<p>‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂದು ಇಡೀ ಜೀವನದ ಸಾರಾಂಶವನ್ನು ತಮ್ಮ ಸರಳ ಸಾಲುಗಳಲ್ಲಿ ಹೇಳಿದರು ಕವಿ ದ.ರಾ. ಬೇಂದ್ರೆ. ದಾಂಪತ್ಯ ಅನ್ನುವುದು ‘ಅಧಿಕಾರ-ಜವಾಬ್ದಾರಿ’ ಎನ್ನುವ ಪದಗಳ ಕಟ್ಟುಪಾಡಿನಲ್ಲಿ ಬರುವುದಲ್ಲ, ಪರಸ್ಪರ ಹೊಂದಾಣಿಕೆ ಇದ್ದರೆ ಈ ಪದಗಳು ತಮ್ಮದೇ ಆದ ವಿಶಾಲ ಅರ್ಥದಲ್ಲಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಬಿಡುತ್ತವೆ.<br /> <br /> ಈಗಿನ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಮಾನಸಿಕವಾಗಿ-ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ದಾಂಪತ್ಯದ ವಿಷಯದಲ್ಲಿ ಜವಾಬ್ದಾರಿ-ಅಧಿಕಾರಗಳು ಅವರಿಬ್ಬರ ವಿಶಾಲ ಮನಸ್ಥಿತಿಯ ಮೇಲೆ ಅವಲಂಬಿತವಾಗುತ್ತವೆ. ಈಗ ಸಮಾನತೆ, ಸಮಾನರು ಎಂಬ ವಾದಗಳು ನಡೆಯುತ್ತಿದ್ದರೂ, ತಮ್ಮದೇ ಆದ ಮಿತಿಗಳಿವೆ ಎಂದು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.<br /> <br /> ಗಂಡನೊಂದಿಗೆ ಎಲ್ಲ ವಿಷಯಗಳಲ್ಲೂ ಸಮಾನತೆಗೆ ಹೋರಾಡುತ್ತೇನೆ ಎಂದು ಹೆಂಡತಿ ಹೇಳಿದರೆ ಅದು ಬಾಲಿಶ ಅನಿಸುತ್ತದೆ. ಮುಕ್ತವಾದ ಮಾತುಕತೆ ಒಂದು ಒಳ್ಳೆಯ ದಾಂಪತ್ಯದ ಭದ್ರ ಬುನಾದಿ. ಯಾವುದೇ ವಿಷಯದ ಕುರಿತು ಮುಕ್ತವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯ ಬೆಳವಣಿಗೆ. <br /> <br /> ಇತರರಿಗೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುವ ಅನೇಕರು ನಮಗೆ ಕಾಣಸಿಗುತ್ತಾರೆ. ಸಕಾರಾತ್ಮಕ ಚಿಂತನೆ ಇದ್ದ ಕಡೆ ಅಧಿಕಾರದ ದರ್ಪ ಸಾಧ್ಯವೇ ಇಲ್ಲ! ಪ್ರಾಮಾಣಿಕತೆ ಇರುವ ಕಡೆ ಜವಾಬ್ದಾರಿ ಅಸಹನೀಯ ಆಗುವುದೂ ಇಲ್ಲ! ಪರಸ್ಪರ ಕೇಳುವ-ತಿಳಿಯುವ ಭಾವವು ಹೃದಯದಿಂದಲೇ ಮೂಡಬೇಕು. ಹಾಗಾದಾಗ ಈ ಪದಗಳು ಕಟ್ಟುಪಾಡುಗಳಾಗದೇ, ಪರಸ್ಪರ ಕೊಡು-ಕೊಳ್ಳುವಿಕೆಯ ಸಂತಸದ ಕ್ಷಣಗಳಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂದು ಇಡೀ ಜೀವನದ ಸಾರಾಂಶವನ್ನು ತಮ್ಮ ಸರಳ ಸಾಲುಗಳಲ್ಲಿ ಹೇಳಿದರು ಕವಿ ದ.ರಾ. ಬೇಂದ್ರೆ. ದಾಂಪತ್ಯ ಅನ್ನುವುದು ‘ಅಧಿಕಾರ-ಜವಾಬ್ದಾರಿ’ ಎನ್ನುವ ಪದಗಳ ಕಟ್ಟುಪಾಡಿನಲ್ಲಿ ಬರುವುದಲ್ಲ, ಪರಸ್ಪರ ಹೊಂದಾಣಿಕೆ ಇದ್ದರೆ ಈ ಪದಗಳು ತಮ್ಮದೇ ಆದ ವಿಶಾಲ ಅರ್ಥದಲ್ಲಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಬಿಡುತ್ತವೆ.<br /> <br /> ಈಗಿನ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಮಾನಸಿಕವಾಗಿ-ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ದಾಂಪತ್ಯದ ವಿಷಯದಲ್ಲಿ ಜವಾಬ್ದಾರಿ-ಅಧಿಕಾರಗಳು ಅವರಿಬ್ಬರ ವಿಶಾಲ ಮನಸ್ಥಿತಿಯ ಮೇಲೆ ಅವಲಂಬಿತವಾಗುತ್ತವೆ. ಈಗ ಸಮಾನತೆ, ಸಮಾನರು ಎಂಬ ವಾದಗಳು ನಡೆಯುತ್ತಿದ್ದರೂ, ತಮ್ಮದೇ ಆದ ಮಿತಿಗಳಿವೆ ಎಂದು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.<br /> <br /> ಗಂಡನೊಂದಿಗೆ ಎಲ್ಲ ವಿಷಯಗಳಲ್ಲೂ ಸಮಾನತೆಗೆ ಹೋರಾಡುತ್ತೇನೆ ಎಂದು ಹೆಂಡತಿ ಹೇಳಿದರೆ ಅದು ಬಾಲಿಶ ಅನಿಸುತ್ತದೆ. ಮುಕ್ತವಾದ ಮಾತುಕತೆ ಒಂದು ಒಳ್ಳೆಯ ದಾಂಪತ್ಯದ ಭದ್ರ ಬುನಾದಿ. ಯಾವುದೇ ವಿಷಯದ ಕುರಿತು ಮುಕ್ತವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯ ಬೆಳವಣಿಗೆ. <br /> <br /> ಇತರರಿಗೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುವ ಅನೇಕರು ನಮಗೆ ಕಾಣಸಿಗುತ್ತಾರೆ. ಸಕಾರಾತ್ಮಕ ಚಿಂತನೆ ಇದ್ದ ಕಡೆ ಅಧಿಕಾರದ ದರ್ಪ ಸಾಧ್ಯವೇ ಇಲ್ಲ! ಪ್ರಾಮಾಣಿಕತೆ ಇರುವ ಕಡೆ ಜವಾಬ್ದಾರಿ ಅಸಹನೀಯ ಆಗುವುದೂ ಇಲ್ಲ! ಪರಸ್ಪರ ಕೇಳುವ-ತಿಳಿಯುವ ಭಾವವು ಹೃದಯದಿಂದಲೇ ಮೂಡಬೇಕು. ಹಾಗಾದಾಗ ಈ ಪದಗಳು ಕಟ್ಟುಪಾಡುಗಳಾಗದೇ, ಪರಸ್ಪರ ಕೊಡು-ಕೊಳ್ಳುವಿಕೆಯ ಸಂತಸದ ಕ್ಷಣಗಳಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>