<p>ಕೋಲ್ಕತ್ತ (ಪಿಟಿಐ): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯಲಿರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಗೊಂಡ ನಿಲುವು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.</p>.<p>ಹಿರಿಯ ಕ್ಯುರೇಟರ್ ಪ್ರಬೀರ್ ಮುಖರ್ಜಿ ಅವರ ಬದಲು ಪೂರ್ವ ವಲಯದ ಕ್ಯುರೇಟರ್ ಆಶೀಶ್ ಭೌಮಿಕ್ ಅವರಲ್ಲಿ ಈಡನ್ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿದೆ. ಮಾತ್ರವಲ್ಲ ಪಿಚ್ ಸಿದ್ಧಪಡಿಸಲು ಆಶೀಶ್ ಅವರನ್ನು ನೇಮಿಸುವಂತೆ ಮಂಡಳಿಯು ಬಂಗಾಳ ಕ್ರಿಕೆಟ್ ಸಂಸ್ಥೆಗೆ (ಸಿಎಬಿ) ತಿಳಿಸಿದೆ.</p>.<p>ಕಳೆದ ಕೆಲ ವರ್ಷಗಳಿಂದ ಈಡನ್ ಪಿಚ್ನ್ನು ನೋಡಿಕೊಳ್ಳುತ್ತಿರುವ ಪ್ರಬೀರ್ ಅವರನ್ನು ಕಡೆಗಣಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತ್ರಿಪುರ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಭೌಮಿಕ್ ಬಿಸಿಸಿಐ ಸೂಚನೆಯಂತೆ ಬುಧವಾರ ಕೋಲ್ಕತ್ತಕ್ಕೆ ಆಗಮಿಸಿದರು. ಮೂರನೇ ಟೆಸ್ಟ್ ಡಿಸೆಂಬರ್ 5 ರಿಂದ ಆರಂಭವಾಗಲಿದೆ.</p>.<p>ಈಡನ್ ಪಿಚ್ ಕ್ಯುರೇಟರ್ ಪ್ರಬೀರ್ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎನ್ನಲಾಗಿದೆ. ಮೂರನೇ ಟೆಸ್ಟ್ಗೆ ಸಿದ್ಧಪಡಿಸುವ ಪಿಚ್ ಮೊದಲ ದಿನದಿಂದಲೇ ಸ್ಪಿನ್ನರ್ಗಳಿಗೆ ನೆರವು ನೀಡಬೇಕು ಎಂದು ದೋನಿ ಹೇಳಿದ್ದರು. ಆದರೆ ಪ್ರಬೀರ್ ಇದಕ್ಕೆ ಒಪ್ಪಿಲ್ಲ.</p>.<p>`ಬಿಸಿಸಿಐ ನಿರ್ದೇಶನದಂತೆ ಭೌಮಿಕ್ ಕೋಲ್ಕತ್ತಕ್ಕೆ ತೆರಳುತ್ತಿದ್ದಾರೆ. ಸ್ಥಳೀಯ ಕ್ಯುರೇಟರ್ (ಪ್ರಬೀರ್) ಸ್ಥಾನವನ್ನು ಅವರು ತುಂಬಲಿದ್ದಾರೆಯೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ' ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅರಿಂದಮ್ ಗಂಗೂಲಿ ಹೇಳಿದ್ದಾರೆ.</p>.<p>ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಬಿ ಜಂಟಿ ಕಾರ್ಯದರ್ಶಿ ಸುಜನ್ ಮುಖರ್ಜಿ, `ಪ್ರತಿ ಪಂದ್ಯಕ್ಕೆ ಮುನ್ನ ಪಿಚ್ ಪರಿಶೀಲಿಸಲು ಕ್ಯುರೇಟರ್ಗಳು ಆಗಮಿಸುವುದು ವಾಡಿಕೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ. ಪ್ರಬೀರ್ ಈಡನ್ನ ಕ್ಯುರೇಟರ್ ಆಗಿ ಮುಂದುವರಿಯಲಿದ್ದಾರೆ. ಅವರನ್ನು ಬದಲಿಸಿಲ್ಲ' ಎಂದಿದ್ದಾರೆ.</p>.<p>ಭೌಮಿಕ್ ಅವರನ್ನು ಕೋಲ್ಕತ್ತಕ್ಕೆ ಕಳುಹಿಸುವ ನಿರ್ಧಾರವನ್ನು ಬಿಸಿಸಿಐ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಕೈಗೊಂಡಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ಮತ್ತು ಐಪಿಎಲ್ ಮುಖ್ಯಸ್ಥರೂ ಆಗಿರುವ ರಾಜೀವ್ ಶುಕ್ಲಾ ತಿಳಿಸಿದ್ದಾರೆ. `ಎಲ್ಲ ಕ್ಯುರೇಟರ್ಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುವರು. ದೋನಿ ಸೂಚನೆಯಂತೆ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎಂಬ ಸುದ್ದಿ ಸುಳ್ಳು. ಮಂಡಳಿಯ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ' ಎಂದು ನುಡಿದಿದ್ದಾರೆ.