<p><strong>ಬೀದರ್:</strong> ಬೀದರ್ ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಗುಲ್ಬರ್ಗ-ಬೀದರ್ ಹಾಲು ಒಕ್ಕೂಟವು ಇದೇ 5 ರಿಂದ ಜಾರಿಗೆ ಬರುವಂತೆ ರೈತರಿಂದ ಹಾಲು ಖರೀದಿಸುವ ದರದಲ್ಲಿ ಲೀಟರ್ಗೆ ರೂ. 1.50 ಕಡಿತ ಮಾಡಿದೆ.<br /> <br /> ಸಾಗಣೆಯಲ್ಲಿ ಆಗುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ಎರಡು ತಿಂಗಳ ಅವಧಿಗೆ ಈ ಕಡಿತ ಮಾಡಲಾಗಿದೆ. ಸದ್ಯ ರೂ. 1.50 ಕಡಿತ ಮಾಡಿದ್ದರೂ, ಬೀದರ್-ಗುಲ್ಬರ್ಗ ಒಕ್ಕೂಟವೇ ಇತರೆ ಒಕ್ಕೂಟಗಳಿಗಂತಲೂ ಹೆಚ್ಚಿನ ದರವನ್ನು ರೈತರಿಗೆ ಪಾವತಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಸಮರ್ಥಿಸಿಕೊಂಡರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ಹಾಲು ಮಾರಾಟದ ಪ್ರಮಾಣ ಕಡಿಮೆ ಇದ್ದು, ಹೆಚ್ಚುವರಿಯಾಗಿ ಉಳಿಯುವ ಸುಮಾರು 16 ಸಾವಿರ ಲೀಟರ್ ಹಾಲನ್ನು ಪೌಡರ್ ಸಿದ್ಧಪಡಿಸಲು ಬೆಳಗಾವಿ ಡೆಂಪೋ ಡೇರಿಗೆ ಕಳುಹಿಸಿಕೊಡಲಾಗುತ್ತಿದೆ.ಇದರಿಂದ ಡೇರಿಗೆ ಪ್ರತಿ ಲೀಟರ್ ಹಾಲಿಗೆ 8 ರೂ. 50 ಪೈಸೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.<br /> <br /> ಪ್ರಸ್ತುತ ಒಕ್ಕೂಟವು ಒಟ್ಟಾರೆ ಸುಮಾರು ದೈನಿಕ 80 ಸಾವಿರ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಬೀದರ್ ಜಿಲ್ಲೆಯಲ್ಲಿಯೇ ಸುಮಾರು 52 ಸಾವಿರ ಲೀಟರ್ ಸಂಗ್ರಹವಾಗುತ್ತಿದೆ. ಮಾರುಕಟ್ಟೆಗೆ ಸುಮಾರು 60 ಸಾವಿರ ಲೀಟರ್ ಮಾರಾಟ ಆಗುತ್ತಿದೆ.</p>.<p>ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬೀದರ್ನಲ್ಲಿ ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿಲಾಗಿದೆ.</p>.<p>ಪ್ರಸ್ತುತ 6 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ನಗರಸಭೆಗೆ ಎಲ್ಲ ವಾರ್ಡ್ಗಳಲ್ಲಿ ಸ್ಥಳಾವಕಾಶ ಒದಗಿಸಲು ಕೋರಿದ್ದು, ಪ್ರತಿಕ್ರಿಯೆ ಆಧರಿಸಿ ಪ್ರತಿ ವಾರ್ಡ್ನಲ್ಲಿಯೂ ಮಳಿಗೆ ಆರಂಭಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಬೀದರ್ ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಗುಲ್ಬರ್ಗ-ಬೀದರ್ ಹಾಲು ಒಕ್ಕೂಟವು ಇದೇ 5 ರಿಂದ ಜಾರಿಗೆ ಬರುವಂತೆ ರೈತರಿಂದ ಹಾಲು ಖರೀದಿಸುವ ದರದಲ್ಲಿ ಲೀಟರ್ಗೆ ರೂ. 1.50 ಕಡಿತ ಮಾಡಿದೆ.<br /> <br /> ಸಾಗಣೆಯಲ್ಲಿ ಆಗುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ಎರಡು ತಿಂಗಳ ಅವಧಿಗೆ ಈ ಕಡಿತ ಮಾಡಲಾಗಿದೆ. ಸದ್ಯ ರೂ. 1.50 ಕಡಿತ ಮಾಡಿದ್ದರೂ, ಬೀದರ್-ಗುಲ್ಬರ್ಗ ಒಕ್ಕೂಟವೇ ಇತರೆ ಒಕ್ಕೂಟಗಳಿಗಂತಲೂ ಹೆಚ್ಚಿನ ದರವನ್ನು ರೈತರಿಗೆ ಪಾವತಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಸಮರ್ಥಿಸಿಕೊಂಡರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ಹಾಲು ಮಾರಾಟದ ಪ್ರಮಾಣ ಕಡಿಮೆ ಇದ್ದು, ಹೆಚ್ಚುವರಿಯಾಗಿ ಉಳಿಯುವ ಸುಮಾರು 16 ಸಾವಿರ ಲೀಟರ್ ಹಾಲನ್ನು ಪೌಡರ್ ಸಿದ್ಧಪಡಿಸಲು ಬೆಳಗಾವಿ ಡೆಂಪೋ ಡೇರಿಗೆ ಕಳುಹಿಸಿಕೊಡಲಾಗುತ್ತಿದೆ.ಇದರಿಂದ ಡೇರಿಗೆ ಪ್ರತಿ ಲೀಟರ್ ಹಾಲಿಗೆ 8 ರೂ. 50 ಪೈಸೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.<br /> <br /> ಪ್ರಸ್ತುತ ಒಕ್ಕೂಟವು ಒಟ್ಟಾರೆ ಸುಮಾರು ದೈನಿಕ 80 ಸಾವಿರ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಬೀದರ್ ಜಿಲ್ಲೆಯಲ್ಲಿಯೇ ಸುಮಾರು 52 ಸಾವಿರ ಲೀಟರ್ ಸಂಗ್ರಹವಾಗುತ್ತಿದೆ. ಮಾರುಕಟ್ಟೆಗೆ ಸುಮಾರು 60 ಸಾವಿರ ಲೀಟರ್ ಮಾರಾಟ ಆಗುತ್ತಿದೆ.</p>.<p>ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬೀದರ್ನಲ್ಲಿ ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿಲಾಗಿದೆ.</p>.<p>ಪ್ರಸ್ತುತ 6 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ನಗರಸಭೆಗೆ ಎಲ್ಲ ವಾರ್ಡ್ಗಳಲ್ಲಿ ಸ್ಥಳಾವಕಾಶ ಒದಗಿಸಲು ಕೋರಿದ್ದು, ಪ್ರತಿಕ್ರಿಯೆ ಆಧರಿಸಿ ಪ್ರತಿ ವಾರ್ಡ್ನಲ್ಲಿಯೂ ಮಳಿಗೆ ಆರಂಭಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>