<p><strong>ಬೆಂಗಳೂರು: </strong>ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳೆಲ್ಲರೂ ಶ್ರೀಸಾಮಾನ್ಯರನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಾರದ ಅಂತ್ಯದಲ್ಲಿ ರಾಜ್ಯದ ಉಳಿದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ ತಿಳಿಸಿದರು.<br /> <br /> ಪ್ರಥಮ ಪಟ್ಟಿಯಲ್ಲಿನ 13 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟರು ಮತ್ತು ಪ್ರಾಮಾಣಿಕರ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಮತದಾರರೇ ನಿರ್ಧರಿಸಬೇಕು. ಈಗ ಆಯ್ಕೆ ಮಾಡಿರುವ 13 ಅಭ್ಯರ್ಥಿಗಳು ವಿವಿಧ ರಂಗಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಿವರಿಸಿದರು.<br /> <br /> ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ದೇಶದಲ್ಲಿ ಸುಮಾರು 8 ಸಾವಿರ, ಕರ್ನಾಟಕದಲ್ಲಿ 2 ಸಾವಿರ ಹಾಗೂ ಬೆಂಗಳೂರು ನಗರದಲ್ಲಿ 300 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. 22–23 ವರ್ಷದ ಕೆಲವು ಯುವಕರು ಸಹ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಜನಸಾಮಾನ್ಯರನ್ನು ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.</p>.<p><strong>‘ಶುದ್ಧ ರಾಜಕೀಯಕ್ಕೆ ಶುದ್ಧ ಹಣ ಬೇಕು’</strong><br /> ಶುದ್ಧ ರಾಜಕೀಯಕ್ಕೆ ಶುದ್ಧವಾಗಿರುವ ಹಣವೇ ಬೇಕು. ಪಾರದರ್ಶಕವಾಗಿ ಹಣ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಆಮ್ ಆದ್ಮಿ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಪೃಥ್ವಿರೆಡ್ಡಿ ನುಡಿದರು.</p>.<p>‘ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಜತೆ ಮಾ.15ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಂದ ₨ 20 ಸಾವಿರ ಪಡೆಯಲಾಗುತ್ತಿದೆ. ಈ ಭೋಜನಕೂಟವನ್ನು ಪಕ್ಷದ ಹಿತೈಷಿಗಳು ಆಯೋಜಿಸಿದ್ದಾರೆ. ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುವವರು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಬ್ಯಾಂಕ್ ಖಾತೆಯಲ್ಲಿ ಸುಮಾರು ₨ 14 ಕೋಟಿ ಮಾತ್ರ ಇದೆ. ದೇಶದ 453 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇಷ್ಟು ಕಡಿಮೆ ಮೊತ್ತದಲ್ಲಿ ಪ್ರಚಾರ ಕಾರ್ಯ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p><strong>ಅಭ್ಯರ್ಥಿಗಳ ಪ್ರತಿಪಾದನೆ</strong><br /> *ಜೆಪಿ ಚಳವಳಿ ಮಾದರಿಯಲ್ಲಿ ಆಮ್ ಆದ್ಮಿ ಪಕ್ಷ ಜನಸಾಮಾನ್ಯರನ್ನು ಸಂಘಟಿಸಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದೆ.<br /> <strong>– ಬಿ.ಟಿ. ಲಲಿತಾ ನಾಯಕ್ ಗುಲ್ಬರ್ಗ ಕ್ಷೇತ್ರದ ಅಭ್ಯರ್ಥಿ</strong></p>.<p>*ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಶೇಕಡ 70ರಿಂದ 75ರಷ್ಟು ನಿಧಿ ಅನಾಮಧೇಯ ಮೂಲಗಳಿಂದಲೇ ಹರಿದು ಬರುತ್ತದೆ. ಇದೇ ಭ್ರಷ್ಟಾಚಾರದ ಬೇರು. ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಗುರಿ. ಎಎಪಿ ಮೂಲಕ ಬದಲಾವಣೆ ತರಲು ಸಾಧ್ಯ.