<p>ನವದೆಹಲಿ (ಪಿಟಿಐ): ಚಿನ್ನ ಆಮದಿನ ಮೇಲೆ ಹೇರಿರುವ ನಿರ್ಬಂಧ ತೆಗೆದುಹಾಕುವ ಕುರಿತು ಸಹಮತ ವ್ಯಕ್ತಪಡಿಸಿರುವ ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ, ನಿರ್ಬಂಧ ಮುಂದುವರಿಸುವುದರಿಂದ ಚಿನ್ನ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.<br /> <br /> ‘ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣ ನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಆಮದು ನಿರ್ಬಂಧ ಸಡಿಲಗೊಳಿಸುವ ಕುರಿತು ಚಿಂತಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ನಿಟ್ಟಿ ನಲ್ಲಿ ಸಮತೋಲಿತ ನಿರ್ಧಾರ ತೆಗೆದು ಕೊಳ್ಳಬೇಕು’ ಎಂದು ಅವರು ಗಮನ ಸೆಳೆದರು.<br /> <br /> ಚಿನ್ನ ಆಮದು ನಿರ್ಬಂಧ ಇರುವುದ ರಿಂದ ಚಿನ್ನಾಭರಣ ರಫ್ತು ವಹಿವಾಟು ಫೆಬ್ರುವರಿಯಲ್ಲಿ ಶೇ 4.18ರಷ್ಟು ಕುಸಿ ದಿದ್ದು 359 ಕೋಟಿ ಡಾಲರ್ಗಳಿಗೆ (₨22258 ಕೋಟಿ) ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಒಟ್ಟಾರೆ ಚಿನ್ನಾಭರಣ ರಫ್ತು ಶೇ 7.15ರಷ್ಟು ಕುಸಿದಿದ್ದು 3573 ಕೋಟಿ ಡಾಲರ್ಗಳಿಗೆ (₨2.21 ಲಕ್ಷ ಕೋಟಿ) ಇಳಿದಿದೆ.<br /> <br /> ಚಿನ್ನ ಮತ್ತು ಬೆಳ್ಳಿ ಆಮದು ಕೂಡ ಫೆಬ್ರುವರಿಯಲ್ಲಿ ಶೇ 71ರಷ್ಟು ತಗ್ಗಿದ್ದು 163 ಕೋಟಿ ಡಾಲರ್ಗಳಿಗೆ (10,106 ಕೋಟಿ) ಇಳಿಕೆ ಕಂಡಿದೆ.<br /> <br /> <strong>1,074 ಕೆ.ಜಿ ಬಂಗಾರ ವಶಕ್ಕೆ</strong><br /> <span style="font-size: 26px;">ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 1,074.41 ಕೆ.ಜಿಗಳಷ್ಟು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 2012–13ನೇ ಸಾಲಿನಲ್ಲಿ ಇದು ಕೇವಲ 326.23 ಕೆ.ಜಿಯಷ್ಟಿತ್ತು ಎಂಬುದು ಗಮನಾರ್ಹ.</span></p>.<p>ಕಳೆದ ಒಂದು ವರ್ಷದಲ್ಲಿ ವಿವಿಧ ದೇಶಗಳಿಂದ ಅಕ್ರಮವಾಗಿ ತಂದ ₨245 ಕೋಟಿ ಮೌಲ್ಯದ ಚಿನ್ನವನ್ನು ಸೀಮಾ ಸುಂಕ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ. 2013–14ನೇ ಸಾಲಿನಲ್ಲಿ ಈವರೆಗೆ ಚಿನ್ನ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಒಟ್ಟಾರೆ 700 ಪ್ರಕರಣಗಳು ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಚಿನ್ನ ಆಮದಿನ ಮೇಲೆ ಹೇರಿರುವ ನಿರ್ಬಂಧ ತೆಗೆದುಹಾಕುವ ಕುರಿತು ಸಹಮತ ವ್ಯಕ್ತಪಡಿಸಿರುವ ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ, ನಿರ್ಬಂಧ ಮುಂದುವರಿಸುವುದರಿಂದ ಚಿನ್ನ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.<br /> <br /> ‘ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣ ನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಆಮದು ನಿರ್ಬಂಧ ಸಡಿಲಗೊಳಿಸುವ ಕುರಿತು ಚಿಂತಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ನಿಟ್ಟಿ ನಲ್ಲಿ ಸಮತೋಲಿತ ನಿರ್ಧಾರ ತೆಗೆದು ಕೊಳ್ಳಬೇಕು’ ಎಂದು ಅವರು ಗಮನ ಸೆಳೆದರು.<br /> <br /> ಚಿನ್ನ ಆಮದು ನಿರ್ಬಂಧ ಇರುವುದ ರಿಂದ ಚಿನ್ನಾಭರಣ ರಫ್ತು ವಹಿವಾಟು ಫೆಬ್ರುವರಿಯಲ್ಲಿ ಶೇ 4.18ರಷ್ಟು ಕುಸಿ ದಿದ್ದು 359 ಕೋಟಿ ಡಾಲರ್ಗಳಿಗೆ (₨22258 ಕೋಟಿ) ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಒಟ್ಟಾರೆ ಚಿನ್ನಾಭರಣ ರಫ್ತು ಶೇ 7.15ರಷ್ಟು ಕುಸಿದಿದ್ದು 3573 ಕೋಟಿ ಡಾಲರ್ಗಳಿಗೆ (₨2.21 ಲಕ್ಷ ಕೋಟಿ) ಇಳಿದಿದೆ.<br /> <br /> ಚಿನ್ನ ಮತ್ತು ಬೆಳ್ಳಿ ಆಮದು ಕೂಡ ಫೆಬ್ರುವರಿಯಲ್ಲಿ ಶೇ 71ರಷ್ಟು ತಗ್ಗಿದ್ದು 163 ಕೋಟಿ ಡಾಲರ್ಗಳಿಗೆ (10,106 ಕೋಟಿ) ಇಳಿಕೆ ಕಂಡಿದೆ.<br /> <br /> <strong>1,074 ಕೆ.ಜಿ ಬಂಗಾರ ವಶಕ್ಕೆ</strong><br /> <span style="font-size: 26px;">ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 1,074.41 ಕೆ.ಜಿಗಳಷ್ಟು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 2012–13ನೇ ಸಾಲಿನಲ್ಲಿ ಇದು ಕೇವಲ 326.23 ಕೆ.ಜಿಯಷ್ಟಿತ್ತು ಎಂಬುದು ಗಮನಾರ್ಹ.</span></p>.<p>ಕಳೆದ ಒಂದು ವರ್ಷದಲ್ಲಿ ವಿವಿಧ ದೇಶಗಳಿಂದ ಅಕ್ರಮವಾಗಿ ತಂದ ₨245 ಕೋಟಿ ಮೌಲ್ಯದ ಚಿನ್ನವನ್ನು ಸೀಮಾ ಸುಂಕ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ. 2013–14ನೇ ಸಾಲಿನಲ್ಲಿ ಈವರೆಗೆ ಚಿನ್ನ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಒಟ್ಟಾರೆ 700 ಪ್ರಕರಣಗಳು ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>