<p><strong>ಬಸವಕಲ್ಯಾಣ: </strong>ಹುಲಸೂರು 6 ನೇ ಶತಮಾನದಲ್ಲಿ ಪ್ರತ್ಯೇಕ ನಾಡಾಗಿತ್ತು. ಈ ಸ್ಥಳದ ಐತಿಹಾಸಿಕತೆ ಸಾರುವ ಶಿಲ್ಪಗಳು, ಶಿಲಾಶಾಸನಗಳು ಮತ್ತು ಇತರೆ ದಾಖಲೆ ಲಭ್ಯವಾಗಿವೆ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಬಲ್ಲೂರ ಹೇಳಿದರು.<br /> <br /> ತಾಲ್ಲೂಕಿನ ಹುಲಸೂರನಲ್ಲಿ ಲಿಂಗೈಕ್ಯ ಬಸವಕುಮಾರ ಶಿವಯೋಗಿಗಳ 40 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ 6 ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಎರಡನೆ ದಿನದ ಪ್ರಥಮ ಗೋಷ್ಠಿಯಲ್ಲಿ ಹುಲ ಸೂರ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> ಈ ಸ್ಥಳಕ್ಕೆ ಮೊದಲು ಪುಲಿಚೇರು ಎಂದು ಹೆಸರಿತ್ತು. ಪಟ್ಟಣದಲ್ಲಿ ಹಳೆ ಶಿಲಾ ದೇಗುಲಗಳು, ವಿವಿಧ ಶಿಲ್ಪಗಳು, ವೀರಗಲ್ಲು, ಮಾಸ್ತಿಗಲ್ಲು ಮುಂತಾದವು ದೊರಕುತ್ತವೆ. ಇದು ಜೈನರ ಕಾಲದಲ್ಲಿ ಮಹತ್ವದ ಸ್ಥಳವಾಗಿತ್ತು. ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು.<br /> <br /> ನಂತರದಲ್ಲಿ ಎಲ್ಲವೂ ಹಾಳಾಗಿದೆ. ಇಲ್ಲಿ ಭಾಷಾ ಸಾಮರಸ್ಯ ಎದ್ದು ಕಾಣುತ್ತದೆ. ಇಲ್ಲಿನ ಮಹತ್ವದ ಶಿಲ್ಪಕಲಾಕೃತಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.<br /> <br /> ಸಾಹಿತಿ ಡಾ.ರಘುಶಂಖ ಭಾತಂಬ್ರಾ ಮಾತನಾಡಿ, ಇಲ್ಲಿನ ಗುರುಬಸವೇಶ್ವರ ಸಂಸ್ಥಾನ ಮಠವು ನಾಡು, ನುಡಿ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗೆ ಹೆಸರಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ.ವಿ.ಜಿ.ಭಂಡೆ ಮಾತ ನಾಡಿ, ಚಾಲುಕ್ಯರು, ರಾಷ್ಟ್ರಕೂಟ ಕಾಲ ದಲ್ಲಿ ಕಲ್ಯಾಣನಾಡು ಮಹತ್ವದ ಸ್ಥಾನ ವಾಗಿತ್ತು. ಬಸವಣ್ಣನವರಿಂದ ಜಗದ್ವಿ ಖ್ಯಾತ ಆಗುವಂತಾಯಿತು ಎಂದರು. ಪ್ರೊ.ಭೀಮರಾವ್ ಪಾಟೀಲ ಮಾತನಾಡಿದರು.<br /> <br /> ಶಿವಾನಂದ ಸ್ವಾಮೀಜಿ, ಸಮ್ಮೇಳ ನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ, ಶರ ಣಪ್ಪ ರಾಚೋಟೆ, ಶಿವಶಂಕರ ಟೋಕರೆ ಇದ್ದರು. ಪನ್ಯಾಸಕಿ ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ನಿರ್ಮಳೆ ನಿರೂಪಿಸಿದರು. ಶಿಖರೇಶ್ವರ ಶೆಟಗಾರ ವಂದಿಸಿದರು.