<br /> <strong>– ವಿ. ಬಾಲಕೃಷ್ಣನ್, ಬೆಂಗಳೂರು ಕೇಂದ್ರದ ಅಭ್ಯರ್ಥಿ</strong></p>.<p>*ಒಟ್ಟು ಜನಸಂಖ್ಯೆಯಲ್ಲಿ ಶೇಕಡ 40ರಷ್ಟು ಮಕ್ಕಳಿದ್ದಾರೆ. ಆದರೆ, ಇವರಿಗೆ ಯೋಜನೆಗಳೇ ತಲುಪುತ್ತಿಲ್ಲ. ಅಧಿಕಾರಶಾಹಿ ವ್ಯವಸ್ಥೆ ಅನುದಾನವನ್ನು ಸಹ ಖರ್ಚು ಮಾಡುವುದಿಲ್ಲ.<br /> <strong>– ನೀನಾ ಪಿ. ನಾಯಕ್, ಬೆಂಗಳೂರು ದಕ್ಷಿಣ ಅಭ್ಯರ್ಥಿ</strong><br /> <br /> *ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಸುಪ್ರೀಂಕೋರ್ಟ್ ಸೇರಿದಂತೆ ವ್ಯವಸ್ಥೆಯ ಎಲ್ಲ ಅಂಗಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.<br /> <strong>– ಪ್ರೊ. ಬಾಬು ಮ್ಯಾಥ್ಯೂ ಬೆಂಗಳೂರು ಉತ್ತರ ಅಭ್ಯರ್ಥಿ</strong></p>.<p>*ಈಗ ರಾಜಕೀಯ ಕ್ರಾಂತಿಯ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಬೆಲೆ ಇಲ್ಲದಂತಾಗಿದೆ.<br /> <strong>– ರವಿಕೃಷ್ಣಾ ರೆಡ್ಡಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ</strong></p>.<p>*ರೈತ ಚಳವಳಿಗಳ ಹಿನ್ನೆಲೆಯಿಂದ ಬಂದಿದ್ದೇನೆ. ರಾಜಕೀಯ ವ್ಯವಸ್ಥೆ ಬದಲಾಯಿಸಿ ಹೊಸ ಪೀಳಿಗೆಗೆ ಹೊಸತನದ ಸಂದೇಶ ನೀಡಬೇಕಾಗಿದೆ.<br /> <strong>– ಹೇಮಂತಕುಮಾರ್, ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ</strong></p>.<p>*ನವ ಆರ್ಥಿಕತೆ ದೇಶವನ್ನು ಹಾಳು ಮಾಡಿದೆ. ಪರಿವರ್ತನೆ ತರುವುದೇ ನನ್ನ ಧ್ಯೇಯ.<br /> <strong>– ಕೋಟಗಾನಹಳ್ಳಿ ರಾಮಯ್ಯ, ಕೋಲಾರ ಅಭ್ಯರ್ಥಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳೆಲ್ಲರೂ ಶ್ರೀಸಾಮಾನ್ಯರನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಾರದ ಅಂತ್ಯದಲ್ಲಿ ರಾಜ್ಯದ ಉಳಿದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ ತಿಳಿಸಿದರು.<br /> <br /> ಪ್ರಥಮ ಪಟ್ಟಿಯಲ್ಲಿನ 13 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟರು ಮತ್ತು ಪ್ರಾಮಾಣಿಕರ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಮತದಾರರೇ ನಿರ್ಧರಿಸಬೇಕು. ಈಗ ಆಯ್ಕೆ ಮಾಡಿರುವ 13 ಅಭ್ಯರ್ಥಿಗಳು ವಿವಿಧ ರಂಗಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಿವರಿಸಿದರು.<br /> <br /> ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ದೇಶದಲ್ಲಿ ಸುಮಾರು 8 ಸಾವಿರ, ಕರ್ನಾಟಕದಲ್ಲಿ 2 ಸಾವಿರ ಹಾಗೂ ಬೆಂಗಳೂರು ನಗರದಲ್ಲಿ 300 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. 22–23 ವರ್ಷದ ಕೆಲವು ಯುವಕರು ಸಹ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಜನಸಾಮಾನ್ಯರನ್ನು ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.</p>.<p><strong>‘ಶುದ್ಧ ರಾಜಕೀಯಕ್ಕೆ ಶುದ್ಧ ಹಣ ಬೇಕು’</strong><br /> ಶುದ್ಧ ರಾಜಕೀಯಕ್ಕೆ ಶುದ್ಧವಾಗಿರುವ ಹಣವೇ ಬೇಕು. ಪಾರದರ್ಶಕವಾಗಿ ಹಣ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಆಮ್ ಆದ್ಮಿ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಪೃಥ್ವಿರೆಡ್ಡಿ ನುಡಿದರು.