<p>ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ದ್ವಿತೀಯ ಹಸಿರು ಸಮ್ಮೇಳನದಲ್ಲಿ ನಗರದ ವಿವಿಧ ಶಾಲೆಗಳಿಂದ 14 ಯುವ ಪರಿಸರ ವಿಜ್ಞಾನಿಗಳು ಭಾಗವಹಿಸಿದ್ದರು. <br /> <br /> ಸಮತೋಲಿತ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಮ್ಮ ಮುಂದಿರುವ ಸವಾಲುಗಳನ್ನು ಕುರಿತು ಯುವ ವಿಜ್ಞಾನಿ ವಿದ್ಯಾರ್ಥಿಗಳು ಈ ವೇಳೆ ಚರ್ಚಿಸಿ ವಿನಿಮಯ ಮಾಡಿಕೊಂಡರು. ಪ್ರಸ್ತುತ ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರೋಪಾಯಗಳನ್ನು ಕುರಿತು ಚರ್ಚಿಸುವುದರ ಜತೆಗೆ ಪರಿಸರ ಸಂರಕ್ಷಣೆಯಲ್ಲಿ ಎನ್ಜಿಒಗಳ ಪಾತ್ರ, ಪರಿಸರ ತಜ್ಞರು ಹಾಗೂ ನಾಗರಿಕರ, ಪಾಲ್ಗೊಳ್ಳುವಿಕೆ ಮೇಲೂ ಬೆಳಕು ಚೆಲ್ಲಲಾಯಿತು. <br /> <br /> ಉತ್ತರ ಧ್ರುವದ ರಕ್ಷಣೆ, ಹುಲಿ ಸಂರಕ್ಷಣೆ, ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆ, ಸಮರ್ಥ ಪರಿಸರ ವ್ಯವಸ್ಥೆ ನಿರ್ವಹಣೆ, ಪುನರ್ಬಳಕೆ ಕುರಿತಂತೆ ತಾವು ಅನ್ವೇಷಣೆ ಮಾಡಿದ ಹೊಸ ತಂತ್ರಜ್ಞಾನವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. <br /> <br /> ಟಿಐಎಸ್ಬಿ, ವಿದ್ಯಾಶಿಲ್ಪ, ಲೆಗೆಸಿ, ಟ್ರಿಯೊ, ಡಿಪಿಎಸ್ ಹಾಗೂ ಪ್ರೆಸಿಡೆನ್ಸಿ ಶಾಲೆಯಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಕೆನೆಡಿಯನ್ ಸ್ಕೂಲ್ ಮಕ್ಕಳ ಜತೆ ಸೇರಿ ಶಾಲೆಯ ಆವರಣದಲ್ಲಿ ಗುಲಾಬಿ ತೋಟ ನಿರ್ಮಾಣಕ್ಕೆ ಮುಂದಾದರು. ವಿದ್ಯಾರ್ಥಿಗಳೆಲ್ಲರೂ ಕೂಡಿ 37 ಗುಲಾಬಿ ಗಿಡಗಳನ್ನು ನೆಟ್ಟು ಖುಷಿ ಪಟ್ಟರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ದ್ವಿತೀಯ ಹಸಿರು ಸಮ್ಮೇಳನದಲ್ಲಿ ನಗರದ ವಿವಿಧ ಶಾಲೆಗಳಿಂದ 14 ಯುವ ಪರಿಸರ ವಿಜ್ಞಾನಿಗಳು ಭಾಗವಹಿಸಿದ್ದರು. <br /> <br /> ಸಮತೋಲಿತ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಮ್ಮ ಮುಂದಿರುವ ಸವಾಲುಗಳನ್ನು ಕುರಿತು ಯುವ ವಿಜ್ಞಾನಿ ವಿದ್ಯಾರ್ಥಿಗಳು ಈ ವೇಳೆ ಚರ್ಚಿಸಿ ವಿನಿಮಯ ಮಾಡಿಕೊಂಡರು. ಪ್ರಸ್ತುತ ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರೋಪಾಯಗಳನ್ನು ಕುರಿತು ಚರ್ಚಿಸುವುದರ ಜತೆಗೆ ಪರಿಸರ ಸಂರಕ್ಷಣೆಯಲ್ಲಿ ಎನ್ಜಿಒಗಳ ಪಾತ್ರ, ಪರಿಸರ ತಜ್ಞರು ಹಾಗೂ ನಾಗರಿಕರ, ಪಾಲ್ಗೊಳ್ಳುವಿಕೆ ಮೇಲೂ ಬೆಳಕು ಚೆಲ್ಲಲಾಯಿತು. <br /> <br /> ಉತ್ತರ ಧ್ರುವದ ರಕ್ಷಣೆ, ಹುಲಿ ಸಂರಕ್ಷಣೆ, ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆ, ಸಮರ್ಥ ಪರಿಸರ ವ್ಯವಸ್ಥೆ ನಿರ್ವಹಣೆ, ಪುನರ್ಬಳಕೆ ಕುರಿತಂತೆ ತಾವು ಅನ್ವೇಷಣೆ ಮಾಡಿದ ಹೊಸ ತಂತ್ರಜ್ಞಾನವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. <br /> <br /> ಟಿಐಎಸ್ಬಿ, ವಿದ್ಯಾಶಿಲ್ಪ, ಲೆಗೆಸಿ, ಟ್ರಿಯೊ, ಡಿಪಿಎಸ್ ಹಾಗೂ ಪ್ರೆಸಿಡೆನ್ಸಿ ಶಾಲೆಯಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಕೆನೆಡಿಯನ್ ಸ್ಕೂಲ್ ಮಕ್ಕಳ ಜತೆ ಸೇರಿ ಶಾಲೆಯ ಆವರಣದಲ್ಲಿ ಗುಲಾಬಿ ತೋಟ ನಿರ್ಮಾಣಕ್ಕೆ ಮುಂದಾದರು. ವಿದ್ಯಾರ್ಥಿಗಳೆಲ್ಲರೂ ಕೂಡಿ 37 ಗುಲಾಬಿ ಗಿಡಗಳನ್ನು ನೆಟ್ಟು ಖುಷಿ ಪಟ್ಟರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>