<p><strong>ಕಾರ್ಕಳ: `</strong>ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನವಪೀಳಿಗೆಯ ಪಾತ್ರ ಮಹತ್ವದ್ದು~ ಎಂದು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3180ಯ ಗವರ್ನರ್ ಎಚ್.ಎಲ್.ರವಿ ತಿಳಿಸಿದರು.<br /> <br /> ಇಲ್ಲಿನ ರೋಟರಿ ಕ್ಲಬ್ಗೆ ಇತ್ತೀಚೆಗೆ ಅಧಿಕೃತ ಸಂದರ್ಶನ ನೀಡಿದ ಅವರು ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜದಲ್ಲಿ ಆವರಿಸಿದ ಭ್ರಷ್ಟಾಚಾರ, ಅನಿಷ್ಟಗಳ ನಿರ್ಮೂಲನ, ಸ್ವಸ್ಥ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಯುವಕರು ಪ್ರಯತ್ನಶೀಲರಾಗಬೇಕು. <br /> <br /> ಅಣ್ಣಾಹಜಾರೆಯವರ ಹೋರಾಟ ಗಾಂಧಿತತ್ವಗಳನ್ನು ಪುನಶ್ಚೇತನಗೊಳಿಸಿದೆ. ಇದರ ಪರಿಣಾಮವಾಗಿ ಯುವಜನತೆ ಹಾಗೂ ಪ್ರಜ್ಞಾವಂತ ನಾಗರಿಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆಗಾರಿಕೆಯನ್ನು ಜಾಗೃತಗೊಳಿಸಿದಂತಾಗಿದೆ ಎಂದರು.<br /> <br /> ರೋಟರಿ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್ ಕ್ಲಬ್ ಪತ್ರಿಕೆ `ಸರ್ವಿಸ್~ ಅನಾವರಣಗೊಳಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಲಯ ಸೇನಾನಿ ಎಂ.ಜಿ.ನಾಗೇಂದ್ರ ಕ್ಲಬ್ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು. <br /> <br /> ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಆಚಾರ್ಯ, ಪ್ರಭಾತ್ಕುಮಾರ್, ಭರತ್ರಾಜ್, ಮಾಜಿ ಸಹಾಯಕ ಗವರ್ನರ್ ಎಂ.ಎನ್.ಧನಕೀರ್ತಿ, ಕಾರ್ಯದರ್ಶಿ ಡಿ.ಸಿ ಶಾಂತಪ್ಪ, ಮೋಹನ್ ಪಡಿವಾಳ್, ಜ್ಯೋತಿ ಪದ್ಮನಾಭ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ: `</strong>ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನವಪೀಳಿಗೆಯ ಪಾತ್ರ ಮಹತ್ವದ್ದು~ ಎಂದು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3180ಯ ಗವರ್ನರ್ ಎಚ್.ಎಲ್.ರವಿ ತಿಳಿಸಿದರು.<br /> <br /> ಇಲ್ಲಿನ ರೋಟರಿ ಕ್ಲಬ್ಗೆ ಇತ್ತೀಚೆಗೆ ಅಧಿಕೃತ ಸಂದರ್ಶನ ನೀಡಿದ ಅವರು ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜದಲ್ಲಿ ಆವರಿಸಿದ ಭ್ರಷ್ಟಾಚಾರ, ಅನಿಷ್ಟಗಳ ನಿರ್ಮೂಲನ, ಸ್ವಸ್ಥ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಯುವಕರು ಪ್ರಯತ್ನಶೀಲರಾಗಬೇಕು. <br /> <br /> ಅಣ್ಣಾಹಜಾರೆಯವರ ಹೋರಾಟ ಗಾಂಧಿತತ್ವಗಳನ್ನು ಪುನಶ್ಚೇತನಗೊಳಿಸಿದೆ. ಇದರ ಪರಿಣಾಮವಾಗಿ ಯುವಜನತೆ ಹಾಗೂ ಪ್ರಜ್ಞಾವಂತ ನಾಗರಿಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆಗಾರಿಕೆಯನ್ನು ಜಾಗೃತಗೊಳಿಸಿದಂತಾಗಿದೆ ಎಂದರು.<br /> <br /> ರೋಟರಿ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್ ಕ್ಲಬ್ ಪತ್ರಿಕೆ `ಸರ್ವಿಸ್~ ಅನಾವರಣಗೊಳಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಲಯ ಸೇನಾನಿ ಎಂ.ಜಿ.ನಾಗೇಂದ್ರ ಕ್ಲಬ್ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು. <br /> <br /> ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಆಚಾರ್ಯ, ಪ್ರಭಾತ್ಕುಮಾರ್, ಭರತ್ರಾಜ್, ಮಾಜಿ ಸಹಾಯಕ ಗವರ್ನರ್ ಎಂ.ಎನ್.ಧನಕೀರ್ತಿ, ಕಾರ್ಯದರ್ಶಿ ಡಿ.ಸಿ ಶಾಂತಪ್ಪ, ಮೋಹನ್ ಪಡಿವಾಳ್, ಜ್ಯೋತಿ ಪದ್ಮನಾಭ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>