<p><strong>ಬೆಂಗಳೂರು: </strong>ಇಸ್ರೇಲ್ ಮೂಲದ ಪ್ರೇಯಸಿಯನ್ನು ಕೊಲೆ ಮಾಡಿ, ಪತ್ನಿಗೂ ಗೊತ್ತಾಗದ ಹಾಗೆ ಶವವನ್ನು ಹವಾನಿಯಂತ್ರಿತ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಸುದ್ದಿ ಮಾಡಿದ್ದ `ಯೋಗಗುರು~ ಲೋಕೇಶ್ ಚಂದ್ರದಾಸ್ಗೆ ಜಾಮೀನು ನೀಡಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.<br /> <br /> ತಾನು ಕ್ಯಾನ್ಸರ್ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಒಂದು ಲಕ್ಷ ರೂಪಾಯಿ ಮೊತ್ತದ ಭದ್ರತೆ ಪಡೆದುಕೊಂಡು ಜಾಮೀನು ನೀಡಲಾಗಿದೆ.<br /> <br /> ಘಟನೆ ವಿವರ: ಕನಕಪುರ ಮುಖ್ಯರಸ್ತೆಯ ಗುಬ್ಬಲಾಳ ಗ್ರಾಮದ ಬಳಿ ಇರುವ `ಮಂತ್ರಿ ಟ್ರ್ಯಾಂಕ್ವಿಲ್~ ಅಪಾರ್ಟ್ಮೆಂಟ್ನಲ್ಲಿ 2011ರ ಮೇ ತಿಂಗಳಿನಲ್ಲಿ ಕೊಲೆ ನಡೆದಿತ್ತು. ಇಸ್ರೇಲ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಟ್ಯಾಮರ್ ಫರಾ ಅಬ್ರಹಾಂ ಕೊಲೆಯಾದವರು. ಟ್ಯಾಮರ್ ಅವರ ಪ್ರಿಯಕರ ಲೋಕೇಶ್. ಯೋಗ ತರಗತಿಗಳನ್ನು ನಡೆಸುತ್ತಿದ್ದ ಲೋಕೇಶ್ ವಿವಾಹಿತ. ಪತ್ನಿ ಜ್ಯೋತಿ ವೈದ್ಯನಾಥನ್ ನಗರದ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್. <br /> <br /> ಯೋಗ ತರಗತಿಗಳನ್ನು ನಡೆಸುವ ಸಲುವಾಗಿ ಲೋಕೇಶ್ 2007ರಲ್ಲಿ ಋಷಿಕೇಶಕ್ಕೆ ಹೋಗಿದ್ದ. ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ಟ್ಯಾಮರ್ ಋಷಿಕೇಶಕ್ಕೆ ಬಂದು ಲೋಕೇಶ್ನ ತರಗತಿಗಳಿಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು. <br /> <br /> ಲೋಕೇಶ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಟ್ಯಾಮರ್ಗೆ ಲೋಕೇಶ್ ಮದುವೆಯಾಗಿರುವ ವಿಷಯ ಗೊತ್ತಾಗಿತ್ತು. ಅತ್ತ ಪ್ರೀತಿಯ ವಿಷಯ ಪತ್ನಿ ಜ್ಯೋತಿಯವರಿಗೂ ತಿಳಿಯಿತು. ಕೋಪಗೊಂಡ ಜ್ಯೋತಿ ಸಂಬಂಧಿಕರ ಮನೆಗೆ ಹೋದರು. <br /> <br /> ವಿವಾಹವಾದ ವಿಷಯ ತಿಳಿಸದ ಹಿನ್ನೆಲೆಯಲ್ಲಿ ಟ್ಯಾಮರ್ ಲೋಕೇಶ್ ಜೊತೆ ಜಗಳವಾಡಿದರು. ತನ್ನ ಗುಟ್ಟು ರಟ್ಟಾಗುತ್ತಿದ್ದಂತೆಯೇ ಲೋಕೇಶ್ ಟ್ಯಾಮರ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ತನ್ನ ಯೋಗಾಭ್ಯಾಸದ ಕೊಠಡಿಯಲ್ಲಿ ಹವಾನಿಯಂತ್ರಿತ ಶವಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ.<br /> <br /> ಟ್ಯಾಮರ್ ಅವರನ್ನು ಇಸ್ರೇಲ್ಗೆ ವಾಪಸ್ ಕಳುಹಿಸಿರುವುದಾಗಿ ಪತ್ನಿಗೆ ಸುಳ್ಳು ಹೇಳಿದ್ದ ಆತ, ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಶವವಿದ್ದ ಕೊಠಡಿಗೆ ಜ್ಯೋತಿ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದುದರಿಂದ ತಮ್ಮ ಮನೆಯಲ್ಲಿ ಶವವಿದೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ. <br /> <br /> ಲೋಕೇಶ್, ಶವವನ್ನು ಹೊರಗೆ ಸಾಗಿಸಲು ಹಲವು ಬಾರಿ ಯತ್ನಿಸಿದ್ದ. ಆದರೆ ಅಪಾರ್ಟ್ಮೆಂಟ್ನ ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಶವ ಸಾಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಒಂದು ದಿನ ಜ್ಯೋತಿಯವರ ತಾಯಿಗೆ ವಿಷಯ ತಿಳಿದು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು ಎಂಬುದಾಗಿ ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಸ್ರೇಲ್ ಮೂಲದ ಪ್ರೇಯಸಿಯನ್ನು ಕೊಲೆ ಮಾಡಿ, ಪತ್ನಿಗೂ ಗೊತ್ತಾಗದ ಹಾಗೆ ಶವವನ್ನು ಹವಾನಿಯಂತ್ರಿತ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಸುದ್ದಿ ಮಾಡಿದ್ದ `ಯೋಗಗುರು~ ಲೋಕೇಶ್ ಚಂದ್ರದಾಸ್ಗೆ ಜಾಮೀನು ನೀಡಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.