<p><strong>ಯಮಕನಮರಡಿ: </strong>ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಚಿಕ್ಕಾಲಗುಡ್ಡ, ಹೆಬ್ಬಾಳ, ಹತ್ತರಗಿ, ಉಳ್ಳಾಗಡ್ಡಿ-ಖಾನಾಪೂರ, ಯಮಕನಮರಡಿ, ಹಿಡಕಲ್ ಡ್ಯಾಂ, ಪಾಶ್ಚಾಪೂರ, ಇಸ್ಲಾಂಪೂರ ಶಾಹಬಂದರ್ ಹಾಗೂ ಬೆಳಗಾವಿ ತಾಲ್ಲೂಕಿನ ವಲಯದ ಕೆಲ ಹಳ್ಳಿಗಳು ಸೇರಿದಂತೆ ಮಹಾರಾಷ್ಟ್ರದ ಗಡಿಭಾಗದ ಕೆಲ ಹಳ್ಳಿಗಳಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್ ಸಾರ್ವಜನಿಕರನ್ನು ಪರದಾಡುವಂತೆ ಮಾಡಿದೆ. <br /> <br /> ಕಾರಣ ಈ ಹೆಲಿಕಾಪ್ಟರ್ ಬೃಹತ್, ವರ್ತುಳಾಕಾರದ ಅಂದಾಜು 450 ಕೆ.ಜಿ. ಯಂತ್ರವನ್ನು ಹೊತ್ತು ಗ್ರಾಮೀಣ ವಲಯಗಳಲ್ಲಿ ಸಂಚರಿಸುತ್ತಿರುವುದರಿಂದ ಜನರಿಗೆ ಈ ಹೆಲಿಕಾಪ್ಟರ್ ಹಾರಾಟದ ಹಿಂದನ ಗುಟ್ಟೇನು ಎಂಬುದು ತಿಳಿಯದಾಗಿದೆ.<br /> <br /> <strong>ಖನಿಜ ವಸ್ತುಗಳ ಹುಡುಕಾಟ: </strong>ಬಹುತೇಕ ಜನರ ಅನಿಸಿಕೆ ಪ್ರಕಾರ, ಯುರೇನಿಯಂ, ಮ್ಯಾಂಗನೀಸ್, ಅಲ್ಯೂಮಿನಿಯಂ, ಬಾಕ್ಸೈಟ್ ಕ್ರೊಮಿಯಂ ಮುಂತಾದ ಖನಿಜ ವಸ್ತುಗಳು ಯಾವ ಸ್ಥಳದಲ್ಲಿ ದೊರೆಯುತ್ತವೆ ಎಂಬ ಬಗ್ಗೆ ಹುಡುಕಾಟ ನಡೆದಿದೆ ಎನ್ನಲಾಗಿದೆ. <br /> <br /> <strong>ಮಕ್ಕಳಲ್ಲಿ ಹರುಷವೋ ಹರುಷ : </strong>ಒಂದೆಡೆ ಕೃಷಿಕರು ‘ನಮ್ಮ ಭೂಮಿಗಳಲ್ಲಿ ಖನಿಜ ವಸ್ತುಗಳು ದೊರೆತರೆ ನಮ್ಮ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದೆ?’ ಎಂದು ದಿಗಿಲುಗೊಂಡಿದ್ದಾರೆ. ಇನ್ನೊಂದೆಡೆ ಚಿಕ್ಕ ಮಕ್ಕಳಿಗೆ ಹಾರಾಡುವ ಹೆಲಿಕಾಪ್ಟರ್ ನಿತ್ಯದ ಮನರಂಜನೆ.<br /> <br /> ಹೆಲಿಕಾಪ್ಟರ್ ಹಾರಾಟದ ಹಿಂದಿನ ಮರ್ಮವೇನು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, ರೈತರಿಗಂತೂ ಭೂಮಿ ಕಳೆದುಕೊಳ್ಳುವ ಆತಂಕ ಇದ್ದೇ ಇದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಹೆಲಿಕಾಪ್ಟರ್ ಹಾರಾಟದ ಮಾಹಿತಿ ಇಲ್ಲ.