<p>ಹೋಟೆಲ್ ತಿಂಡಿ ತಿನಿಸುಗಳ ದರಗಳು ಇತ್ತೀಚೆಗೆ ಎಗ್ಗಿಲ್ಲದೆ ಏರಿಕೆಯಾಗುತ್ತಿವೆ. ಮನೆಯಿಂದ ಆಚೆ ಇರುವವರಿಗೆ, ನಗರಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಹೋಟೆಲ್ ಊಟ, ತಿಂಡಿ ಅನಿವಾರ್ಯ. ಒಂದು ಇಡ್ಲಿಗೆ ರೂ. 5 ರಿಂದ 30 ರವರೆಗೆ ವಸೂಲಿ ಮಾಡುತ್ತಾರೆ. ಇದು ಹಗಲು ದರೋಡೆಯೇ ಸರಿ.<br /> <br /> ಈರುಳ್ಳಿ ದರ ಕಿಲೋಗೆ ರೂ. 5 ಏರಿಕೆಯಾದರೂ ಈ ಹೋಟೆಲ್ಗಳಲ್ಲಿ ಒಂದು ಮಸಾಲೆ ದೋಸೆಗೆ ರೂ. 2 ಹೆಚ್ಚಿಸುತ್ತಾರೆ. ಆದರೆ ಈರುಳ್ಳಿ ದರ ನೆಲ ಕಚ್ಚಿದರೆ ಇವರಿಗೆ ದೋಸೆ ದರ ಇಳಿಸುವ ಸೌಜನ್ಯ ಇಲ್ಲ. ತಿಂಗಳು, ಎರಡು ತಿಂಗಳಿಗೊಮ್ಮೆ ದರ ಹೆಚ್ಚಿಸುತ್ತಾರೆ. ಉಪಯೋಗಿಸುವ ತರಕಾರಿಗಳು ಕೂಡ ಅತ್ಯಂತ ಕಳಪೆ, ಹಿಂದಿನ ದಿನ ಮಿಕ್ಕುಳಿದ ತಿಂಡಿ, ಸಾರು, ಚಟ್ನಿಗಳನ್ನು ಪೋಲು ಮಾಡುವುದಿಲ್ಲ.<br /> <br /> 1977ನೇ ಇಸವಿಯಲ್ಲಿ ಆಗಿನ ಸರ್ಕಾರದಲ್ಲಿದ್ದ ಶ್ರೀರಾಮುಲು ಎಂಬ ಆಹಾರ ಮಂತ್ರಿಗಳು ಒಂದು ದಿಟ್ಟ ಹೆಜ್ಜೆ ಇಟ್ಟು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಆ ಕಾಲದಲ್ಲಿ ರಾಜ್ಯದಲ್ಲಿದ್ದ ಎಲ್ಲ ಹೋಟೆಲ್ಗಳನ್ನು (ಪಂಚತಾರಾ ಹೋಟೆಲ್ ಹೊರತುಪಡಿಸಿ) ಮೂರು ದರ್ಜೆಯಾಗಿ ವಿಂಗಡಿಸಿ, ಪ್ರತಿ ದರ್ಜೆಯ ಹೋಟೆಲ್ನಲ್ಲಿ ತಿಂಡಿ ತಿನಿಸುಗಳ ತೂಕ ಆಕಾರ ಇಷ್ಟೇ ಇರಬೇಕು. ಗುಣಮಟ್ಟ ಉತ್ತಮವಾಗಿರಬೇಕು ಎಂದು ಆಜ್ಞೆ ಹೊರಡಿಸಿ 3-4 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಅಂತೆಯೇ, ಎಲ್ಲ ಹೋಟೆಲ್ಗಳ ಮುಂಭಾಗದಲ್ಲಿ ದರಪಟ್ಟಿಯ ಫಲಕ ತೂಗಿಡಬೇಕು ಎಂಬುದನ್ನೂ ಕಡ್ಡಾಯಗೊಳಿಸಿದ್ದರು. ಈಗ ಫಲಕ ಮಾತ್ರ ಇವೆ, ದರಗಳಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೋಟೆಲ್ ತಿಂಡಿ ತಿನಿಸುಗಳ ದರಗಳು ಇತ್ತೀಚೆಗೆ ಎಗ್ಗಿಲ್ಲದೆ ಏರಿಕೆಯಾಗುತ್ತಿವೆ. ಮನೆಯಿಂದ ಆಚೆ ಇರುವವರಿಗೆ, ನಗರಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಹೋಟೆಲ್ ಊಟ, ತಿಂಡಿ ಅನಿವಾರ್ಯ. ಒಂದು ಇಡ್ಲಿಗೆ ರೂ. 5 ರಿಂದ 30 ರವರೆಗೆ ವಸೂಲಿ ಮಾಡುತ್ತಾರೆ. ಇದು ಹಗಲು ದರೋಡೆಯೇ ಸರಿ.<br /> <br /> ಈರುಳ್ಳಿ ದರ ಕಿಲೋಗೆ ರೂ. 5 ಏರಿಕೆಯಾದರೂ ಈ ಹೋಟೆಲ್ಗಳಲ್ಲಿ ಒಂದು ಮಸಾಲೆ ದೋಸೆಗೆ ರೂ. 2 ಹೆಚ್ಚಿಸುತ್ತಾರೆ. ಆದರೆ ಈರುಳ್ಳಿ ದರ ನೆಲ ಕಚ್ಚಿದರೆ ಇವರಿಗೆ ದೋಸೆ ದರ ಇಳಿಸುವ ಸೌಜನ್ಯ ಇಲ್ಲ. ತಿಂಗಳು, ಎರಡು ತಿಂಗಳಿಗೊಮ್ಮೆ ದರ ಹೆಚ್ಚಿಸುತ್ತಾರೆ. ಉಪಯೋಗಿಸುವ ತರಕಾರಿಗಳು ಕೂಡ ಅತ್ಯಂತ ಕಳಪೆ, ಹಿಂದಿನ ದಿನ ಮಿಕ್ಕುಳಿದ ತಿಂಡಿ, ಸಾರು, ಚಟ್ನಿಗಳನ್ನು ಪೋಲು ಮಾಡುವುದಿಲ್ಲ.<br /> <br /> 1977ನೇ ಇಸವಿಯಲ್ಲಿ ಆಗಿನ ಸರ್ಕಾರದಲ್ಲಿದ್ದ ಶ್ರೀರಾಮುಲು ಎಂಬ ಆಹಾರ ಮಂತ್ರಿಗಳು ಒಂದು ದಿಟ್ಟ ಹೆಜ್ಜೆ ಇಟ್ಟು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಆ ಕಾಲದಲ್ಲಿ ರಾಜ್ಯದಲ್ಲಿದ್ದ ಎಲ್ಲ ಹೋಟೆಲ್ಗಳನ್ನು (ಪಂಚತಾರಾ ಹೋಟೆಲ್ ಹೊರತುಪಡಿಸಿ) ಮೂರು ದರ್ಜೆಯಾಗಿ ವಿಂಗಡಿಸಿ, ಪ್ರತಿ ದರ್ಜೆಯ ಹೋಟೆಲ್ನಲ್ಲಿ ತಿಂಡಿ ತಿನಿಸುಗಳ ತೂಕ ಆಕಾರ ಇಷ್ಟೇ ಇರಬೇಕು. ಗುಣಮಟ್ಟ ಉತ್ತಮವಾಗಿರಬೇಕು ಎಂದು ಆಜ್ಞೆ ಹೊರಡಿಸಿ 3-4 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಅಂತೆಯೇ, ಎಲ್ಲ ಹೋಟೆಲ್ಗಳ ಮುಂಭಾಗದಲ್ಲಿ ದರಪಟ್ಟಿಯ ಫಲಕ ತೂಗಿಡಬೇಕು ಎಂಬುದನ್ನೂ ಕಡ್ಡಾಯಗೊಳಿಸಿದ್ದರು. ಈಗ ಫಲಕ ಮಾತ್ರ ಇವೆ, ದರಗಳಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>