<p>ಬೆಂಗಳೂರು: ‘ಸಚಿವ ಡಿ.ಕೆ. ಶಿವಕುಮಾರ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನನ್ನ ಶರ್ಟ್ನಲ್ಲಿ ಅಡಗಿಸಿಟ್ಟಿದ್ದ ಗುಂಡಿಯ ರೂಪದ ಕ್ಯಾಮೆರಾ ಮತ್ತು ಸಲಕರಣೆಗಳನ್ನು ತಾವೇ ಹೊರತೆಗೆಯಲು ಯತ್ನಿಸಿದರು’ ಎಂದು ನ್ಯೂಸ್9 ಸುದ್ದಿವಾಹಿನಿಯ ವರದಿಗಾರ್ತಿ ಶ್ವೇತಾ ಪ್ರಭು ಆರೋಪಿಸಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ಸಂದರ್ಭದಲ್ಲಿ ಸಚಿವರನ್ನು ಅವರ ಬೆಂಬಲಿಗರು ತಡೆದಾಗ ಎಲ್ಲರೆದುರು ನನ್ನ ಶರ್ಟ್ನ ಗುಂಡಿ ಬಿಚ್ಚಿ ಕ್ಯಾಮೆರಾ ಹೊರತೆಗೆಯುವಂತೆ ತಮ್ಮ ಬೆಂಬಲಿಗರಿಗೆ ಹೇಳಿದರು’ ಎಂದರು.<br /> <br /> ಕಣ್ಣುಗಳು ಮಾತ್ರ ಕಾಣುವಂತೆ ದುಪಟ್ಟಾದಿಂದ ತಮ್ಮ ಮುಖವನ್ನು ಮರೆ ಮಾಡಿಕೊಂಡಿದ್ದ ಅವರು, ‘ವೈಯಕ್ತಿಕ ಜೀವನ ಮತ್ತು ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದೇನೆ’ ಎಂದರು.<br /> <br /> ವಾಹಿನಿಯ ವರದಿಗಾರ ಶ್ರೇಯಸ್ ಮಾತನಾಡಿ, ‘ಭದ್ರತಾ ಏಜೆನ್ಸಿ ನಡೆಸುತ್ತಿರುವ ನನ್ನ ಮೇಲೆಯೇ ಕುಟುಕು ಕಾರ್ಯಾಚರಣೆ ನಡೆಸುತ್ತೀರಾ? ನಿಮ್ಮ ಗುರುತು ಇಟ್ಟುಕೊಂಡಿದ್ದೇನೆ. ಚುನಾವಣೆ ಬಳಿಕ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಸಚಿವರು ಬೆದರಿಕೆ ಹಾಕಿದರು’ ಎಂದು ಆರೋಪಿಸಿದರು.<br /> <br /> ‘ಘಟನೆ ಸಂದರ್ಭದಲ್ಲಿ ಸಚಿವರ ಮನೆಯಲ್ಲಿದ್ದ ಅವರ ಸುಮಾರು 70 ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನಮ್ಮ ಮೇಲೆ ಹಲ್ಲೆ ನಡೆಸಿದರು. ಆಗ ಅಲ್ಲಿಯೇ ಇದ್ದ ಎಸಿಪಿ ಸಿದ್ದರಾಮಯ್ಯ ಮತ್ತಿತರ ಪೊಲೀಸ್ ಸಿಬ್ಬಂದಿ ನಮ್ಮ ರಕ್ಷಣೆಗೆ ಬರಲಿಲ್ಲ. ಇಡೀ ಘಟನಾವಳಿ ಸೆರೆಯಾಗಿರುವ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿದೆ’ ಎಂದರು.<br /> <br /> ಕುಟುಕು ಕಾರ್ಯಾಚರಣೆಯ ವಿವರಗಳನ್ನು ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ‘ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಏನೂ ಹೇಳಲಾಗುವುದಿಲ್ಲ’ ಎಂದರು.<br /> <br /> ‘ಸಚಿವರು ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಪೊಲೀಸರು ನಮ್ಮೊಂದಿಗೆ ಸಭ್ಯವಾಗಿ ನಡೆದುಕೊಂಡರೂ ದೂರಿಗೆ ಸ್ಪಂದಿಸುತ್ತಿಲ್ಲ’ ಎಂದರು.<br /> <br /> ‘ಕುಟುಕು ಕಾರ್ಯಾಚರಣೆಯ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಬೇರೆ ಯಾವುದೇ ದುರುದ್ದೇಶವಿರಲಿಲ್ಲ. ನಾವು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸಚಿವ ಡಿ.