<p>ಒಮ್ಮಮ್ಮೆ ಹೀಗೂ ಆಗಿ ಬಿಡುತ್ತದೆ. ಹಿಂದಿಟ್ಟ ಹೆಜ್ಜೆಯೇ ಹೆದ್ದಾರಿ ರೂಪಿಸುತ್ತದೆ. ವರ್ಷಾನುಗಟ್ಟಲೆ ಸಿನಿಮಾವೊಂದು ವಿಳಂಬವಾದಾಗ ಅದರ ಚುಕ್ಕಾಣಿ ಹಿಡಿದಿದ್ದ ನಿರ್ದೇಶಕ ಶಂಕರರಿಗೆ ವಿಶ್ವಾಸ ಹೊರಟು ಹೋಗಿತ್ತು. ಅವರು ಅದನ್ನು ಮತ್ತೆ ಪಡೆದದ್ದು `18ನೇ ಕ್ರಾಸ್~ ಬಿಡುಗಡೆಯಾದ ನಂತರ. <br /> <br /> ನಿರ್ಮಾಪಕರ ಅಕಾಲಿಕ ಮರಣ ಮತ್ತಿತರ ಅಡೆತಡೆಗಳು ಚಿತ್ರವನ್ನು ಬಾಧಿಸಿದವು. ಆರು ವರ್ಷದ ನಂತರ ಕಡೆಗೂ ಚಿತ್ರ ಬಿಡುಗಡೆಯಾಯಿತು. ತಪ್ಪು ಒಪ್ಪುಗಳನ್ನು ಹೇಳುತ್ತಲೇ ಪ್ರೇಕ್ಷಕರು ಬೆನ್ನು ತಟ್ಟಿದರು. ಇದು ಶಂಕರರ ಖುಷಿಯನ್ನು ಇಮ್ಮಡಿಗೊಳಿಸಿದೆ.<br /> <br /> ಮೊಗ್ಗಿನ ಮನಸ್ಸು ಚಿತ್ರದೊಂದಿಗೇ ರಾಧಿಕಾ ಪಂಡಿತ್ ಗುರುತಿಸಿಕೊಂಡರೂ ವಾಸ್ತವದಲ್ಲಿ ಅವರ ಮೊದಲ ಚಿತ್ರ `18ನೇ ಕ್ರಾಸ್~. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಕೂಡ ಇದೇ ಮೊದಲ ಚಿತ್ರ. ಇಬ್ಬರೂ ಮುಂದೆ ಚಿತ್ರರಂಗದ ಕಣ್ಮಣಿಗಳಾಗುತ್ತಾರೆ ಎಂದು ಆಗಲೇ ಶಂಕರ್ ಚಿತ್ರತಂಡದವರೊಂದಿಗೆ ಹಂಚಿಕೊಂಡಿದ್ದರಂತೆ. ಅದು ಈಗ ನಿಜವಾಗಿದೆ. <br /> <br /> ತಮ್ಮ ಎಂಟನೇ ಚಿತ್ರ `ಅದ್ದೂರಿ~ ಐವತ್ತನೇ ದಿನ ಆಚರಿಸಿಕೊಂಡ ದಿನವೇ 18ನೇ ಕ್ರಾಸ್ ಬಿಡುಗಡೆಯಾಗಿದ್ದು ರಾಧಿಕಾ ಪಾಲಿಗೆ `ಡಬಲ್ ಧಮಾಕಾ~ ಅಂತೆ. ನಿರ್ಮಾಪಕ ಚಿಕ್ಕಣ್ಣ ಅವರಿಗೆ ಚಿತ್ರವನ್ನು ಸಮರ್ಪಿಸಿದರು ರಾಧಿಕಾ. ಮಾಗಿದ ನಟನೆ ಸಾಧ್ಯವಾಗಿಲ್ಲ ಎಂಬ ಆತಂಕವನ್ನು ಚಿತ್ರ ನಿವಾರಿಸಿದೆ. ಚಿತ್ರದಲ್ಲಿ ತೋರಿದ ನಟನೆಗೂ ಇಂದಿನ ಅಭಿನಯಕ್ಕೂ ಹೆಚ್ಚೇನೂ ವ್ಯತ್ಯಾಸ ಇಲ್ಲದಿರುವ ಬಗ್ಗೆ ಅವರ ಸಂತಸಗೊಂಡರು. <br /> <br /> ಮೊದಲ ಚಿತ್ರ ಈಗಲೂ ತನ್ನೊಂದಿಗಿದೆ ಎಂಬ ಭಾವುಕತೆಯೊಂದಿಗೆ ಮಾತಿಗಿಳಿದರು ಅರ್ಜುನ್ ಜನ್ಯ. ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರಿಗೆ ಭಿನ್ನ ಸಂಗೀತ ನೀಡಬೇಕೆಂಬ ತುಡಿತ. ಅದರಲ್ಲಿ ಯಶ ಕಂಡ ತೃಪ್ತಿ ಅವರಿಗೆ. ನಿರ್ಮಾಪಕರು ಈ ಹೊತ್ತಿನಲ್ಲಿ ಇದ್ದಿದ್ದರೆ ಖುಷಿ ಪಡುತ್ತಿದ್ದರು. ಶಂಕರ್ ಅಂದು ತಮ್ಮನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. <br /> <br /> ನಟ ದೀಪಕ್, ನಿರ್ಮಾಪಕ ಚಿಕ್ಕಣ್ಣ ಅವರ ಮಗ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಮ್ಮಮ್ಮೆ ಹೀಗೂ ಆಗಿ ಬಿಡುತ್ತದೆ. ಹಿಂದಿಟ್ಟ ಹೆಜ್ಜೆಯೇ ಹೆದ್ದಾರಿ ರೂಪಿಸುತ್ತದೆ. ವರ್ಷಾನುಗಟ್ಟಲೆ ಸಿನಿಮಾವೊಂದು ವಿಳಂಬವಾದಾಗ ಅದರ ಚುಕ್ಕಾಣಿ ಹಿಡಿದಿದ್ದ ನಿರ್ದೇಶಕ ಶಂಕರರಿಗೆ ವಿಶ್ವಾಸ ಹೊರಟು ಹೋಗಿತ್ತು. ಅವರು ಅದನ್ನು ಮತ್ತೆ ಪಡೆದದ್ದು `18ನೇ ಕ್ರಾಸ್~ ಬಿಡುಗಡೆಯಾದ ನಂತರ. <br /> <br /> ನಿರ್ಮಾಪಕರ ಅಕಾಲಿಕ ಮರಣ ಮತ್ತಿತರ ಅಡೆತಡೆಗಳು ಚಿತ್ರವನ್ನು ಬಾಧಿಸಿದವು. ಆರು ವರ್ಷದ ನಂತರ ಕಡೆಗೂ ಚಿತ್ರ ಬಿಡುಗಡೆಯಾಯಿತು. ತಪ್ಪು ಒಪ್ಪುಗಳನ್ನು ಹೇಳುತ್ತಲೇ ಪ್ರೇಕ್ಷಕರು ಬೆನ್ನು ತಟ್ಟಿದರು. ಇದು ಶಂಕರರ ಖುಷಿಯನ್ನು ಇಮ್ಮಡಿಗೊಳಿಸಿದೆ.<br /> <br /> ಮೊಗ್ಗಿನ ಮನಸ್ಸು ಚಿತ್ರದೊಂದಿಗೇ ರಾಧಿಕಾ ಪಂಡಿತ್ ಗುರುತಿಸಿಕೊಂಡರೂ ವಾಸ್ತವದಲ್ಲಿ ಅವರ ಮೊದಲ ಚಿತ್ರ `18ನೇ ಕ್ರಾಸ್~. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಕೂಡ ಇದೇ ಮೊದಲ ಚಿತ್ರ. ಇಬ್ಬರೂ ಮುಂದೆ ಚಿತ್ರರಂಗದ ಕಣ್ಮಣಿಗಳಾಗುತ್ತಾರೆ ಎಂದು ಆಗಲೇ ಶಂಕರ್ ಚಿತ್ರತಂಡದವರೊಂದಿಗೆ ಹಂಚಿಕೊಂಡಿದ್ದರಂತೆ. ಅದು ಈಗ ನಿಜವಾಗಿದೆ. <br /> <br /> ತಮ್ಮ ಎಂಟನೇ ಚಿತ್ರ `ಅದ್ದೂರಿ~ ಐವತ್ತನೇ ದಿನ ಆಚರಿಸಿಕೊಂಡ ದಿನವೇ 18ನೇ ಕ್ರಾಸ್ ಬಿಡುಗಡೆಯಾಗಿದ್ದು ರಾಧಿಕಾ ಪಾಲಿಗೆ `ಡಬಲ್ ಧಮಾಕಾ~ ಅಂತೆ. ನಿರ್ಮಾಪಕ ಚಿಕ್ಕಣ್ಣ ಅವರಿಗೆ ಚಿತ್ರವನ್ನು ಸಮರ್ಪಿಸಿದರು ರಾಧಿಕಾ. ಮಾಗಿದ ನಟನೆ ಸಾಧ್ಯವಾಗಿಲ್ಲ ಎಂಬ ಆತಂಕವನ್ನು ಚಿತ್ರ ನಿವಾರಿಸಿದೆ. ಚಿತ್ರದಲ್ಲಿ ತೋರಿದ ನಟನೆಗೂ ಇಂದಿನ ಅಭಿನಯಕ್ಕೂ ಹೆಚ್ಚೇನೂ ವ್ಯತ್ಯಾಸ ಇಲ್ಲದಿರುವ ಬಗ್ಗೆ ಅವರ ಸಂತಸಗೊಂಡರು. <br /> <br /> ಮೊದಲ ಚಿತ್ರ ಈಗಲೂ ತನ್ನೊಂದಿಗಿದೆ ಎಂಬ ಭಾವುಕತೆಯೊಂದಿಗೆ ಮಾತಿಗಿಳಿದರು ಅರ್ಜುನ್ ಜನ್ಯ. ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರಿಗೆ ಭಿನ್ನ ಸಂಗೀತ ನೀಡಬೇಕೆಂಬ ತುಡಿತ. ಅದರಲ್ಲಿ ಯಶ ಕಂಡ ತೃಪ್ತಿ ಅವರಿಗೆ. ನಿರ್ಮಾಪಕರು ಈ ಹೊತ್ತಿನಲ್ಲಿ ಇದ್ದಿದ್ದರೆ ಖುಷಿ ಪಡುತ್ತಿದ್ದರು. ಶಂಕರ್ ಅಂದು ತಮ್ಮನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. <br /> <br /> ನಟ ದೀಪಕ್, ನಿರ್ಮಾಪಕ ಚಿಕ್ಕಣ್ಣ ಅವರ ಮಗ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>