<p>ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಎ.ಎಸ್. ಪ್ರೇಮನಾಥ ಅವರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹೊಸದಾಗಿ ಹುದ್ದೆ ಸೃಷ್ಟಿ ಮಾಡಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದು ಮಾಡಿದೆ. <br /> <br /> ಕಳೆದ ಜುಲೈ 2ರಂದು ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆರ್.ರಾಮಲಿಂಗೇಗೌಡ ಹಾಗೂ ನಿರ್ದೇಶಕ (ಮಾನವ ಸಂಪನ್ಮೂಲ ಹಾಗೂ ತರಬೇತಿ) ಡಾ. ಎಂ.ಎನ್.ವೆಂಕಟರಾಮು ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮಾನ್ಯ ಮಾಡಿದ್ದಾರೆ.<br /> <br /> ಸೇವಾ ಹಿರಿತನದಲ್ಲಿ ತಮಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಿರುವ ಪ್ರೇಮನಾಥ ಅವರಿಗಾಗಿ ಕಾನೂನು ಮೀರಿ ಹೊಸ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಇದನ್ನು ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದಾರೆ.<br /> <br /> ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿರುವುದು ಇಷ್ಟು..<br /> <br /> `ರಾಮಲಿಂಗೇಗೌಡ ಅವರ ಹುದ್ದೆಯನ್ನು ವ್ಯವಸ್ಥಾಪಕ ನಿರ್ದೇಶಕ (ಯೋಜನೆ ಮತ್ತು ತರಬೇತಿ) ಎಂದು ಬದಲಾಯಿಸಿ ಹೊಸದಾಗಿ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದಕ್ಕೆ ಕಾನೂನಿನ ಅಡಿ ಮಾನ್ಯತೆ ಇಲ್ಲ. <br /> ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಇದಕ್ಕೆ ಅನುಮೋದನೆ ನೀಡಿರುವುದು ಅಚ್ಚರಿ ತರುವಂಥದ್ದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.<br /> <br /> `ಗೌಡ ಅವರಿಗೆ ಎಂಡಿ ಹುದ್ದೆಗೆ ಬಡ್ತಿ ಸಿಕ್ಕ ನಂತರ ಅದನ್ನು ತಡೆಯುವ ನಿಟ್ಟಿನಲ್ಲಿ ನಿರ್ದೇಶಕರ ಮಂಡಳಿ ಸರ್ವ ಪ್ರಯತ್ನ ಮಾಡಿದೆ. <br /> <br /> ಈ ಕುರಿತು ಹೈಕೋರ್ಟ್ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಗೌಡ ಅವರ ವಿರುದ್ಧ ಹಲವಾರು ಗಂಭೀರ ಸ್ವರೂಪದ ಆಪಾದನೆಗಳು ಇರುವುದಾಗಿ ತಿಳಿಸುವ ಮೂಲಕ ಪ್ರೇಮನಾಥ ಅವರಿಗೆ ಹುದ್ದೆ ನೀಡಲು ಹುನ್ನಾರ ನಡೆಸಲಾಗಿದೆ.<br /> <br /> `ಇಂತಹ ಹುನ್ನಾರ ನಡೆಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ನಿರ್ದೇಶಕರ ಮಂಡಳಿ, ಅದರ ಬದಲು ಎಂಡಿ ಹುದ್ದೆಯ ಸಮಾನಾಂತರ ಹುದ್ದೆ ಸೃಷ್ಟಿಗೆ ಮುಂದಾಗಿದೆ. ಇದಕ್ಕೆ ರಿಜಿಸ್ಟ್ರಾರ್ ಅಂಕಿತ ಕೂಡ ಬಿದ್ದಿದೆ. ಇದು ಕೆಎಂಎಫ್ ಬೈಲಾಗಳಿಗೆ ವಿರುದ್ಧವಾದುದು~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಎ.ಎಸ್. ಪ್ರೇಮನಾಥ ಅವರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹೊಸದಾಗಿ ಹುದ್ದೆ ಸೃಷ್ಟಿ ಮಾಡಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದು ಮಾಡಿದೆ. <br /> <br /> ಕಳೆದ ಜುಲೈ 2ರಂದು ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆರ್.ರಾಮಲಿಂಗೇಗೌಡ ಹಾಗೂ ನಿರ್ದೇಶಕ (ಮಾನವ ಸಂಪನ್ಮೂಲ ಹಾಗೂ ತರಬೇತಿ) ಡಾ. ಎಂ.ಎನ್.ವೆಂಕಟರಾಮು ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮಾನ್ಯ ಮಾಡಿದ್ದಾರೆ.<br /> <br /> ಸೇವಾ ಹಿರಿತನದಲ್ಲಿ ತಮಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಿರುವ ಪ್ರೇಮನಾಥ ಅವರಿಗಾಗಿ ಕಾನೂನು ಮೀರಿ ಹೊಸ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಇದನ್ನು ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದಾರೆ.<br /> <br /> ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿರುವುದು ಇಷ್ಟು..<br /> <br /> `ರಾಮಲಿಂಗೇಗೌಡ ಅವರ ಹುದ್ದೆಯನ್ನು ವ್ಯವಸ್ಥಾಪಕ ನಿರ್ದೇಶಕ (ಯೋಜನೆ ಮತ್ತು ತರಬೇತಿ) ಎಂದು ಬದಲಾಯಿಸಿ ಹೊಸದಾಗಿ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದಕ್ಕೆ ಕಾನೂನಿನ ಅಡಿ ಮಾನ್ಯತೆ ಇಲ್ಲ. <br /> ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಇದಕ್ಕೆ ಅನುಮೋದನೆ ನೀಡಿರುವುದು ಅಚ್ಚರಿ ತರುವಂಥದ್ದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.<br /> <br /> `ಗೌಡ ಅವರಿಗೆ ಎಂಡಿ ಹುದ್ದೆಗೆ ಬಡ್ತಿ ಸಿಕ್ಕ ನಂತರ ಅದನ್ನು ತಡೆಯುವ ನಿಟ್ಟಿನಲ್ಲಿ ನಿರ್ದೇಶಕರ ಮಂಡಳಿ ಸರ್ವ ಪ್ರಯತ್ನ ಮಾಡಿದೆ. <br /> <br /> ಈ ಕುರಿತು ಹೈಕೋರ್ಟ್ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಗೌಡ ಅವರ ವಿರುದ್ಧ ಹಲವಾರು ಗಂಭೀರ ಸ್ವರೂಪದ ಆಪಾದನೆಗಳು ಇರುವುದಾಗಿ ತಿಳಿಸುವ ಮೂಲಕ ಪ್ರೇಮನಾಥ ಅವರಿಗೆ ಹುದ್ದೆ ನೀಡಲು ಹುನ್ನಾರ ನಡೆಸಲಾಗಿದೆ.<br /> <br /> `ಇಂತಹ ಹುನ್ನಾರ ನಡೆಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ನಿರ್ದೇಶಕರ ಮಂಡಳಿ, ಅದರ ಬದಲು ಎಂಡಿ ಹುದ್ದೆಯ ಸಮಾನಾಂತರ ಹುದ್ದೆ ಸೃಷ್ಟಿಗೆ ಮುಂದಾಗಿದೆ. ಇದಕ್ಕೆ ರಿಜಿಸ್ಟ್ರಾರ್ ಅಂಕಿತ ಕೂಡ ಬಿದ್ದಿದೆ. ಇದು ಕೆಎಂಎಫ್ ಬೈಲಾಗಳಿಗೆ ವಿರುದ್ಧವಾದುದು~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>