<br /> <br /> ತಾನು ಕ್ಯಾನ್ಸರ್ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಒಂದು ಲಕ್ಷ ರೂಪಾಯಿ ಮೊತ್ತದ ಭದ್ರತೆ ಪಡೆದುಕೊಂಡು ಜಾಮೀನು ನೀಡಲಾಗಿದೆ.<br /> <br /> ಘಟನೆ ವಿವರ: ಕನಕಪುರ ಮುಖ್ಯರಸ್ತೆಯ ಗುಬ್ಬಲಾಳ ಗ್ರಾಮದ ಬಳಿ ಇರುವ `ಮಂತ್ರಿ ಟ್ರ್ಯಾಂಕ್ವಿಲ್~ ಅಪಾರ್ಟ್ಮೆಂಟ್ನಲ್ಲಿ 2011ರ ಮೇ ತಿಂಗಳಿನಲ್ಲಿ ಕೊಲೆ ನಡೆದಿತ್ತು. ಇಸ್ರೇಲ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಟ್ಯಾಮರ್ ಫರಾ ಅಬ್ರಹಾಂ ಕೊಲೆಯಾದವರು. ಟ್ಯಾಮರ್ ಅವರ ಪ್ರಿಯಕರ ಲೋಕೇಶ್. ಯೋಗ ತರಗತಿಗಳನ್ನು ನಡೆಸುತ್ತಿದ್ದ ಲೋಕೇಶ್ ವಿವಾಹಿತ. ಪತ್ನಿ ಜ್ಯೋತಿ ವೈದ್ಯನಾಥನ್ ನಗರದ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್. <br /> <br /> ಯೋಗ ತರಗತಿಗಳನ್ನು ನಡೆಸುವ ಸಲುವಾಗಿ ಲೋಕೇಶ್ 2007ರಲ್ಲಿ ಋಷಿಕೇಶಕ್ಕೆ ಹೋಗಿದ್ದ. ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ಟ್ಯಾಮರ್ ಋಷಿಕೇಶಕ್ಕೆ ಬಂದು ಲೋಕೇಶ್ನ ತರಗತಿಗಳಿಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು. <br /> <br /> ಲೋಕೇಶ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಟ್ಯಾಮರ್ಗೆ ಲೋಕೇಶ್ ಮದುವೆಯಾಗಿರುವ ವಿಷಯ ಗೊತ್ತಾಗಿತ್ತು. ಅತ್ತ ಪ್ರೀತಿಯ ವಿಷಯ ಪತ್ನಿ ಜ್ಯೋತಿಯವರಿಗೂ ತಿಳಿಯಿತು. ಕೋಪಗೊಂಡ ಜ್ಯೋತಿ ಸಂಬಂಧಿಕರ ಮನೆಗೆ ಹೋದರು. <br /> <br /> ವಿವಾಹವಾದ ವಿಷಯ ತಿಳಿಸದ ಹಿನ್ನೆಲೆಯಲ್ಲಿ ಟ್ಯಾಮರ್ ಲೋಕೇಶ್ ಜೊತೆ ಜಗಳವಾಡಿದರು. ತನ್ನ ಗುಟ್ಟು ರಟ್ಟಾಗುತ್ತಿದ್ದಂತೆಯೇ ಲೋಕೇಶ್ ಟ್ಯಾಮರ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ತನ್ನ ಯೋಗಾಭ್ಯಾಸದ ಕೊಠಡಿಯಲ್ಲಿ ಹವಾನಿಯಂತ್ರಿತ ಶವಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ.<br /> <br /> ಟ್ಯಾಮರ್ ಅವರನ್ನು ಇಸ್ರೇಲ್ಗೆ ವಾಪಸ್ ಕಳುಹಿಸಿರುವುದಾಗಿ ಪತ್ನಿಗೆ ಸುಳ್ಳು ಹೇಳಿದ್ದ ಆತ, ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಶವವಿದ್ದ ಕೊಠಡಿಗೆ ಜ್ಯೋತಿ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದುದರಿಂದ ತಮ್ಮ ಮನೆಯಲ್ಲಿ ಶವವಿದೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ. <br /> <br /> ಲೋಕೇಶ್, ಶವವನ್ನು ಹೊರಗೆ ಸಾಗಿಸಲು ಹಲವು ಬಾರಿ ಯತ್ನಿಸಿದ್ದ. ಆದರೆ ಅಪಾರ್ಟ್ಮೆಂಟ್ನ ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಶವ ಸಾಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಒಂದು ದಿನ ಜ್ಯೋತಿಯವರ ತಾಯಿಗೆ ವಿಷಯ ತಿಳಿದು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು ಎಂಬುದಾಗಿ ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>