<p>ನಾಯಕನಹಟ್ಟಿ: ಪಹಣಿ ಹೊಂದಿರುವ ಅಳತೆ ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಮರು ಭೂ ಮಾಪನಾ ಕಾರ್ಯವನ್ನು ಸರ್ಕಾರದ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.<br /> <br /> ಸಮೀಪದ ಕಾರ್ತೀಕೇನಹಟ್ಟಿಯಲ್ಲಿ ಸೋಮವಾರ ನಡೆದ ಮರು ಭೂ ಮಾಪನ ಕುರಿತ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.<br /> ಕಚೇರಿ ಕಡತಗಳಲ್ಲಿ ಭೂ ದಾಖಲೆ ಶಿಥಿಲವಾಗಿರುವುದರಿಂದ ಅಗತ್ಯವಿರುವ ರೈತರಿಗೆ ದಾಖಲೆ ಬೇಕಾದಲ್ಲಿ ಕಷ್ಟವಾಗುತ್ತಿದೆ. ಗಣಕೀಕೃತ ದಾಖಲೆಗಾಗಿ ಸರ್ಕಾರವೇ ಮರು ಭೂ ಮಾಪನಾ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು.<br /> <br /> ಕಾರ್ತೀಕೇನಹಟ್ಟಿ ಗ್ರಾಮಕ್ಕೊಳಪಡುವ 950 ಎಕರೆ ಜಮೀನಿನಲ್ಲಿ 42 ಸರ್ವೇ ನಂಬರ್ಗಳಿವೆ. ಅವುಗಳಲ್ಲಿ ಸರ್ಕಾರಕ್ಕೆ ಸೇರಿದ 4 ಸರ್ವೇ ನಂಬರ್ ಗಳಿದ್ದು, ರೈತರ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ಸರ್ವೇ ಕೈಗೊಳ್ಳ ಲಾಗುವುದು ಎಂದು ಅವರು ಭರವಸೆ ನೀಡಿದರು.<br /> <br /> ತಹಶೀಲ್ದಾರ್ ವಿಜಯರಾಜು, ಭೂ ಮಾಪನ ಇಲಾಖೆಯ ಉಪ ನಿರ್ದೇಶಕ ರಾಮಾಂಜಿನೇಯ, ಕಂದಾಯ ನಿರೀಕ್ಷಕ ರಾಜಶೇಖರ್, ಭೀಮನ ಕೆರೆ ಶಿವಮೂರ್ತಿ, ರಮೇಶ್ ಬಾಬು, ಮಲ್ಲಯ್ಯ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಯಕನಹಟ್ಟಿ: ಪಹಣಿ ಹೊಂದಿರುವ ಅಳತೆ ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಮರು ಭೂ ಮಾಪನಾ ಕಾರ್ಯವನ್ನು ಸರ್ಕಾರದ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.<br /> <br /> ಸಮೀಪದ ಕಾರ್ತೀಕೇನಹಟ್ಟಿಯಲ್ಲಿ ಸೋಮವಾರ ನಡೆದ ಮರು ಭೂ ಮಾಪನ ಕುರಿತ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.<br /> ಕಚೇರಿ ಕಡತಗಳಲ್ಲಿ ಭೂ ದಾಖಲೆ ಶಿಥಿಲವಾಗಿರುವುದರಿಂದ ಅಗತ್ಯವಿರುವ ರೈತರಿಗೆ ದಾಖಲೆ ಬೇಕಾದಲ್ಲಿ ಕಷ್ಟವಾಗುತ್ತಿದೆ. ಗಣಕೀಕೃತ ದಾಖಲೆಗಾಗಿ ಸರ್ಕಾರವೇ ಮರು ಭೂ ಮಾಪನಾ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು.<br /> <br /> ಕಾರ್ತೀಕೇನಹಟ್ಟಿ ಗ್ರಾಮಕ್ಕೊಳಪಡುವ 950 ಎಕರೆ ಜಮೀನಿನಲ್ಲಿ 42 ಸರ್ವೇ ನಂಬರ್ಗಳಿವೆ. ಅವುಗಳಲ್ಲಿ ಸರ್ಕಾರಕ್ಕೆ ಸೇರಿದ 4 ಸರ್ವೇ ನಂಬರ್ ಗಳಿದ್ದು, ರೈತರ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ಸರ್ವೇ ಕೈಗೊಳ್ಳ ಲಾಗುವುದು ಎಂದು ಅವರು ಭರವಸೆ ನೀಡಿದರು.<br /> <br /> ತಹಶೀಲ್ದಾರ್ ವಿಜಯರಾಜು, ಭೂ ಮಾಪನ ಇಲಾಖೆಯ ಉಪ ನಿರ್ದೇಶಕ ರಾಮಾಂಜಿನೇಯ, ಕಂದಾಯ ನಿರೀಕ್ಷಕ ರಾಜಶೇಖರ್, ಭೀಮನ ಕೆರೆ ಶಿವಮೂರ್ತಿ, ರಮೇಶ್ ಬಾಬು, ಮಲ್ಲಯ್ಯ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>