<br /> <br /> <strong>ವಿಶೇಷ ಉಪನ್ಯಾಸ: </strong>ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಬುಧವಾರ ಬೆಳಿಗ್ಗೆ ಎರಡನೆ ಗೋಷ್ಠಿಯಲ್ಲಿ ವಿವಿಧ ವಿಷಯ ಗಳ ಬಗ್ಗೆ ವಿಶೇಷ ಉಪನ್ಯಾಸ ಮಂಡಿ ಸಲಾಯಿತು. ಪ್ರಾಧ್ಯಾಪಕ ಪ್ರೊ.ಕಲ್ಯಾಣರಾವ್ ಪಾಟೀಲ ಅವರು ನಾಡೋಜ ಡಾ.ಎಂ.ಎಂ.ಕಲ್ಬುರ್ಗಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.<br /> <br /> ಭೀಮಾಶಂಕರ ಬಿರಾದಾರ ಅವರು ಸಮ್ಮೇಳನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ ಅವರ ಬದುಕು ಬರಹ ಕುರಿತು ಮಾತನಾಡಿದರು. ಡಾ.ಮೃತ್ಯುಂಜಯ ರುಮಾಲೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮಚಂದ್ರ ಗಣಾಪುರ ಮಾತನಾಡಿದರು. ಸಂತೋಷ ಹಡಪದ ಇದ್ದರು. ದೇವೇಂದ್ರ ಬರಗಾಲೆ ನಿರೂಪಿಸಿದರು.<br /> <br /> <strong>***<br /> <em>ಚರಿತ್ರೆ ಕಟ್ಟಲು ಬೇಕಾದ ಎಲ್ಲ ಆಕರ ಗಳು ಹೋಬಳಿ ಕೇಂದ್ರವಾದ ಹುಲಸೂರನಲ್ಲಿ ಲಭ್ಯವಾಗುತ್ತವೆ. ಸಂಶೋಧಕರಿಗೆ ಈ ಸ್ಥಳ ಕೈಬೀಸಿ ಕರೆಯುತ್ತಿದೆ.</em><br /> -ಬಸವರಾಜ ಬಲ್ಲೂರ, </strong>ಪ್ರಾಧ್ಯಾಪಕರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ಹುಲಸೂರು 6 ನೇ ಶತಮಾನದಲ್ಲಿ ಪ್ರತ್ಯೇಕ ನಾಡಾಗಿತ್ತು. ಈ ಸ್ಥಳದ ಐತಿಹಾಸಿಕತೆ ಸಾರುವ ಶಿಲ್ಪಗಳು, ಶಿಲಾಶಾಸನಗಳು ಮತ್ತು ಇತರೆ ದಾಖಲೆ ಲಭ್ಯವಾಗಿವೆ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಬಲ್ಲೂರ ಹೇಳಿದರು.<br /> <br /> ತಾಲ್ಲೂಕಿನ ಹುಲಸೂರನಲ್ಲಿ ಲಿಂಗೈಕ್ಯ ಬಸವಕುಮಾರ ಶಿವಯೋಗಿಗಳ 40 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ 6 ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಎರಡನೆ ದಿನದ ಪ್ರಥಮ ಗೋಷ್ಠಿಯಲ್ಲಿ ಹುಲ ಸೂರ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> ಈ ಸ್ಥಳಕ್ಕೆ ಮೊದಲು ಪುಲಿಚೇರು ಎಂದು ಹೆಸರಿತ್ತು. ಪಟ್ಟಣದಲ್ಲಿ ಹಳೆ ಶಿಲಾ ದೇಗುಲಗಳು, ವಿವಿಧ ಶಿಲ್ಪಗಳು, ವೀರಗಲ್ಲು, ಮಾಸ್ತಿಗಲ್ಲು ಮುಂತಾದವು ದೊರಕುತ್ತವೆ. ಇದು ಜೈನರ ಕಾಲದಲ್ಲಿ ಮಹತ್ವದ ಸ್ಥಳವಾಗಿತ್ತು. ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು.<br /> <br /> ನಂತರದಲ್ಲಿ ಎಲ್ಲವೂ ಹಾಳಾಗಿದೆ. ಇಲ್ಲಿ ಭಾಷಾ ಸಾಮರಸ್ಯ ಎದ್ದು ಕಾಣುತ್ತದೆ. ಇಲ್ಲಿನ ಮಹತ್ವದ ಶಿಲ್ಪಕಲಾಕೃತಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.<br /> <br /> ಸಾಹಿತಿ ಡಾ.ರಘುಶಂಖ ಭಾತಂಬ್ರಾ ಮಾತನಾಡಿ, ಇಲ್ಲಿನ ಗುರುಬಸವೇಶ್ವರ ಸಂಸ್ಥಾನ ಮಠವು ನಾಡು, ನುಡಿ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗೆ ಹೆಸರಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ.ವಿ.ಜಿ.ಭಂಡೆ ಮಾತ ನಾಡಿ, ಚಾಲುಕ್ಯರು, ರಾಷ್ಟ್ರಕೂಟ ಕಾಲ ದಲ್ಲಿ ಕಲ್ಯಾಣನಾಡು ಮಹತ್ವದ ಸ್ಥಾನ ವಾಗಿತ್ತು. ಬಸವಣ್ಣನವರಿಂದ ಜಗದ್ವಿ ಖ್ಯಾತ ಆಗುವಂತಾಯಿತು ಎಂದರು. ಪ್ರೊ.ಭೀಮರಾವ್ ಪಾಟೀಲ ಮಾತನಾಡಿದರು.<br /> <br /> ಶಿವಾನಂದ ಸ್ವಾಮೀಜಿ, ಸಮ್ಮೇಳ ನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ, ಶರ ಣಪ್ಪ ರಾಚೋಟೆ, ಶಿವಶಂಕರ ಟೋಕರೆ ಇದ್ದರು. ಪನ್ಯಾಸಕಿ ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ನಿರ್ಮಳೆ ನಿರೂಪಿಸಿದರು. ಶಿಖರೇಶ್ವರ ಶೆಟಗಾರ ವಂದಿಸಿದರು.<br /> <br /> <strong>ವಿಶೇಷ ಉಪನ್ಯಾಸ: </strong>ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಬುಧವಾರ ಬೆಳಿಗ್ಗೆ ಎರಡನೆ ಗೋಷ್ಠಿಯಲ್ಲಿ ವಿವಿಧ ವಿಷಯ ಗಳ ಬಗ್ಗೆ ವಿಶೇಷ ಉಪನ್ಯಾಸ ಮಂಡಿ ಸಲಾಯಿತು. ಪ್ರಾಧ್ಯಾಪಕ ಪ್ರೊ.ಕಲ್ಯಾಣರಾವ್ ಪಾಟೀಲ ಅವರು ನಾಡೋಜ ಡಾ.ಎಂ.ಎಂ.ಕಲ್ಬುರ್ಗಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.<br /> <br /> ಭೀಮಾಶಂಕರ ಬಿರಾದಾರ ಅವರು ಸಮ್ಮೇಳನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ ಅವರ ಬದುಕು ಬರಹ ಕುರಿತು ಮಾತನಾಡಿದರು. ಡಾ.ಮೃತ್ಯುಂಜಯ ರುಮಾಲೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮಚಂದ್ರ ಗಣಾಪುರ ಮಾತನಾಡಿದರು. ಸಂತೋಷ ಹಡಪದ ಇದ್ದರು. ದೇವೇಂದ್ರ ಬರಗಾಲೆ ನಿರೂಪಿಸಿದರು.<br /> <br /> <strong>***<br /> <em>ಚರಿತ್ರೆ ಕಟ್ಟಲು ಬೇಕಾದ ಎಲ್ಲ ಆಕರ ಗಳು ಹೋಬಳಿ ಕೇಂದ್ರವಾದ ಹುಲಸೂರನಲ್ಲಿ ಲಭ್ಯವಾಗುತ್ತವೆ. ಸಂಶೋಧಕರಿಗೆ ಈ ಸ್ಥಳ ಕೈಬೀಸಿ ಕರೆಯುತ್ತಿದೆ.</em><br /> -ಬಸವರಾಜ ಬಲ್ಲೂರ, </strong>ಪ್ರಾಧ್ಯಾಪಕರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>