<p>ಗದಗ: ಪುಣ್ಯ ಎಂದರೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸುವುದು ಎಂದರ್ಥ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.<br /> <br /> ನಗರದ ವಿದ್ಯಾಶ್ರಮದಲ್ಲಿ ಶುಕ್ರವಾರ ನಡೆದ ಸತ್ಸಂಗ ಸಮ್ಮೇಳನ, ಆದಿಶಕ್ತಿ ರಥೋತ್ಸವ, ಸದಾಶಿವಾನಂದ ಗುರುಗಳ 117 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಪರೋಪಕಾರ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಾಗೂ ಸಕಲ ಜೀವಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಮಾನವೀಯತೆ ಇಲ್ಲದ ವ್ಯಕ್ತಿ ಮನುಷ್ಯ ಎನಿಸಿಕೊಳ್ಳುವುದಿಲ್ಲ.<br /> <br /> ಮಾನವೀಯತೆಯ ಮೂಲಕ ಮನುಷ್ಯತ್ವದ ಗುಣಗಳು ಅನಾವರಣಗೊಳ್ಳಬೇಕು. ಮನಸ್ಸಿನ ಕೊಳೆ ತೊಳೆದುಕೊಳ್ಳಲು ಸತ್ಸಂಗ ಅವಶ್ಯ. ಸಮಾಜದಲ್ಲಿ ಇಂದು ಧರ್ಮ ಜಾಗೃತಗೊಳ್ಳುವ ಮೂಲಕ ಜನರು ಜಾಗೃತರಾಗಬೇಕು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಿಳಿಸಿದರು.<br /> <br /> ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸುಣಧೋಳಿಯ ಜಡಿಸಿದ್ಧೇಶ್ವರಮಠದ ಅಭಿನವ ಶಿವಾನಂದ ಸ್ವಾಮಿ, ತುಪ್ಪದಕುರಹಟ್ಟಿಯ ವಾಗೀಶ ಪಂಡಿತರಾಧ್ಯ ದೇವರು ಭೂಸನೂರಮಠ ಹಾಜರಿದ್ದರು. ಅಧ್ಯಕ್ಷತೆಯನ್ನು ಇಮ್ರಾಹಿಂಪೂರದ ಶಿವಾನಂದಮಠದ ಸಂಪೂರ್ಣಾನಂದ ಸ್ವಾಮಿ ವಹಿಸಿದ್ದರು.<br /> <br /> ಶಿವಾನಂದ ಮಠದ ದಯಾನಂದ ಮಹಾಸ್ವಾಮಿ, ಕೆ.ಐ.ಗುದಗಿ, ನಗರಸಭಾ ಸದಸ್ಯ ಅನೀಲ ಗರಗ ಭಾಗವಹಿಸಿದ್ದರು ಸಮಾರಂಭದಲ್ಲಿ ಎ.ಎಸ್.ಬ್ಯಾಳಿ ಹಾಗೂ ಬಸವರಾಜ ಶಾಬಾದಿಮಠ ಅವರನ್ನು ಸನ್ಮಾನಿಸಲಾಯಿತು.<br /> <br /> ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯಿಂದ ಪ್ರಾರ್ಥನೆ ನಡೆಯಿತು. ಮಾಜಿ ಶಾಸಕ ಡಿ.ಆರ್.ಪಾಟೀಲ ಸ್ವಾಗತಿಸಿದರು, ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅವರು ಶರಣು ಸರ್ಮಪಿಸಿದರು, ಎಸ್.ಬಿ.ದೊಡ್ಡಣ್ಣವರ ನಿರೂಪಿಸಿದರು, ಎಸ್.ಬಿ.ಹೂಗಾರ ವಂದಿಸಿದರು.<br /> <br /> ಸಂಜೆ ಶ್ರೀದೇವಿ ರಥೋತ್ಸವ ಮತ್ತು ಮುತ್ತೈದೆಯರಿಂದ ತನಾರತಿ ಸೇವೆ ಭಕ್ತಿ ಭಾವದೊಂದಿಗೆ ಜರುಗಿತು.