</p>.<p>83ರ ಹರೆಯದ ಪ್ರಬೀರ್ ಈ ಹಿಂದೆಯೂ ಹಲವು ಸಲ ದೋನಿ ಅವರ ಅಭಿಪ್ರಾಯವನ್ನು ಟೀಕಿಸಿದ್ದರು. `ಸ್ಪಿನ್ಗೆ ನೆರವು ನೀಡುವ ಪಿಚ್ ಬೇಕು ಎಂದು ಭಾರತ ತಂಡದ ನಾಯಕ ಬಹಿರಂಗ ಹೇಳಿಕೆ ನೀಡಿದ್ದು ದುರದೃಷ್ಟಕರ. ಸ್ಪಿನ್ ಪಿಚ್ ಸಿದ್ಧಪಡಿಸಬೇಕೆಂದರೆ ಬಿಸಿಸಿಐನಿಂದ ಲಿಖಿತ ರೂಪದ ನಿರ್ದೇಶನ ಬೇಕು' ಎಂದು ಅವರು ತಿಳಿಸಿದ್ದರು.</p>.<p><strong>ಕಡೆಗಣಿಸಿದ್ದು ಹೌದು: ಪ್ರಬೀರ್</strong><br /> ಕೋಲ್ಕತ್ತ (ಐಎಎನ್ಎಸ್): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಬಿಸಿಸಿಐ ನನ್ನನ್ನು ಕಡೆಗಣಿಸಿದ್ದು ಹೌದು ಎಂದು ಪ್ರಬೀರ್ ಮುಖರ್ಜಿ ಹೇಳಿದ್ದಾರೆ.</p>.<p>`ಬಿಸಿಸಿಐ ಸೂಚನೆಯಂತೆ ಆಶೀಶ್ ಭೌಮಿಕ್ ಪಿಚ್ ಹಾಗೂ ಅಂಗಳದ ಉಸ್ತುವಾರಿ ವಹಿಸಿಕೊಂಡಿದ್ದು, ನನಗೆ ಹೆಚ್ಚಿನ ಅಧಿಕಾರ ನೀಡಿಲ್ಲ' ಎಂದಿದ್ದಾರೆ. `ಅವರು (ಭೌಮಿಕ್) ಈಗ ನನ್ನ ಬಾಸ್. ನಾನು ಏನಿದ್ದರೂ ಅವರ ಸೂಚನೆಯಂತೆ ಕೆಲಸ ನಿರ್ವಹಿಸಬೇಕಿದೆ' ಎಂದು ಪ್ರಬೀರ್ ನಿರಾಸೆಯಿಂದಲೇ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲ್ಕತ್ತ (ಪಿಟಿಐ): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯಲಿರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಗೊಂಡ ನಿಲುವು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.</p>.<p>ಹಿರಿಯ ಕ್ಯುರೇಟರ್ ಪ್ರಬೀರ್ ಮುಖರ್ಜಿ ಅವರ ಬದಲು ಪೂರ್ವ ವಲಯದ ಕ್ಯುರೇಟರ್ ಆಶೀಶ್ ಭೌಮಿಕ್ ಅವರಲ್ಲಿ ಈಡನ್ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿದೆ. ಮಾತ್ರವಲ್ಲ ಪಿಚ್ ಸಿದ್ಧಪಡಿಸಲು ಆಶೀಶ್ ಅವರನ್ನು ನೇಮಿಸುವಂತೆ ಮಂಡಳಿಯು ಬಂಗಾಳ ಕ್ರಿಕೆಟ್ ಸಂಸ್ಥೆಗೆ (ಸಿಎಬಿ) ತಿಳಿಸಿದೆ.</p>.<p>ಕಳೆದ ಕೆಲ ವರ್ಷಗಳಿಂದ ಈಡನ್ ಪಿಚ್ನ್ನು ನೋಡಿಕೊಳ್ಳುತ್ತಿರುವ ಪ್ರಬೀರ್ ಅವರನ್ನು ಕಡೆಗಣಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತ್ರಿಪುರ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಭೌಮಿಕ್ ಬಿಸಿಸಿಐ ಸೂಚನೆಯಂತೆ ಬುಧವಾರ ಕೋಲ್ಕತ್ತಕ್ಕೆ ಆಗಮಿಸಿದರು. ಮೂರನೇ ಟೆಸ್ಟ್ ಡಿಸೆಂಬರ್ 5 ರಿಂದ ಆರಂಭವಾಗಲಿದೆ.</p>.<p>ಈಡನ್ ಪಿಚ್ ಕ್ಯುರೇಟರ್ ಪ್ರಬೀರ್ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎನ್ನಲಾಗಿದೆ. ಮೂರನೇ ಟೆಸ್ಟ್ಗೆ ಸಿದ್ಧಪಡಿಸುವ ಪಿಚ್ ಮೊದಲ ದಿನದಿಂದಲೇ ಸ್ಪಿನ್ನರ್ಗಳಿಗೆ ನೆರವು ನೀಡಬೇಕು ಎಂದು ದೋನಿ ಹೇಳಿದ್ದರು. ಆದರೆ ಪ್ರಬೀರ್ ಇದಕ್ಕೆ ಒಪ್ಪಿಲ್ಲ.