ಕೆ. ಶಿವಕುಮಾರ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನನ್ನ ಶರ್ಟ್ನಲ್ಲಿ ಅಡಗಿಸಿಟ್ಟಿದ್ದ ಗುಂಡಿಯ ರೂಪದ ಕ್ಯಾಮೆರಾ ಮತ್ತು ಸಲಕರಣೆಗಳನ್ನು ತಾವೇ ಹೊರತೆಗೆಯಲು ಯತ್ನಿಸಿದರು’ ಎಂದು ನ್ಯೂಸ್9 ಸುದ್ದಿವಾಹಿನಿಯ ವರದಿಗಾರ್ತಿ ಶ್ವೇತಾ ಪ್ರಭು ಆರೋಪಿಸಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ಸಂದರ್ಭದಲ್ಲಿ ಸಚಿವರನ್ನು ಅವರ ಬೆಂಬಲಿಗರು ತಡೆದಾಗ ಎಲ್ಲರೆದುರು ನನ್ನ ಶರ್ಟ್ನ ಗುಂಡಿ ಬಿಚ್ಚಿ ಕ್ಯಾಮೆರಾ ಹೊರತೆಗೆಯುವಂತೆ ತಮ್ಮ ಬೆಂಬಲಿಗರಿಗೆ ಹೇಳಿದರು’ ಎಂದರು.<br /> <br /> ಕಣ್ಣುಗಳು ಮಾತ್ರ ಕಾಣುವಂತೆ ದುಪಟ್ಟಾದಿಂದ ತಮ್ಮ ಮುಖವನ್ನು ಮರೆ ಮಾಡಿಕೊಂಡಿದ್ದ ಅವರು, ‘ವೈಯಕ್ತಿಕ ಜೀವನ ಮತ್ತು ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದೇನೆ’ ಎಂದರು.<br /> <br /> ವಾಹಿನಿಯ ವರದಿಗಾರ ಶ್ರೇಯಸ್ ಮಾತನಾಡಿ, ‘ಭದ್ರತಾ ಏಜೆನ್ಸಿ ನಡೆಸುತ್ತಿರುವ ನನ್ನ ಮೇಲೆಯೇ ಕುಟುಕು ಕಾರ್ಯಾಚರಣೆ ನಡೆಸುತ್ತೀರಾ? ನಿಮ್ಮ ಗುರುತು ಇಟ್ಟುಕೊಂಡಿದ್ದೇನೆ. ಚುನಾವಣೆ ಬಳಿಕ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಸಚಿವರು ಬೆದರಿಕೆ ಹಾಕಿದರು’ ಎಂದು ಆರೋಪಿಸಿದರು.<br /> <br /> ‘ಘಟನೆ ಸಂದರ್ಭದಲ್ಲಿ ಸಚಿವರ ಮನೆಯಲ್ಲಿದ್ದ ಅವರ ಸುಮಾರು 70 ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನಮ್ಮ ಮೇಲೆ ಹಲ್ಲೆ ನಡೆಸಿದರು. ಆಗ ಅಲ್ಲಿಯೇ ಇದ್ದ ಎಸಿಪಿ ಸಿದ್ದರಾಮಯ್ಯ ಮತ್ತಿತರ ಪೊಲೀಸ್ ಸಿಬ್ಬಂದಿ ನಮ್ಮ ರಕ್ಷಣೆಗೆ ಬರಲಿಲ್ಲ. ಇಡೀ ಘಟನಾವಳಿ ಸೆರೆಯಾಗಿರುವ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿದೆ’ ಎಂದರು.<br /> <br /> ಕುಟುಕು ಕಾರ್ಯಾಚರಣೆಯ ವಿವರಗಳನ್ನು ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ‘ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಏನೂ ಹೇಳಲಾಗುವುದಿಲ್ಲ’ ಎಂದರು.<br /> <br /> ‘ಸಚಿವರು ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಪೊಲೀಸರು ನಮ್ಮೊಂದಿಗೆ ಸಭ್ಯವಾಗಿ ನಡೆದುಕೊಂಡರೂ ದೂರಿಗೆ ಸ್ಪಂದಿಸುತ್ತಿಲ್ಲ’ ಎಂದರು.<br /> <br /> ‘ಕುಟುಕು ಕಾರ್ಯಾಚರಣೆಯ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಬೇರೆ ಯಾವುದೇ ದುರುದ್ದೇಶವಿರಲಿಲ್ಲ. ನಾವು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>