<p> ಮಧುಗಿರಿ: ದಲಿತರಿಗೆ ಸ್ಮಶಾನ ಭೂಮಿ ಇರುವವರನ್ನು ಬೇಡಿ ಶವಸಂಸ್ಕಾರ ಮಾಡಬೇಕಾಗಿದ್ದು, ಕೂಡಲೇ ಸ್ಮಶಾನ ಸ್ಥಳ ನೀಡಬೇಕೆಂದು ಒತ್ತಾಯಿಸಿ ದಲಿತ ಸಮುದಾಯದವರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.<br /> <br /> ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ತಾಲ್ಲೂಕು ಸಂಚಾಲಕ ಜಿ.ಸಿ.ತಿಮ್ಮಯ್ಯ ಮಾತನಾಡಿ, ರುದ್ರಭೂಮಿ ಇಲ್ಲದ ಗ್ರಾಮಗಳಿಗೆ ಸರ್ಕಾರದಿಂದ ಶಾಶ್ವತ ರುದ್ರಭೂಮಿ ಕಾಯ್ದಿರಿಸಬೇಕು. ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿದರು.<br /> <br /> ಇದಕ್ಕು ಮುನ್ನ ಪುರಭವನದಿಂದ ಹೊರಟ ದಲಿತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.<br /> <br /> ವಿವಿಧ ಗ್ರಾಮಗಳ ಮುಖಂಡರಾದ ಎನ್.ನಾಗರಾಜು, ಪಿ.ಸಿ.ನಾಗಭೂಷಣ್, ಎಂ.ಮಹೇಶ್, ಬ್ರಹ್ಮಸಮುದ್ರ ಕರಿಯಣ್ಣ, ದೊಡ್ಡಮಾಲೂರು ಹನುಮಂತರಾಯಪ್ಪ, ತಿಪ್ಪಾಪುರ ಶ್ರೀರಾಮಪ್ಪ, ಬೆಲ್ಲದಮಡು ಸಿದ್ದಗಂಗಯ್ಯ, ಕಸಾಪುರ ದಾನಪ್ಪ, ಮಾಯಗೊಮಡನಹಳ್ಳಿ ರಂಗನಾಥ, ಕಾಟಗೊಂಡನಹಳ್ಳಿಮಂಜುನಾಥ,ತಿಪ್ಪಾಪುರನಾಗರತ್ನಮ್ಮಪುರವರಪುಟ್ಟಣ್ಣ,ಗೋಪಗೊಂಡನಹಳ್ಳಿ ಮಲೇರಂಗಯ್ಯ, ಬೆಂಕಿಪುರ ಸಿದ್ದಪ್ಪ, ಗೂಬಲಗುಟ್ಟೆ ಅಂಜಿನಪ್ಪ, ಕಂಬದಹಳ್ಳಿ ರಾಮಕೃಷ್ಣಯ್ಯ,ರೆಡ್ಡಿಹಳ್ಳಿನಾಗರಾಜು,ನೀರಕಲ್ಲುನರಸಿಂಹಯ್ಯ,ಶ್ರಾವಂಡನಹಳ್ಳಿಸಿದ್ದಲಿಂಗಯ್ಯ,ಗಂಜಲಗುಂಟೆ ಅಂಜಿನಪ್ಪ, ಕವಣದಾಲ ಕಣಿಮಯ್ಯ, ಮುದ್ದಹನುಮಯ್ಯ, ಈಶ್ವರಪ್ಪ ಮತ್ತಿತರರು ಪ್ರತಿಭಟನೆನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಮಧುಗಿರಿ: ದಲಿತರಿಗೆ ಸ್ಮಶಾನ ಭೂಮಿ ಇರುವವರನ್ನು ಬೇಡಿ ಶವಸಂಸ್ಕಾರ ಮಾಡಬೇಕಾಗಿದ್ದು, ಕೂಡಲೇ ಸ್ಮಶಾನ ಸ್ಥಳ ನೀಡಬೇಕೆಂದು ಒತ್ತಾಯಿಸಿ ದಲಿತ ಸಮುದಾಯದವರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.<br /> <br /> ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ತಾಲ್ಲೂಕು ಸಂಚಾಲಕ ಜಿ.ಸಿ.ತಿಮ್ಮಯ್ಯ ಮಾತನಾಡಿ, ರುದ್ರಭೂಮಿ ಇಲ್ಲದ ಗ್ರಾಮಗಳಿಗೆ ಸರ್ಕಾರದಿಂದ ಶಾಶ್ವತ ರುದ್ರಭೂಮಿ ಕಾಯ್ದಿರಿಸಬೇಕು. ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿದರು.<br /> <br /> ಇದಕ್ಕು ಮುನ್ನ ಪುರಭವನದಿಂದ ಹೊರಟ ದಲಿತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.<br /> <br /> ವಿವಿಧ ಗ್ರಾಮಗಳ ಮುಖಂಡರಾದ ಎನ್.ನಾಗರಾಜು, ಪಿ.ಸಿ.ನಾಗಭೂಷಣ್, ಎಂ.ಮಹೇಶ್, ಬ್ರಹ್ಮಸಮುದ್ರ ಕರಿಯಣ್ಣ, ದೊಡ್ಡಮಾಲೂರು ಹನುಮಂತರಾಯಪ್ಪ, ತಿಪ್ಪಾಪುರ ಶ್ರೀರಾಮಪ್ಪ, ಬೆಲ್ಲದಮಡು ಸಿದ್ದಗಂಗಯ್ಯ, ಕಸಾಪುರ ದಾನಪ್ಪ, ಮಾಯಗೊಮಡನಹಳ್ಳಿ ರಂಗನಾಥ, ಕಾಟಗೊಂಡನಹಳ್ಳಿಮಂಜುನಾಥ,ತಿಪ್ಪಾಪುರನಾಗರತ್ನಮ್ಮಪುರವರಪುಟ್ಟಣ್ಣ,ಗೋಪಗೊಂಡನಹಳ್ಳಿ ಮಲೇರಂಗಯ್ಯ, ಬೆಂಕಿಪುರ ಸಿದ್ದಪ್ಪ, ಗೂಬಲಗುಟ್ಟೆ ಅಂಜಿನಪ್ಪ, ಕಂಬದಹಳ್ಳಿ ರಾಮಕೃಷ್ಣಯ್ಯ,ರೆಡ್ಡಿಹಳ್ಳಿನಾಗರಾಜು,ನೀರಕಲ್ಲುನರಸಿಂಹಯ್ಯ,ಶ್ರಾವಂಡನಹಳ್ಳಿಸಿದ್ದಲಿಂಗಯ್ಯ,ಗಂಜಲಗುಂಟೆ ಅಂಜಿನಪ್ಪ, ಕವಣದಾಲ ಕಣಿಮಯ್ಯ, ಮುದ್ದಹನುಮಯ್ಯ, ಈಶ್ವರಪ್ಪ ಮತ್ತಿತರರು ಪ್ರತಿಭಟನೆನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>