<p><strong>ಕೊಲ್ಹಾರ: </strong>ಗ್ರಾಮದಲ್ಲಿನ ಸ್ಮಶಾನದಲ್ಲಿನ ಯುವತಿಯೊಬ್ಬಳ ಶವ ನಾಪತ್ತೆಯಾದ ಘಟನೆ ನಡೆದಿದೆ.<br /> ಈ ಮಹಿಳೆ (24) ಅನಾರೋಗ್ಯ ದಿಂದ ಬಳಲುತ್ತಿದ್ದು ವಿಜಾಪುರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶನಿವಾರ ರಾತ್ರಿ ಈಕೆ ನಿಧನ ಹೊಂದಿದಳು. ಭಾನುವಾರ ಕೊಲ್ಹಾರ ಗ್ರಾಮದಲ್ಲಿ ಮಧ್ಯಾಹ್ನ ಶವಸಂಸ್ಕಾರ ನೆರವೇರಿಸಲಾಗಿತ್ತು. <br /> <br /> ಮೂರು ದಿನದ ಕಾರ್ಯ ನೆರವೇರಿಸಿ ಹೂವು ಹಾಕಿ ಬರಲು ಮಂಗಳವಾರ ಕುಟುಂಬ ಸದಸ್ಯರು ಸ್ಮಶಾನಕ್ಕೆ ತೆರಳಿದ್ದರು. ಆದರೆ ಗೋರಿ ಅಗೆದು ಶವ ತೆಗೆದುಕೊಂಡು ಹೋಗಿರುವುದು ಕಂಡುಬಂತು.ಶವಕ್ಕೆ ಸುತ್ತಿದ್ದ ಬಟ್ಟೆ, ಹೂವುಗಳನ್ನು ಗೋರಿಯಲ್ಲಿ ಬಿಟ್ಟು, ಕೇವಲ ಶವ ತೆಗೆದುಕೊಂಡು ಹೋಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.<br /> <br /> ಮಾಟ ಮಾಡುವ ಮಂತ್ರವಾದಿಗಳ ಕೈವಾಡ ಇರಬಹುದು ಇಲ್ಲವೇ ವೈದ್ಯ ಕೀಯ ಸಂಶೋಧನೆಗಳಿಗೆ ಬಳಸಲು ಶವವನ್ನು ಹೊತ್ತು ಒಯ್ದಿರಬಹುದು ಎಂದು ಗ್ರಾಮದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಹಾರ: </strong>ಗ್ರಾಮದಲ್ಲಿನ ಸ್ಮಶಾನದಲ್ಲಿನ ಯುವತಿಯೊಬ್ಬಳ ಶವ ನಾಪತ್ತೆಯಾದ ಘಟನೆ ನಡೆದಿದೆ.<br /> ಈ ಮಹಿಳೆ (24) ಅನಾರೋಗ್ಯ ದಿಂದ ಬಳಲುತ್ತಿದ್ದು ವಿಜಾಪುರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶನಿವಾರ ರಾತ್ರಿ ಈಕೆ ನಿಧನ ಹೊಂದಿದಳು. ಭಾನುವಾರ ಕೊಲ್ಹಾರ ಗ್ರಾಮದಲ್ಲಿ ಮಧ್ಯಾಹ್ನ ಶವಸಂಸ್ಕಾರ ನೆರವೇರಿಸಲಾಗಿತ್ತು. <br /> <br /> ಮೂರು ದಿನದ ಕಾರ್ಯ ನೆರವೇರಿಸಿ ಹೂವು ಹಾಕಿ ಬರಲು ಮಂಗಳವಾರ ಕುಟುಂಬ ಸದಸ್ಯರು ಸ್ಮಶಾನಕ್ಕೆ ತೆರಳಿದ್ದರು. ಆದರೆ ಗೋರಿ ಅಗೆದು ಶವ ತೆಗೆದುಕೊಂಡು ಹೋಗಿರುವುದು ಕಂಡುಬಂತು.ಶವಕ್ಕೆ ಸುತ್ತಿದ್ದ ಬಟ್ಟೆ, ಹೂವುಗಳನ್ನು ಗೋರಿಯಲ್ಲಿ ಬಿಟ್ಟು, ಕೇವಲ ಶವ ತೆಗೆದುಕೊಂಡು ಹೋಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.<br /> <br /> ಮಾಟ ಮಾಡುವ ಮಂತ್ರವಾದಿಗಳ ಕೈವಾಡ ಇರಬಹುದು ಇಲ್ಲವೇ ವೈದ್ಯ ಕೀಯ ಸಂಶೋಧನೆಗಳಿಗೆ ಬಳಸಲು ಶವವನ್ನು ಹೊತ್ತು ಒಯ್ದಿರಬಹುದು ಎಂದು ಗ್ರಾಮದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>