಬಿಟ್ಟು, ಸದಾ ಭದ್ರತೆಗೆ ಎಲ್ಲರ ಸಹಕಾರ ಅಗತ್ಯ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೆಹಲಿಯಲ್ಲಿ ಬಾಂಬ್ ಸ್ಫೋಟದ ನಂತರ ಇಲ್ಲಿಯ ಹೈಕೋರ್ಟ್ನಲ್ಲಿಯೂ ಗುರುವಾರ ಆತಂಕದ ವಾತಾವರಣ ಕಂಡುಬಂತು. ಸುದ್ದಿ ಕಾಳ್ಗಿಚ್ಚಿನಂತೆ ಕೋರ್ಟ್ನಲ್ಲಿ ಹರಡುತ್ತಲೇ, ಟಿ.ವಿ. ವೀಕ್ಷಿಸಲು ವಕೀಲರು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದರು.<br /> <br /> ಇನ್ನೊಂದೆಡೆ, ಕೋರ್ಟ್ ಆವರಣದಲ್ಲಿ ತಕ್ಷಣ ಜಮಾಯಿಸಿದ ಕೆಲ ವಕೀಲರು ರಾಜ್ಯದಲ್ಲಿನ ಎಲ್ಲ ಕೋರ್ಟ್ಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದರು.<br /> <br /> `ಹೈಕೋರ್ಟ್ನಲ್ಲಿ ಈಗ ಇರುವ ಭದ್ರತೆ ಸಾಲದು. ಅಧೀನ ಕೋರ್ಟ್ಗಳಲ್ಲಿ ಕನಿಷ್ಠ ಭದ್ರತೆಯೂ ಇಲ್ಲ. ಇದೇ ರೀತಿ ರಾಜ್ಯದಲ್ಲಿನ ಇತರ ಕೋರ್ಟ್ಗಳ ಪರಿಸ್ಥಿತಿಯೂ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಸೂಕ್ತ ರಕ್ಷಣೆ ಅಗತ್ಯ~ ಎಂದು ಅವರು ಹೇಳಿದರು.<br /> <br /> ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು, `ಹೈಕೋರ್ಟ್ ಮಟ್ಟಿಗೆ ಹೇಳುವುದಾದರೆ ಈಗಾಗಲೇ ಸಾಕಷ್ಟು ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. <br /> <br /> ಪೊಲೀಸರಿಗೆ ವಕೀಲರು ಸಹಕರಿಸುವುದು ಮುಖ್ಯ. ಬಾಂಬ್ ಸ್ಫೋಟದಂತಹ ಕೃತ್ಯ ಯಾವಾಗ ಎಲ್ಲಿ ಬೇಕಾದರೂ ಆಗಬಹುದು. ಎಲ್ಲೋ ಬಾಂಬ್ ಸ್ಫೋಟ ಆಗಿದೆ ಎಂಬ ಸುದ್ದಿ ತಿಳಿದ ಕ್ಷಣದಲ್ಲಿ ಮಾತ್ರ ಎಚ್ಚರಿಕೆ ವಹಿಸುವುದು ಬಿಟ್ಟು, ಸದಾ ಭದ್ರತೆಗೆ ಎಲ್ಲರ ಸಹಕಾರ ಅಗತ್ಯ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>