<br /> <br /> ಈ ಹೆಲಿಕಾಪ್ಟರ್ನಲ್ಲಿ ಸಂಚರಿಸುವ ಸಿಬ್ಬಂದಿ ಮಾತ್ರ ದಿನ ನಿತ್ಯ ಉಳ್ಳಾಗಡ್ಡಿ- ಖಾನಾಪುರದ ಸಮೀಪವಿರುವ ಪೂಂಜಲಾಯ್ಡಿ ಕಚೇರಿಯ ಬದಿಯಲ್ಲೇ ತಂಗಿದ್ದು, ನಿತ್ಯ ಈ ಸ್ಥಳದಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಮಕನಮರಡಿ: </strong>ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಚಿಕ್ಕಾಲಗುಡ್ಡ, ಹೆಬ್ಬಾಳ, ಹತ್ತರಗಿ, ಉಳ್ಳಾಗಡ್ಡಿ-ಖಾನಾಪೂರ, ಯಮಕನಮರಡಿ, ಹಿಡಕಲ್ ಡ್ಯಾಂ, ಪಾಶ್ಚಾಪೂರ, ಇಸ್ಲಾಂಪೂರ ಶಾಹಬಂದರ್ ಹಾಗೂ ಬೆಳಗಾವಿ ತಾಲ್ಲೂಕಿನ ವಲಯದ ಕೆಲ ಹಳ್ಳಿಗಳು ಸೇರಿದಂತೆ ಮಹಾರಾಷ್ಟ್ರದ ಗಡಿಭಾಗದ ಕೆಲ ಹಳ್ಳಿಗಳಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್ ಸಾರ್ವಜನಿಕರನ್ನು ಪರದಾಡುವಂತೆ ಮಾಡಿದೆ. <br /> <br /> ಕಾರಣ ಈ ಹೆಲಿಕಾಪ್ಟರ್ ಬೃಹತ್, ವರ್ತುಳಾಕಾರದ ಅಂದಾಜು 450 ಕೆ.ಜಿ. ಯಂತ್ರವನ್ನು ಹೊತ್ತು ಗ್ರಾಮೀಣ ವಲಯಗಳಲ್ಲಿ ಸಂಚರಿಸುತ್ತಿರುವುದರಿಂದ ಜನರಿಗೆ ಈ ಹೆಲಿಕಾಪ್ಟರ್ ಹಾರಾಟದ ಹಿಂದನ ಗುಟ್ಟೇನು ಎಂಬುದು ತಿಳಿಯದಾಗಿದೆ.<br /> <br /> <strong>ಖನಿಜ ವಸ್ತುಗಳ ಹುಡುಕಾಟ: </strong>ಬಹುತೇಕ ಜನರ ಅನಿಸಿಕೆ ಪ್ರಕಾರ, ಯುರೇನಿಯಂ, ಮ್ಯಾಂಗನೀಸ್, ಅಲ್ಯೂಮಿನಿಯಂ, ಬಾಕ್ಸೈಟ್ ಕ್ರೊಮಿಯಂ ಮುಂತಾದ ಖನಿಜ ವಸ್ತುಗಳು ಯಾವ ಸ್ಥಳದಲ್ಲಿ ದೊರೆಯುತ್ತವೆ ಎಂಬ ಬಗ್ಗೆ ಹುಡುಕಾಟ ನಡೆದಿದೆ ಎನ್ನಲಾಗಿದೆ. <br /> <br /> <strong>ಮಕ್ಕಳಲ್ಲಿ ಹರುಷವೋ ಹರುಷ : </strong>ಒಂದೆಡೆ ಕೃಷಿಕರು ‘ನಮ್ಮ ಭೂಮಿಗಳಲ್ಲಿ ಖನಿಜ ವಸ್ತುಗಳು ದೊರೆತರೆ ನಮ್ಮ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದೆ?’ ಎಂದು ದಿಗಿಲುಗೊಂಡಿದ್ದಾರೆ. ಇನ್ನೊಂದೆಡೆ ಚಿಕ್ಕ ಮಕ್ಕಳಿಗೆ ಹಾರಾಡುವ ಹೆಲಿಕಾಪ್ಟರ್ ನಿತ್ಯದ ಮನರಂಜನೆ.<br /> <br /> ಹೆಲಿಕಾಪ್ಟರ್ ಹಾರಾಟದ ಹಿಂದಿನ ಮರ್ಮವೇನು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, ರೈತರಿಗಂತೂ ಭೂಮಿ ಕಳೆದುಕೊಳ್ಳುವ ಆತಂಕ ಇದ್ದೇ ಇದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಹೆಲಿಕಾಪ್ಟರ್ ಹಾರಾಟದ ಮಾಹಿತಿ ಇಲ್ಲ.<br /> <br /> ಈ ಹೆಲಿಕಾಪ್ಟರ್ನಲ್ಲಿ ಸಂಚರಿಸುವ ಸಿಬ್ಬಂದಿ ಮಾತ್ರ ದಿನ ನಿತ್ಯ ಉಳ್ಳಾಗಡ್ಡಿ- ಖಾನಾಪುರದ ಸಮೀಪವಿರುವ ಪೂಂಜಲಾಯ್ಡಿ ಕಚೇರಿಯ ಬದಿಯಲ್ಲೇ ತಂಗಿದ್ದು, ನಿತ್ಯ ಈ ಸ್ಥಳದಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>