</p>.<p>‘ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಜತೆ ಮಾ.15ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಂದ ₨ 20 ಸಾವಿರ ಪಡೆಯಲಾಗುತ್ತಿದೆ. ಈ ಭೋಜನಕೂಟವನ್ನು ಪಕ್ಷದ ಹಿತೈಷಿಗಳು ಆಯೋಜಿಸಿದ್ದಾರೆ. ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುವವರು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಬ್ಯಾಂಕ್ ಖಾತೆಯಲ್ಲಿ ಸುಮಾರು ₨ 14 ಕೋಟಿ ಮಾತ್ರ ಇದೆ. ದೇಶದ 453 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇಷ್ಟು ಕಡಿಮೆ ಮೊತ್ತದಲ್ಲಿ ಪ್ರಚಾರ ಕಾರ್ಯ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p><strong>ಅಭ್ಯರ್ಥಿಗಳ ಪ್ರತಿಪಾದನೆ</strong><br /> *ಜೆಪಿ ಚಳವಳಿ ಮಾದರಿಯಲ್ಲಿ ಆಮ್ ಆದ್ಮಿ ಪಕ್ಷ ಜನಸಾಮಾನ್ಯರನ್ನು ಸಂಘಟಿಸಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದೆ.<br /> <strong>– ಬಿ.ಟಿ. ಲಲಿತಾ ನಾಯಕ್ ಗುಲ್ಬರ್ಗ ಕ್ಷೇತ್ರದ ಅಭ್ಯರ್ಥಿ</strong></p>.<p>*ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಶೇಕಡ 70ರಿಂದ 75ರಷ್ಟು ನಿಧಿ ಅನಾಮಧೇಯ ಮೂಲಗಳಿಂದಲೇ ಹರಿದು ಬರುತ್ತದೆ. ಇದೇ ಭ್ರಷ್ಟಾಚಾರದ ಬೇರು. ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಗುರಿ. ಎಎಪಿ ಮೂಲಕ ಬದಲಾವಣೆ ತರಲು ಸಾಧ್ಯ.<br /> <strong>– ವಿ. ಬಾಲಕೃಷ್ಣನ್, ಬೆಂಗಳೂರು ಕೇಂದ್ರದ ಅಭ್ಯರ್ಥಿ</strong></p>.<p>*ಒಟ್ಟು ಜನಸಂಖ್ಯೆಯಲ್ಲಿ ಶೇಕಡ 40ರಷ್ಟು ಮಕ್ಕಳಿದ್ದಾರೆ. ಆದರೆ, ಇವರಿಗೆ ಯೋಜನೆಗಳೇ ತಲುಪುತ್ತಿಲ್ಲ. ಅಧಿಕಾರಶಾಹಿ ವ್ಯವಸ್ಥೆ ಅನುದಾನವನ್ನು ಸಹ ಖರ್ಚು ಮಾಡುವುದಿಲ್ಲ.<br /> <strong>– ನೀನಾ ಪಿ. ನಾಯಕ್, ಬೆಂಗಳೂರು ದಕ್ಷಿಣ ಅಭ್ಯರ್ಥಿ</strong><br /> <br /> *ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಸುಪ್ರೀಂಕೋರ್ಟ್ ಸೇರಿದಂತೆ ವ್ಯವಸ್ಥೆಯ ಎಲ್ಲ ಅಂಗಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.<br /> <strong>– ಪ್ರೊ. ಬಾಬು ಮ್ಯಾಥ್ಯೂ ಬೆಂಗಳೂರು ಉತ್ತರ ಅಭ್ಯರ್ಥಿ</strong></p>.<p>*ಈಗ ರಾಜಕೀಯ ಕ್ರಾಂತಿಯ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಬೆಲೆ ಇಲ್ಲದಂತಾಗಿದೆ.<br /> <strong>– ರವಿಕೃಷ್ಣಾ ರೆಡ್ಡಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ</strong></p>.<p>*ರೈತ ಚಳವಳಿಗಳ ಹಿನ್ನೆಲೆಯಿಂದ ಬಂದಿದ್ದೇನೆ. ರಾಜಕೀಯ ವ್ಯವಸ್ಥೆ ಬದಲಾಯಿಸಿ ಹೊಸ ಪೀಳಿಗೆಗೆ ಹೊಸತನದ ಸಂದೇಶ ನೀಡಬೇಕಾಗಿದೆ.<br /> <strong>– ಹೇಮಂತಕುಮಾರ್, ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ</strong></p>.<p>*ನವ ಆರ್ಥಿಕತೆ ದೇಶವನ್ನು ಹಾಳು ಮಾಡಿದೆ. ಪರಿವರ್ತನೆ ತರುವುದೇ ನನ್ನ ಧ್ಯೇಯ.<br /> <strong>– ಕೋಟಗಾನಹಳ್ಳಿ ರಾಮಯ್ಯ, ಕೋಲಾರ ಅಭ್ಯರ್ಥಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>