<p>ಕಿಕ್ಕೇರಿ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಲಾಭದಲ್ಲಿದ್ದು, ವದಂತಿಗಳಿಗೆ ಕಿವಿಗೊಡಬಾರದು ಎಂದು ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ ರೈತರಲ್ಲಿ ವಿನಂತಿಸಿದರು.<br /> <br /> ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರಿಗೆ ಉಚಿತ ಸಕ್ಕರೆ ವಿತರಣೆ ಮಾಡಿ ಮಾತನಾಡಿದರು.<br /> <br /> ಕಾರ್ಖಾನೆಯನ್ನು ೩೦ವರ್ಷಗಳ ಅವಧಿಗೆ ₨ ೧೦೭ಕೋಟಿಗೆ ಲೀಸ್ ನೀಡಲಾಗಿದೆ. ₨ ೪ ಕೋಟಿ ಲಾಭಾಂಶದಲ್ಲಿದೆ. ಕಾರ್ಖಾನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಚರ-ಸ್ಥಿರಾಸ್ತಿ ಇದ್ದು, ಎಲ್ಲವು ಕಾನೂನು ಬದ್ಧವಾಗಿದೆ. ಷೇರುದಾರರಿಗೆ ಪ್ರಪ್ರಥಮವಾಗಿ ಶ್ರೇಷ್ಟ ಗುಣಮಟ್ಟದ ಎಂ೩ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿರುವ ರಾಜ್ಯದಲ್ಲಿನ ಏಕೈಕ ಕಾರ್ಖಾನೆ ಇದು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಅವರು ಹೇಳಿದರು.<br /> <br /> ತಾಲ್ಲೂಕಿನ ಶಾಸಕ ಕೆ.ಸಿ. ನಾರಾಯಣಗೌಡ ಮಾತನಾಡಿ, ಕೋರಮಂಡಲ್ ಹಾಗೂ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗಳು ರೈತರ ಕಣ್ಣಾಗಿದ್ದು, ಯಾವುದೇ ಸಮಸ್ಯೆ ಬಂದರೂ ಬಗೆಹರಿಸುವುದಾಗಿ ತಿಳಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಕಾರ್ಖಾನೆ ಅಧ್ಯಕ್ಷ ಬಿ.ಸಿ. ಮಂಜುನಾಥ್, ನಿರ್ದೇಶಕ ತೇಜಸ್ವಿ ಕಿರಣ್, ಆನೆಗೂಳ ಎ.ಆರ್. ಮಂಜುನಾಥ್, ಕಾಯಿ ಮಂಜೇಗೌಡ, ಕೆ.ಜಿ. ಅಣ್ಣಯ್ಯ, ಜಿಲ್ಲಾ ಸಹಕಾರ ಅಧ್ಯಕ್ಷ ಕೆ.ಜಿ. ತಮ್ಮಣ್ಣ, ಮಹದೇವು ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಕ್ಕೇರಿ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಲಾಭದಲ್ಲಿದ್ದು, ವದಂತಿಗಳಿಗೆ ಕಿವಿಗೊಡಬಾರದು ಎಂದು ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ ರೈತರಲ್ಲಿ ವಿನಂತಿಸಿದರು.<br /> <br /> ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರಿಗೆ ಉಚಿತ ಸಕ್ಕರೆ ವಿತರಣೆ ಮಾಡಿ ಮಾತನಾಡಿದರು.<br /> <br /> ಕಾರ್ಖಾನೆಯನ್ನು ೩೦ವರ್ಷಗಳ ಅವಧಿಗೆ ₨ ೧೦೭ಕೋಟಿಗೆ ಲೀಸ್ ನೀಡಲಾಗಿದೆ. ₨ ೪ ಕೋಟಿ ಲಾಭಾಂಶದಲ್ಲಿದೆ. ಕಾರ್ಖಾನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಚರ-ಸ್ಥಿರಾಸ್ತಿ ಇದ್ದು, ಎಲ್ಲವು ಕಾನೂನು ಬದ್ಧವಾಗಿದೆ. ಷೇರುದಾರರಿಗೆ ಪ್ರಪ್ರಥಮವಾಗಿ ಶ್ರೇಷ್ಟ ಗುಣಮಟ್ಟದ ಎಂ೩ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿರುವ ರಾಜ್ಯದಲ್ಲಿನ ಏಕೈಕ ಕಾರ್ಖಾನೆ ಇದು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಅವರು ಹೇಳಿದರು.<br /> <br /> ತಾಲ್ಲೂಕಿನ ಶಾಸಕ ಕೆ.ಸಿ. ನಾರಾಯಣಗೌಡ ಮಾತನಾಡಿ, ಕೋರಮಂಡಲ್ ಹಾಗೂ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗಳು ರೈತರ ಕಣ್ಣಾಗಿದ್ದು, ಯಾವುದೇ ಸಮಸ್ಯೆ ಬಂದರೂ ಬಗೆಹರಿಸುವುದಾಗಿ ತಿಳಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಕಾರ್ಖಾನೆ ಅಧ್ಯಕ್ಷ ಬಿ.ಸಿ. ಮಂಜುನಾಥ್, ನಿರ್ದೇಶಕ ತೇಜಸ್ವಿ ಕಿರಣ್, ಆನೆಗೂಳ ಎ.ಆರ್. ಮಂಜುನಾಥ್, ಕಾಯಿ ಮಂಜೇಗೌಡ, ಕೆ.ಜಿ. ಅಣ್ಣಯ್ಯ, ಜಿಲ್ಲಾ ಸಹಕಾರ ಅಧ್ಯಕ್ಷ ಕೆ.ಜಿ. ತಮ್ಮಣ್ಣ, ಮಹದೇವು ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>