<p>ಬೆಂಗಳೂರು: ನೆಲ್ಸನ್ ಮಂಡೇಲಾ ಅವರು ಆಫ್ರಿಕಾದ ಗಾಂಧಿ ಮಾತ್ರವಲ್ಲದೆ ಆಫ್ರಿಕಾದ ಅಂಬೇಡ್ಕರ್ ಸಹ ಆಗಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹೇಳಿದರು.<br /> <br /> ಗಾಂಧಿ ಭವನದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ನೆಲ್ಸನ್ ಮಂಡೇಲಾ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಮಂಡೇಲಾ ಅವರ ಸ್ಥಾನದಲ್ಲಿ ಬೇರೆ ನಾಯಕರಿದ್ದಿದ್ದರೆ ವಿಮೋಚನೆಯ ನಂತರ ಆಫ್ರಿಕಾ ರಕ್ತಸಿಕ್ತವಾಗುತ್ತಿತ್ತು. ಶೋಷಕರನ್ನು ಶೋಷಿತರು ಪ್ರೀತಿಸುವಂತೆ ಮಾಡಿದ ಅವರು ಮಾನವತಾವಾದಿ. ಸಹಬಾಳ್ವೆಯಿಂದ ಎಲ್ಲಾ ಜನಾಂಗಗಳ ಅಭ್ಯುದಯ ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ’ ಎಂದರು.<br /> <br /> ಕವಿ ಡಾ.ಸಿದ್ದಲಿಂಗಯ್ಯ, ‘ಬಿಳಿಯರ ಒಂದು ಹನಿ ರಕ್ತ ಬಿದ್ದರೂ ನಮಗೆ ಕಳಂಕ ಎಂದು ಮಂಡೇಲಾ ಅವರು ನಂಬಿದ್ದರು, ಪ್ರತಿಪಾದಿಸಿದರು ಮತ್ತು ಹಾಗೇ ಬದುಕಿದರು. ಭಾರತವನ್ನು ಆದರ್ಶವಾಗಿ ಸ್ವೀಕರಿಸಿದ್ದ ಅವರ ವಿಚಾರಧಾರೆಗಳ ನಿಟ್ಟಿನಲ್ಲಿ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ’ ಎಂದರು.<br /> ಗಾಂಧಿ ಭವನದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಅವರು ಮಾತನಾಡಿ, ‘ಬಿಳಿಯರ ದೃಷ್ಠಿಯಲ್ಲಿ ಕ್ರಿಮಿನಲ್ ಆಗಿದ್ದ ವ್ಯಕ್ತಿ ಬಿಳಿಯರ ಪಾಲಿಗೂ ಪ್ರೀತಿಪಾತ್ರರಾದ ರೀತಿ ಮಂಡೇಲಾರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ’ ಎಂದರು.<br /> <br /> ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಅಶ್ವತನಾರಾಯಣ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನೆಲ್ಸನ್ ಮಂಡೇಲಾ ಅವರು ಆಫ್ರಿಕಾದ ಗಾಂಧಿ ಮಾತ್ರವಲ್ಲದೆ ಆಫ್ರಿಕಾದ ಅಂಬೇಡ್ಕರ್ ಸಹ ಆಗಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹೇಳಿದರು.<br /> <br /> ಗಾಂಧಿ ಭವನದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ನೆಲ್ಸನ್ ಮಂಡೇಲಾ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಮಂಡೇಲಾ ಅವರ ಸ್ಥಾನದಲ್ಲಿ ಬೇರೆ ನಾಯಕರಿದ್ದಿದ್ದರೆ ವಿಮೋಚನೆಯ ನಂತರ ಆಫ್ರಿಕಾ ರಕ್ತಸಿಕ್ತವಾಗುತ್ತಿತ್ತು. ಶೋಷಕರನ್ನು ಶೋಷಿತರು ಪ್ರೀತಿಸುವಂತೆ ಮಾಡಿದ ಅವರು ಮಾನವತಾವಾದಿ. ಸಹಬಾಳ್ವೆಯಿಂದ ಎಲ್ಲಾ ಜನಾಂಗಗಳ ಅಭ್ಯುದಯ ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ’ ಎಂದರು.<br /> <br /> ಕವಿ ಡಾ.ಸಿದ್ದಲಿಂಗಯ್ಯ, ‘ಬಿಳಿಯರ ಒಂದು ಹನಿ ರಕ್ತ ಬಿದ್ದರೂ ನಮಗೆ ಕಳಂಕ ಎಂದು ಮಂಡೇಲಾ ಅವರು ನಂಬಿದ್ದರು, ಪ್ರತಿಪಾದಿಸಿದರು ಮತ್ತು ಹಾಗೇ ಬದುಕಿದರು. ಭಾರತವನ್ನು ಆದರ್ಶವಾಗಿ ಸ್ವೀಕರಿಸಿದ್ದ ಅವರ ವಿಚಾರಧಾರೆಗಳ ನಿಟ್ಟಿನಲ್ಲಿ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ’ ಎಂದರು.<br /> ಗಾಂಧಿ ಭವನದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಅವರು ಮಾತನಾಡಿ, ‘ಬಿಳಿಯರ ದೃಷ್ಠಿಯಲ್ಲಿ ಕ್ರಿಮಿನಲ್ ಆಗಿದ್ದ ವ್ಯಕ್ತಿ ಬಿಳಿಯರ ಪಾಲಿಗೂ ಪ್ರೀತಿಪಾತ್ರರಾದ ರೀತಿ ಮಂಡೇಲಾರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ’ ಎಂದರು.<br /> <br /> ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಅಶ್ವತನಾರಾಯಣ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>