<p>ಬೆಂಗಳೂರು: ‘ಕಾವ್ಯ ಇಂದು ತನ್ನ ಲಯ ವನ್ನು ಕಳೆದುಕೊಂಡಿದೆ. ಕಾವ್ಯದಲ್ಲಿ ಇಂದು ಅನುಕರಣೆಯೇ ಹೆಚ್ಚಾಗಿದೆ. ಕಾವ್ಯ ಇಂದು ನಿನ್ನೆಯ ಕಥೆಗಳನ್ನು ನಿರೂಪಿಸುವ ಕಲೆಯಂತಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ವಿಷಾದಿಸಿದರು.<br /> <br /> ಕೇಂದ್ರ ಸಾಹಿತ್ಯ ಅಕಾಡೆಮಿಯು ಶನಿವಾರ ಜೈನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಈಶಾನ್ಯ ಮತ್ತು ದಕ್ಷಿಣ ಭಾರತೀಯ ಕಾವ್ಯೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಸಾಹಿತ್ಯವು ಎದುರಿಸುತ್ತಿರುವ ಸಮ ಸ್ಯೆಗಳ ಕುರಿತು ಸಮಗ್ರ ಚರ್ಚೆ ಮಾಡಲು ಇದು ಸಕಾಲವಾಗಿದೆ. ಸಾಹಿತ್ಯವು ಸಾಮಾನ್ಯ ಜನರಿಗೆ ತಲುಪು ವಂತಾಗಬೇಕು. ಓದುಗರಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುವುದು ಇಂದಿನ ಲೇಖಕರು ಮತ್ತು ಕವಿಗಳಿಗೆ ಸವಾಲಾಗಿದೆ’ <br /> <br /> ‘ನಾನು ಕೂಡ ಒಬ್ಬ ಲೇಖಕನಾಗಿ ನನ್ನ ಅನುಭವಗಳನ್ನು ಸಮಕಾ ಲೀನ ತೆಯ ಮೂಸೆಯಲ್ಲಿ ನೋಡಿ ತರ್ಕ, ಕಾರಣ ಮತ್ತು ವ್ಯಂಗ್ಯದ ಆಧಾರದಲ್ಲಿ ಬರೆದಿದ್ದೇನೆ. ನಾನು ಕ್ರಿಯಾಶೀಲತೆ ಮತ್ತು ಪ್ರೀತಿಯನ್ನು ನೆಚ್ಚಿಕೊಂಡು ಬರವಣಿಗೆಯಲ್ಲಿ ತೊಡಗಿ ಸಿಕೊಂಡಿ ದ್ದೇನೆ’ ಎಂದು ಹೇಳಿದರು.<br /> <br /> ‘ಮರೆತೆನೆಂದರೆ ಮರೆಯಲಿ ಹ್ಯಾಂಗ್... ಮಾವೊತ್ಸೆ ತುಂಗಾ’ ಕವನ ವಾಚನ ಮಾಡಿದರು. ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ ಮಾತನಾಡಿ, ‘ಕವನಗಳು ಬೇರೆ–ಬೇರೆ ಭಾಷೆಗಳಲ್ಲಿ ರಚಿತವಾದರೂ ಅವುಗಳಲ್ಲಿನ ಹೊಳಹುಗಳು ಪರಸ್ಪರ ಪೂರಕವಾಗಿವೆ. ಭಾರತದ ಸಮಗ್ರ ಕಾವ್ಯ ಸಂಪತ್ತನ್ನು ಗ್ರಹಿಸಲು ಇಂತಹ ಕಾವ್ಯೋತ್ಸವಗಳು ಸಹಕಾರಿಯಾಗುತ್ತವೆ’ ಎಂದರು.<br /> <br /> <strong><span style="font-size: 26px;">ಮಡೆ ಮಡೆ ಸ್ನಾನ ಅಸಹ್ಯವಾದ ಆಚರಣೆ</span></strong><br /> <span style="font-size: 26px;">ಮಡೆ ಮಡೆ ಸ್ನಾನ ಒಂದು ಒಂದು ಕೆಟ್ಟ ಹಾಗೂ ಅಸಹ್ಯಕರವಾದ ಆಚರಣೆ. ಕೂಡಲೇ ಈ ಆಚರಣೆಯನ್ನು ನಿಲ್ಲಿಸಬೇಕು.