</p>.<p>`ಬಿಸಿಸಿಐ ನಿರ್ದೇಶನದಂತೆ ಭೌಮಿಕ್ ಕೋಲ್ಕತ್ತಕ್ಕೆ ತೆರಳುತ್ತಿದ್ದಾರೆ. ಸ್ಥಳೀಯ ಕ್ಯುರೇಟರ್ (ಪ್ರಬೀರ್) ಸ್ಥಾನವನ್ನು ಅವರು ತುಂಬಲಿದ್ದಾರೆಯೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ' ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅರಿಂದಮ್ ಗಂಗೂಲಿ ಹೇಳಿದ್ದಾರೆ.</p>.<p>ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಬಿ ಜಂಟಿ ಕಾರ್ಯದರ್ಶಿ ಸುಜನ್ ಮುಖರ್ಜಿ, `ಪ್ರತಿ ಪಂದ್ಯಕ್ಕೆ ಮುನ್ನ ಪಿಚ್ ಪರಿಶೀಲಿಸಲು ಕ್ಯುರೇಟರ್ಗಳು ಆಗಮಿಸುವುದು ವಾಡಿಕೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ. ಪ್ರಬೀರ್ ಈಡನ್ನ ಕ್ಯುರೇಟರ್ ಆಗಿ ಮುಂದುವರಿಯಲಿದ್ದಾರೆ. ಅವರನ್ನು ಬದಲಿಸಿಲ್ಲ' ಎಂದಿದ್ದಾರೆ.</p>.<p>ಭೌಮಿಕ್ ಅವರನ್ನು ಕೋಲ್ಕತ್ತಕ್ಕೆ ಕಳುಹಿಸುವ ನಿರ್ಧಾರವನ್ನು ಬಿಸಿಸಿಐ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಕೈಗೊಂಡಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ಮತ್ತು ಐಪಿಎಲ್ ಮುಖ್ಯಸ್ಥರೂ ಆಗಿರುವ ರಾಜೀವ್ ಶುಕ್ಲಾ ತಿಳಿಸಿದ್ದಾರೆ. `ಎಲ್ಲ ಕ್ಯುರೇಟರ್ಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುವರು. ದೋನಿ ಸೂಚನೆಯಂತೆ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎಂಬ ಸುದ್ದಿ ಸುಳ್ಳು. ಮಂಡಳಿಯ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ' ಎಂದು ನುಡಿದಿದ್ದಾರೆ.</p>.<p>83ರ ಹರೆಯದ ಪ್ರಬೀರ್ ಈ ಹಿಂದೆಯೂ ಹಲವು ಸಲ ದೋನಿ ಅವರ ಅಭಿಪ್ರಾಯವನ್ನು ಟೀಕಿಸಿದ್ದರು. `ಸ್ಪಿನ್ಗೆ ನೆರವು ನೀಡುವ ಪಿಚ್ ಬೇಕು ಎಂದು ಭಾರತ ತಂಡದ ನಾಯಕ ಬಹಿರಂಗ ಹೇಳಿಕೆ ನೀಡಿದ್ದು ದುರದೃಷ್ಟಕರ. ಸ್ಪಿನ್ ಪಿಚ್ ಸಿದ್ಧಪಡಿಸಬೇಕೆಂದರೆ ಬಿಸಿಸಿಐನಿಂದ ಲಿಖಿತ ರೂಪದ ನಿರ್ದೇಶನ ಬೇಕು' ಎಂದು ಅವರು ತಿಳಿಸಿದ್ದರು.</p>.<p><strong>ಕಡೆಗಣಿಸಿದ್ದು ಹೌದು: ಪ್ರಬೀರ್</strong><br /> ಕೋಲ್ಕತ್ತ (ಐಎಎನ್ಎಸ್): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಬಿಸಿಸಿಐ ನನ್ನನ್ನು ಕಡೆಗಣಿಸಿದ್ದು ಹೌದು ಎಂದು ಪ್ರಬೀರ್ ಮುಖರ್ಜಿ ಹೇಳಿದ್ದಾರೆ.</p>.<p>`ಬಿಸಿಸಿಐ ಸೂಚನೆಯಂತೆ ಆಶೀಶ್ ಭೌಮಿಕ್ ಪಿಚ್ ಹಾಗೂ ಅಂಗಳದ ಉಸ್ತುವಾರಿ ವಹಿಸಿಕೊಂಡಿದ್ದು, ನನಗೆ ಹೆಚ್ಚಿನ ಅಧಿಕಾರ ನೀಡಿಲ್ಲ' ಎಂದಿದ್ದಾರೆ. `ಅವರು (ಭೌಮಿಕ್) ಈಗ ನನ್ನ ಬಾಸ್. ನಾನು ಏನಿದ್ದರೂ ಅವರ ಸೂಚನೆಯಂತೆ ಕೆಲಸ ನಿರ್ವಹಿಸಬೇಕಿದೆ' ಎಂದು ಪ್ರಬೀರ್ ನಿರಾಸೆಯಿಂದಲೇ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>