<p><strong>ಜಿನಿವಾ (ಪಿಟಿಐ):</strong> ಜಾಗತಿಕ ಆರ್ಥಿಕ ಕುಸಿತವು ಭಾರತದ ಮೇಲೆ ಹೆಚ್ಚೇನು ಪರಿಣಾಮ ಬೀರಿರದ ಮಹತ್ವವನ್ನು ಪ್ರತಿಪಾದಿಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, `ಭಾರತೀಯ ಆರ್ಥಿಕತೆಯು ಸ್ಥಿರ ಉನ್ನತ ಬೆಳವಣಿಗೆ ದರವನ್ನು ದಾಖಲಿಸುವುದರೊಂದಿಗೆ, ಬಂಡವಾಳ ಹೂಡಿಕೆಗೆ ದೇಶವು ಅತ್ಯಾಕರ್ಷಕ ತಾಣವಾಗಿ ಹೊರಹೊಮ್ಮಿದೆ~ ಎಂದು ತಿಳಿಸಿದ್ದಾರೆ.<br /> <br /> ಇಲ್ಲಿ ಭಾರತದ ರಾಯಭಾರಿಯಾಗಿರುವ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪುತ್ರಿ ಚಿತ್ರಾ ಅವರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಭಾ, `ಭಾರತವು ಬಂಡವಾಳ, ವಿದೇಶಿ ನೇರ ಹೂಡಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಜಾಗತಿಕ ಅತ್ಯಾಕರ್ಷಣೆಯ ಕೇಂದ್ರವಾಗಿದೆ~ ಎಂದರು.<br /> <br /> `ಭಾರತದ ಬೆಳವಣಿಕೆಯು ಪರಸ್ಪರ ಲಾಭದಾಯಕ ಸಹಕಾರದಡಿ ಅನೇಕ ಸದವಕಾಶಗಳನ್ನು ಕಲ್ಪಿಸಿದೆ. 2003ರಿಂದ ದೇಶದ ಆರ್ಥಿಕ ದರ ಸ್ಥಿರವಾಗಿ ಉನ್ನತ ಬೆಳವಣಿಗೆಯಲ್ಲಿದೆ. ಜಾಗತಿಕ ಆರ್ಥಿಕ ಕುಸಿತ ರಾಷ್ಟ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ~ ಎಂದು ಅವರು ಹೇಳಿದರು.<br /> <br /> `ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆ, ವಿದೇಶಿ ನೇರ ಬಂಡವಾಳ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದು, ಇದರಿಂದ ವಿಶ್ವದ ಅತ್ಯಂತ ಆಕರ್ಷಕ ಮಾರುಕಟ್ಟೆ ಪ್ರದೇಶವಾಗಿ ಭಾರತ ಇಂದು ಎದ್ದು ನಿಂತಿದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> 1991ರಲ್ಲಿ ಭಾರತೀಯ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ತೆರೆಯಲ್ಪಟ್ಟು, ಉತ್ತಮ ಸ್ಪರ್ಧೆಯನ್ನು ಎದುರಿಸಿತು. ಇದರಿಂದ ಜಾಗತಿಕವಾಗಿ ದೇಶದ ವಾಣಿಜ್ಯ ವ್ಯವಹಾರ ವಿಸ್ತರಿಸಿತು ಎಂದೂ ತಿಳಿಸಿದರು.<br /> <br /> `ದೇಶದ ಆರ್ಥಿಕ ಬೆಳವಣಿಗೆಯು ಸಮಾಜದ ಎಲ್ಲ ವರ್ಗಗಳನ್ನು, ಅದರಲ್ಲೂ ವಿಶೇಷವಾಗಿ ಬಡವರನ್ನು ತಲುಪಬೇಕಿದ್ದು, ಇದರಿಂದ ಅವರು ಉತ್ತಮ ಜೀವನ ಸಾಗಿಸಬಹುದು. ಇದು ನಮ್ಮ ಜನಸಂಖ್ಯೆಯ ಶೇ 50ರಷ್ಟಿರುವ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಸವಾಲುಗಳನ್ನು ಎದುರಿಸಲು ನೆರವಾಗಬೇಕು. <br /> <br /> ಉನ್ನತ ಶಿಕ್ಷಣ ಮತ್ತು ತರಬೇತಿಯ ಮೂಲಕ ದೇಶದ ಎಲ್ಲ ಭಾಗಗಳ ಜನರಿಗೂ ಆರ್ಥಿಕ ಅಭಿವೃದ್ಧಿಯ ಲಾಭ ಸಿಗಬೇಕು~ ಎಂದು ಅವರು ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಿನಿವಾ (ಪಿಟಿಐ):</strong> ಜಾಗತಿಕ ಆರ್ಥಿಕ ಕುಸಿತವು ಭಾರತದ ಮೇಲೆ ಹೆಚ್ಚೇನು ಪರಿಣಾಮ ಬೀರಿರದ ಮಹತ್ವವನ್ನು ಪ್ರತಿಪಾದಿಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, `ಭಾರತೀಯ ಆರ್ಥಿಕತೆಯು ಸ್ಥಿರ ಉನ್ನತ ಬೆಳವಣಿಗೆ ದರವನ್ನು ದಾಖಲಿಸುವುದರೊಂದಿಗೆ, ಬಂಡವಾಳ ಹೂಡಿಕೆಗೆ ದೇಶವು ಅತ್ಯಾಕರ್ಷಕ ತಾಣವಾಗಿ ಹೊರಹೊಮ್ಮಿದೆ~ ಎಂದು ತಿಳಿಸಿದ್ದಾರೆ.<br /> <br /> ಇಲ್ಲಿ ಭಾರತದ ರಾಯಭಾರಿಯಾಗಿರುವ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪುತ್ರಿ ಚಿತ್ರಾ ಅವರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಭಾ, `ಭಾರತವು ಬಂಡವಾಳ, ವಿದೇಶಿ ನೇರ ಹೂಡಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಜಾಗತಿಕ ಅತ್ಯಾಕರ್ಷಣೆಯ ಕೇಂದ್ರವಾಗಿದೆ~ ಎಂದರು.<br /> <br /> `ಭಾರತದ ಬೆಳವಣಿಕೆಯು ಪರಸ್ಪರ ಲಾಭದಾಯಕ ಸಹಕಾರದಡಿ ಅನೇಕ ಸದವಕಾಶಗಳನ್ನು ಕಲ್ಪಿಸಿದೆ. 2003ರಿಂದ ದೇಶದ ಆರ್ಥಿಕ ದರ ಸ್ಥಿರವಾಗಿ ಉನ್ನತ ಬೆಳವಣಿಗೆಯಲ್ಲಿದೆ. ಜಾಗತಿಕ ಆರ್ಥಿಕ ಕುಸಿತ ರಾಷ್ಟ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ~ ಎಂದು ಅವರು ಹೇಳಿದರು.<br /> <br /> `ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆ, ವಿದೇಶಿ ನೇರ ಬಂಡವಾಳ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದು, ಇದರಿಂದ ವಿಶ್ವದ ಅತ್ಯಂತ ಆಕರ್ಷಕ ಮಾರುಕಟ್ಟೆ ಪ್ರದೇಶವಾಗಿ ಭಾರತ ಇಂದು ಎದ್ದು ನಿಂತಿದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> 1991ರಲ್ಲಿ ಭಾರತೀಯ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ತೆರೆಯಲ್ಪಟ್ಟು, ಉತ್ತಮ ಸ್ಪರ್ಧೆಯನ್ನು ಎದುರಿಸಿತು. ಇದರಿಂದ ಜಾಗತಿಕವಾಗಿ ದೇಶದ ವಾಣಿಜ್ಯ ವ್ಯವಹಾರ ವಿಸ್ತರಿಸಿತು ಎಂದೂ ತಿಳಿಸಿದರು.<br /> <br /> `ದೇಶದ ಆರ್ಥಿಕ ಬೆಳವಣಿಗೆಯು ಸಮಾಜದ ಎಲ್ಲ ವರ್ಗಗಳನ್ನು, ಅದರಲ್ಲೂ ವಿಶೇಷವಾಗಿ ಬಡವರನ್ನು ತಲುಪಬೇಕಿದ್ದು, ಇದರಿಂದ ಅವರು ಉತ್ತಮ ಜೀವನ ಸಾಗಿಸಬಹುದು. ಇದು ನಮ್ಮ ಜನಸಂಖ್ಯೆಯ ಶೇ 50ರಷ್ಟಿರುವ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಸವಾಲುಗಳನ್ನು ಎದುರಿಸಲು ನೆರವಾಗಬೇಕು. <br /> <br /> ಉನ್ನತ ಶಿಕ್ಷಣ ಮತ್ತು ತರಬೇತಿಯ ಮೂಲಕ ದೇಶದ ಎಲ್ಲ ಭಾಗಗಳ ಜನರಿಗೂ ಆರ್ಥಿಕ ಅಭಿವೃದ್ಧಿಯ ಲಾಭ ಸಿಗಬೇಕು~ ಎಂದು ಅವರು ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>