ಇದನ್ನು ಬುದ್ಧಿವಂತರೆಲ್ಲರೂ ವಿರೋಧಿಸಬೇಕು’</span><br /> <span style="font-size: 26px;">–ಸಾಹಿತಿ ಚಂದ್ರಶೇಖರ ಕಂಬಾರ</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಕಾವ್ಯ ಇಂದು ತನ್ನ ಲಯ ವನ್ನು ಕಳೆದುಕೊಂಡಿದೆ. ಕಾವ್ಯದಲ್ಲಿ ಇಂದು ಅನುಕರಣೆಯೇ ಹೆಚ್ಚಾಗಿದೆ. ಕಾವ್ಯ ಇಂದು ನಿನ್ನೆಯ ಕಥೆಗಳನ್ನು ನಿರೂಪಿಸುವ ಕಲೆಯಂತಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ವಿಷಾದಿಸಿದರು.<br /> <br /> ಕೇಂದ್ರ ಸಾಹಿತ್ಯ ಅಕಾಡೆಮಿಯು ಶನಿವಾರ ಜೈನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಈಶಾನ್ಯ ಮತ್ತು ದಕ್ಷಿಣ ಭಾರತೀಯ ಕಾವ್ಯೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಸಾಹಿತ್ಯವು ಎದುರಿಸುತ್ತಿರುವ ಸಮ ಸ್ಯೆಗಳ ಕುರಿತು ಸಮಗ್ರ ಚರ್ಚೆ ಮಾಡಲು ಇದು ಸಕಾಲವಾಗಿದೆ. ಸಾಹಿತ್ಯವು ಸಾಮಾನ್ಯ ಜನರಿಗೆ ತಲುಪು ವಂತಾಗಬೇಕು. ಓದುಗರಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುವುದು ಇಂದಿನ ಲೇಖಕರು ಮತ್ತು ಕವಿಗಳಿಗೆ ಸವಾಲಾಗಿದೆ’ <br /> <br /> ‘ನಾನು ಕೂಡ ಒಬ್ಬ ಲೇಖಕನಾಗಿ ನನ್ನ ಅನುಭವಗಳನ್ನು ಸಮಕಾ ಲೀನ ತೆಯ ಮೂಸೆಯಲ್ಲಿ ನೋಡಿ ತರ್ಕ, ಕಾರಣ ಮತ್ತು ವ್ಯಂಗ್ಯದ ಆಧಾರದಲ್ಲಿ ಬರೆದಿದ್ದೇನೆ. ನಾನು ಕ್ರಿಯಾಶೀಲತೆ ಮತ್ತು ಪ್ರೀತಿಯನ್ನು ನೆಚ್ಚಿಕೊಂಡು ಬರವಣಿಗೆಯಲ್ಲಿ ತೊಡಗಿ ಸಿಕೊಂಡಿ ದ್ದೇನೆ’ ಎಂದು ಹೇಳಿದರು.<br /> <br /> ‘ಮರೆತೆನೆಂದರೆ ಮರೆಯಲಿ ಹ್ಯಾಂಗ್... ಮಾವೊತ್ಸೆ ತುಂಗಾ’ ಕವನ ವಾಚನ ಮಾಡಿದರು. ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ ಮಾತನಾಡಿ, ‘ಕವನಗಳು ಬೇರೆ–ಬೇರೆ ಭಾಷೆಗಳಲ್ಲಿ ರಚಿತವಾದರೂ ಅವುಗಳಲ್ಲಿನ ಹೊಳಹುಗಳು ಪರಸ್ಪರ ಪೂರಕವಾಗಿವೆ. ಭಾರತದ ಸಮಗ್ರ ಕಾವ್ಯ ಸಂಪತ್ತನ್ನು ಗ್ರಹಿಸಲು ಇಂತಹ ಕಾವ್ಯೋತ್ಸವಗಳು ಸಹಕಾರಿಯಾಗುತ್ತವೆ’ ಎಂದರು.<br /> <br /> <strong><span style="font-size: 26px;">ಮಡೆ ಮಡೆ ಸ್ನಾನ ಅಸಹ್ಯವಾದ ಆಚರಣೆ</span></strong><br /> <span style="font-size: 26px;">ಮಡೆ ಮಡೆ ಸ್ನಾನ ಒಂದು ಒಂದು ಕೆಟ್ಟ ಹಾಗೂ ಅಸಹ್ಯಕರವಾದ ಆಚರಣೆ. ಕೂಡಲೇ ಈ ಆಚರಣೆಯನ್ನು ನಿಲ್ಲಿಸಬೇಕು.ಇದನ್ನು ಬುದ್ಧಿವಂತರೆಲ್ಲರೂ ವಿರೋಧಿಸಬೇಕು’</span><br /> <span style="font-size: 26px;">–ಸಾಹಿತಿ ಚಂದ್ರಶೇಖರ ಕಂಬಾರ</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>