<br /> ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಹಾಗೂ ಅನುಭಾವ ಚಿಂತನಗೋಷ್ಠಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ಪುಣ್ಯ ಎಂದರೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸುವುದು ಎಂದರ್ಥ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.<br /> <br /> ನಗರದ ವಿದ್ಯಾಶ್ರಮದಲ್ಲಿ ಶುಕ್ರವಾರ ನಡೆದ ಸತ್ಸಂಗ ಸಮ್ಮೇಳನ, ಆದಿಶಕ್ತಿ ರಥೋತ್ಸವ, ಸದಾಶಿವಾನಂದ ಗುರುಗಳ 117 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಪರೋಪಕಾರ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಾಗೂ ಸಕಲ ಜೀವಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಮಾನವೀಯತೆ ಇಲ್ಲದ ವ್ಯಕ್ತಿ ಮನುಷ್ಯ ಎನಿಸಿಕೊಳ್ಳುವುದಿಲ್ಲ.<br /> <br /> ಮಾನವೀಯತೆಯ ಮೂಲಕ ಮನುಷ್ಯತ್ವದ ಗುಣಗಳು ಅನಾವರಣಗೊಳ್ಳಬೇಕು. ಮನಸ್ಸಿನ ಕೊಳೆ ತೊಳೆದುಕೊಳ್ಳಲು ಸತ್ಸಂಗ ಅವಶ್ಯ. ಸಮಾಜದಲ್ಲಿ ಇಂದು ಧರ್ಮ ಜಾಗೃತಗೊಳ್ಳುವ ಮೂಲಕ ಜನರು ಜಾಗೃತರಾಗಬೇಕು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಿಳಿಸಿದರು.<br /> <br /> ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸುಣಧೋಳಿಯ ಜಡಿಸಿದ್ಧೇಶ್ವರಮಠದ ಅಭಿನವ ಶಿವಾನಂದ ಸ್ವಾಮಿ, ತುಪ್ಪದಕುರಹಟ್ಟಿಯ ವಾಗೀಶ ಪಂಡಿತರಾಧ್ಯ ದೇವರು ಭೂಸನೂರಮಠ ಹಾಜರಿದ್ದರು. ಅಧ್ಯಕ್ಷತೆಯನ್ನು ಇಮ್ರಾಹಿಂಪೂರದ ಶಿವಾನಂದಮಠದ ಸಂಪೂರ್ಣಾನಂದ ಸ್ವಾಮಿ ವಹಿಸಿದ್ದರು.<br /> <br /> ಶಿವಾನಂದ ಮಠದ ದಯಾನಂದ ಮಹಾಸ್ವಾಮಿ, ಕೆ.ಐ.ಗುದಗಿ, ನಗರಸಭಾ ಸದಸ್ಯ ಅನೀಲ ಗರಗ ಭಾಗವಹಿಸಿದ್ದರು ಸಮಾರಂಭದಲ್ಲಿ ಎ.ಎಸ್.ಬ್ಯಾಳಿ ಹಾಗೂ ಬಸವರಾಜ ಶಾಬಾದಿಮಠ ಅವರನ್ನು ಸನ್ಮಾನಿಸಲಾಯಿತು.<br /> <br /> ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯಿಂದ ಪ್ರಾರ್ಥನೆ ನಡೆಯಿತು. ಮಾಜಿ ಶಾಸಕ ಡಿ.ಆರ್.ಪಾಟೀಲ ಸ್ವಾಗತಿಸಿದರು, ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅವರು ಶರಣು ಸರ್ಮಪಿಸಿದರು, ಎಸ್.ಬಿ.ದೊಡ್ಡಣ್ಣವರ ನಿರೂಪಿಸಿದರು, ಎಸ್.ಬಿ.ಹೂಗಾರ ವಂದಿಸಿದರು.<br /> <br /> ಸಂಜೆ ಶ್ರೀದೇವಿ ರಥೋತ್ಸವ ಮತ್ತು ಮುತ್ತೈದೆಯರಿಂದ ತನಾರತಿ ಸೇವೆ ಭಕ್ತಿ ಭಾವದೊಂದಿಗೆ ಜರುಗಿತು.<br /> ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಹಾಗೂ ಅನುಭಾವ ಚಿಂತನಗೋಷ್ಠಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>