<p><strong>ಕನಕಗಿರಿ:</strong> ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹನುಮನಾಳ ಗ್ರಾಮದ ಶ್ರೀ ಬಸವಲಿಂಗೇಶ್ವರ ದೇಶಿಕೇಂದ್ರದ ಶಿವಯೋಗಿಗಳ ಅವರ ಜಾತ್ರಾ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಗ್ಗೆ ತಿಳಿದು ಬಂದಿದೆ. <br /> <br /> ಸೋಮವಾರ ಊಟಗನೂರು ಮರಿ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 11 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮೂರ್ನಾಲ್ಕು ಜೋಡಿಗಳು ಅಪ್ರಾಪ್ತ ವಯಸ್ಕರಾಗಿದ್ದರು ಎಂದು ತಿಳಿದು ಬಂದಿದೆ. ಹನುಮನಾಳ ಗ್ರಾಮದ ಭಕ್ತರ ಹೆಸರಿನಲ್ಲಿ ನಡೆದ ಈ ಮದುವೆಯ ಸಂಘಟಕರು ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ ಎಂದು ಕರಪತ್ರ ಹಾಕಿಸಿದ್ದರೂ ಉಪಯೋಗವಾಗಲಿಲ್ಲ, <br /> <br /> ಶಿರಿವಾರ ಗ್ರಾಮದ ದುರಗಪ್ಪ ಅವರೊಂದಿಗೆ ವಿವಾಹದ ಅದೇ ಗ್ರಾಮದ ಹನುಮಂತಿಗೆ ಇನ್ನು ಹದಿನೆಂಟು ವಯಸು ಆಗಿರಲಿಲ್ಲ, ಅಲ್ಲದೆ ಈ ಸಮಯದಲ್ಲಿ ಮದುವೆಯಾದ ಇನ್ನೇರಡು ಜೋಡಿಗಳು ಸರ್ಕಾರದ ಕಾನೂನು ಪ್ರಕಾರ 18 ವಯಸು ತುಂಬಿರಲಿಲ್ಲ ಎಂದು ಅಲ್ಲಿ ಹಾಜರಿದ್ದ ಕೆಲವರು ಮಾಹಿತಿ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹನುಮನಾಳ ಗ್ರಾಮದ ಶ್ರೀ ಬಸವಲಿಂಗೇಶ್ವರ ದೇಶಿಕೇಂದ್ರದ ಶಿವಯೋಗಿಗಳ ಅವರ ಜಾತ್ರಾ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಗ್ಗೆ ತಿಳಿದು ಬಂದಿದೆ. <br /> <br /> ಸೋಮವಾರ ಊಟಗನೂರು ಮರಿ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 11 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮೂರ್ನಾಲ್ಕು ಜೋಡಿಗಳು ಅಪ್ರಾಪ್ತ ವಯಸ್ಕರಾಗಿದ್ದರು ಎಂದು ತಿಳಿದು ಬಂದಿದೆ. ಹನುಮನಾಳ ಗ್ರಾಮದ ಭಕ್ತರ ಹೆಸರಿನಲ್ಲಿ ನಡೆದ ಈ ಮದುವೆಯ ಸಂಘಟಕರು ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ ಎಂದು ಕರಪತ್ರ ಹಾಕಿಸಿದ್ದರೂ ಉಪಯೋಗವಾಗಲಿಲ್ಲ, <br /> <br /> ಶಿರಿವಾರ ಗ್ರಾಮದ ದುರಗಪ್ಪ ಅವರೊಂದಿಗೆ ವಿವಾಹದ ಅದೇ ಗ್ರಾಮದ ಹನುಮಂತಿಗೆ ಇನ್ನು ಹದಿನೆಂಟು ವಯಸು ಆಗಿರಲಿಲ್ಲ, ಅಲ್ಲದೆ ಈ ಸಮಯದಲ್ಲಿ ಮದುವೆಯಾದ ಇನ್ನೇರಡು ಜೋಡಿಗಳು ಸರ್ಕಾರದ ಕಾನೂನು ಪ್ರಕಾರ 18 ವಯಸು ತುಂಬಿರಲಿಲ್ಲ ಎಂದು ಅಲ್ಲಿ ಹಾಜರಿದ್ದ ಕೆಲವರು ಮಾಹಿತಿ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>