<p><strong>ಕೋಲ್ಕತ್ತ (ಐಎಎನ್ಎಸ್):</strong> ಬಡತನ ಮತ್ತು ನಿರುದ್ಯೋಗ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಇನ್ಫೋಸಿಸ್ನ ವಿಶ್ರಾಂತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಗಮನ ಸೆಳೆದಿದ್ದಾರೆ.<br /> <br /> `ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಉತ್ತೇಜನ ನೀಡುವ ಮೂಲಕ ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಸಬಹುದು. `ಎಫ್ಡಿಐ~ ಮತ್ತು ಉದ್ಯಮಶೀಲತೆ ಮೂಲಕ ಬಡ ವರ್ಗದ ಯುವ ಸಮೂಹ ಗುಣಮಟ್ಟದ ಜೀವನ ಸಾಗಿಸಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು~ ಎಂದು ಅವರು ಶುಕ್ರವಾರ ಇಲ್ಲಿ ಶಿಕ್ಷಣ ಸಂಸ್ಥೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು. <br /> <br /> `ಸರ್ಕಾರದ ಯೋಜನೆಗಳು ಉದ್ಯೋಗಾವಕಾಶ ಸೃಷ್ಟಿಸುತ್ತಿಲ್ಲವೇ? ಎಂಬ ಪ್ರಶ್ನೆಗೆ ಮೂರ್ತಿ `ಸುಮ್ಮನೆ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ. ನಾವೆಲ್ಲ ಜತೆಗೂಡಿ ಕಾರ್ಯನಿರ್ವಹಿಸಬೇಕು~ ಎಂದರು. <br /> <br /> <strong>ಕೋಲ್ಕತ್ತ ಘಟಕ- ವಿಶ್ವಾಸ:</strong> ಕೋಲ್ಕತ್ತ ದಲ್ಲಿ ಇನ್ಫೋಸಿಸ್ ಘಟಕ ಖಂಡಿತ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, `ಈ ವಿಚಾರದಲ್ಲಿ ಸಂಶಯ ಬೇಡ. ಎಲ್ಲ ಸಮಸ್ಯೆಗಳಿಗೂ ಖಂಡಿತ ಪರಿಹಾರವಿದೆ. ಈ ಘಟಕದಿಂದ ಐದು ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದಿದ್ದಾರೆ. <br /> <br /> ಪಶ್ಚಿಮ ಬಂಗಾಳ ಸರ್ಕಾರ ಇನ್ಫೋಸಿಸ್ಗೆ ಘಟಕ ಆರಂಭಿಸಲು ಇಲ್ಲಿಗೆ ಸಮೀಪದ ರಾಜರಾತ್ ಬಳಿ 50 ಏಕರೆ ಮಂಜೂರು ಮಾಡಿದೆ. ಆದರೆ, ಇನ್ಫೋಸಿಸ್ ಈ ಘಟಕಕ್ಕೆ ವಿಶೇಷ ಆರ್ಥಿಕ ವಲಯ(ಎಸ್ಇಜೆಡ್) ಸ್ಥಾನ ಮಾನ ನೀಡಬೇಕೆಂದು ಆಗ್ರಹಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ (ಐಎಎನ್ಎಸ್):</strong> ಬಡತನ ಮತ್ತು ನಿರುದ್ಯೋಗ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಇನ್ಫೋಸಿಸ್ನ ವಿಶ್ರಾಂತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಗಮನ ಸೆಳೆದಿದ್ದಾರೆ.<br /> <br /> `ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಉತ್ತೇಜನ ನೀಡುವ ಮೂಲಕ ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಸಬಹುದು. `ಎಫ್ಡಿಐ~ ಮತ್ತು ಉದ್ಯಮಶೀಲತೆ ಮೂಲಕ ಬಡ ವರ್ಗದ ಯುವ ಸಮೂಹ ಗುಣಮಟ್ಟದ ಜೀವನ ಸಾಗಿಸಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು~ ಎಂದು ಅವರು ಶುಕ್ರವಾರ ಇಲ್ಲಿ ಶಿಕ್ಷಣ ಸಂಸ್ಥೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು. <br /> <br /> `ಸರ್ಕಾರದ ಯೋಜನೆಗಳು ಉದ್ಯೋಗಾವಕಾಶ ಸೃಷ್ಟಿಸುತ್ತಿಲ್ಲವೇ? ಎಂಬ ಪ್ರಶ್ನೆಗೆ ಮೂರ್ತಿ `ಸುಮ್ಮನೆ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ. ನಾವೆಲ್ಲ ಜತೆಗೂಡಿ ಕಾರ್ಯನಿರ್ವಹಿಸಬೇಕು~ ಎಂದರು. <br /> <br /> <strong>ಕೋಲ್ಕತ್ತ ಘಟಕ- ವಿಶ್ವಾಸ:</strong> ಕೋಲ್ಕತ್ತ ದಲ್ಲಿ ಇನ್ಫೋಸಿಸ್ ಘಟಕ ಖಂಡಿತ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, `ಈ ವಿಚಾರದಲ್ಲಿ ಸಂಶಯ ಬೇಡ. ಎಲ್ಲ ಸಮಸ್ಯೆಗಳಿಗೂ ಖಂಡಿತ ಪರಿಹಾರವಿದೆ. ಈ ಘಟಕದಿಂದ ಐದು ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದಿದ್ದಾರೆ. <br /> <br /> ಪಶ್ಚಿಮ ಬಂಗಾಳ ಸರ್ಕಾರ ಇನ್ಫೋಸಿಸ್ಗೆ ಘಟಕ ಆರಂಭಿಸಲು ಇಲ್ಲಿಗೆ ಸಮೀಪದ ರಾಜರಾತ್ ಬಳಿ 50 ಏಕರೆ ಮಂಜೂರು ಮಾಡಿದೆ. ಆದರೆ, ಇನ್ಫೋಸಿಸ್ ಈ ಘಟಕಕ್ಕೆ ವಿಶೇಷ ಆರ್ಥಿಕ ವಲಯ(ಎಸ್ಇಜೆಡ್) ಸ್ಥಾನ ಮಾನ ನೀಡಬೇಕೆಂದು ಆಗ್ರಹಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>