<p><strong>ಮಂಗಳೂರು: </strong>‘ದೇಶವನ್ನು ಕಾಂಗ್ರೆಸ್ 65 ವರ್ಷ ಕಾಲ ಆಳಿದೆ. ಬಿಜೆಪಿಯ ನರೇಂದ್ರ ಮೊದಿ ಅವರಿಗೂ ಒಂದು ಅವಕಾಶ ನೀಡಿ’ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತೇಜಸ್ವಿನಿ ಗೌಡ ಮನವಿ ಮಾಡಿದರು.<br /> <br /> ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಭ್ರಷ್ಟಾಚಾರಗಳಿಂದ ಬೇಸತ್ತು ಬಿಜೆಪಿ ಸೇರಿದ್ದೇನೆ. ಜನಸಾಮಾನ್ಯರು ದೇಶದ ಬಗ್ಗೆ ಹೊಂದಿದ್ದ ಕನಸನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಜಾತ್ಯತೀತತೆ ಹೆಸರಿನಲ್ಲಿ ಕಾಂಗ್ರೆಸ್ ಎಷ್ಟು ವರ್ಷ ದೇಶವನ್ನು ವಂಚಿಸಬಹುದು?’ ಅವರು ಪ್ರಶ್ನಿಸಿದರು.<br /> <br /> ‘ಭ್ರಷ್ಟಾಚಾರ ಆರೋಪ ಹೊತ್ತ ಅಶೋಕ್ ಚೌಹಾಣ್ಗೆ ಟಿಕೆಟ್ ನೀಡಿರುವ ಕಾಂಗ್ರೆಸ್, ಶೀಲಾ ದೀಕ್ಷಿತ್, ಕಾಮನ್ವೆಲ್ತ್ ಹಗರಣದ ರೂವಾರಿ ಸುರೇಶ್ ಕಲ್ಮಾಡಿ ಅವರಿಗೂ ಮಣೆ ಹಾಕಿದೆ’ ಎಂದರು.<br /> <br /> ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಸರ್ಕಾರ ತಪ್ಪು ಮಾಡಿದೆ ನಿಜ. ಅದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಮತ್ತೊಂದು ಅವಕಾಶ ನೀಡಬೇಕು’ ಎಂದರು.<br /> <br /> ‘ರಾಜ್ಯದಲ್ಲಿ ಮಹಿಳೆಗೆ ರಕ್ಷಣೆ ಇಲ್ಲ. ಸಚಿವರೊಬ್ಬರು ಪತ್ರಕರ್ತೆ ಸಹಿತ ಮಾಧ್ಯಮದ ಮಂದಿಯನ್ನು ಒತ್ತೆ ಇಟ್ಟುಕೊಂಡು ಹಲ್ಲೆ ನಡೆಸಿದ್ದಾರೆ. ಪತ್ರಕರ್ತರು ನೀಡಿದ ದೂರನ್ನೂ ಸರ್ಕಾರ ದಾಖಲಿಸದಂತೆ ಸಚಿವರು ಒತ್ತಡ ಹೇರಿದ್ದಾರೆ’ ಎಂದು ಅವರು ಆರೋಪಿಸಿದರು.<br /> <br /> ‘ಹಿಂದೂಗಳ ಮತ ಬೇಡ ಎಂದು ಹೇಳಲಿ’ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದ ಅವರು, ‘ಮೋದಿ ಅವರನ್ನು ಕಾಂಗ್ರೆಸ್ ಕನ್ನಡಕದಲ್ಲಿ ನೋಡಬೇಡಿ’ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದರು.<br /> <br /> ‘ಈ ಬಾರಿಯದು ನಳಿನ್ ಕುಮಾರ್ ಕಟೀಲ್ ಹಾಗೂ ಜನಾರ್ದನ ಪೂಜಾರಿ ಅವರ ನಡುವಿನ ಹೋರಾಟ ಅಲ್ಲ. ಈ ಚುನಾವಣೆಯಲ್ಲಿ ವ್ಯಕ್ತಿ ಮುಖ್ಯ ಅಲ್ಲ’ ಎಂದರು. ಮುಖಂಡರಾದ ಸುಲೋಚನಾ ಭಟ್, ಶಾಂತಾ ಆರ್, ಪುಷ್ಪಲತಾ, ಪ್ರಭಾಮಾಲಿನಿ, ಶಕೀಲಾ ಕಾವ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>‘ದೇಶವನ್ನು ಕಾಂಗ್ರೆಸ್ 65 ವರ್ಷ ಕಾಲ ಆಳಿದೆ. ಬಿಜೆಪಿಯ ನರೇಂದ್ರ ಮೊದಿ ಅವರಿಗೂ ಒಂದು ಅವಕಾಶ ನೀಡಿ’ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತೇಜಸ್ವಿನಿ ಗೌಡ ಮನವಿ ಮಾಡಿದರು.<br /> <br /> ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಭ್ರಷ್ಟಾಚಾರಗಳಿಂದ ಬೇಸತ್ತು ಬಿಜೆಪಿ ಸೇರಿದ್ದೇನೆ. ಜನಸಾಮಾನ್ಯರು ದೇಶದ ಬಗ್ಗೆ ಹೊಂದಿದ್ದ ಕನಸನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಜಾತ್ಯತೀತತೆ ಹೆಸರಿನಲ್ಲಿ ಕಾಂಗ್ರೆಸ್ ಎಷ್ಟು ವರ್ಷ ದೇಶವನ್ನು ವಂಚಿಸಬಹುದು?’ ಅವರು ಪ್ರಶ್ನಿಸಿದರು.<br /> <br /> ‘ಭ್ರಷ್ಟಾಚಾರ ಆರೋಪ ಹೊತ್ತ ಅಶೋಕ್ ಚೌಹಾಣ್ಗೆ ಟಿಕೆಟ್ ನೀಡಿರುವ ಕಾಂಗ್ರೆಸ್, ಶೀಲಾ ದೀಕ್ಷಿತ್, ಕಾಮನ್ವೆಲ್ತ್ ಹಗರಣದ ರೂವಾರಿ ಸುರೇಶ್ ಕಲ್ಮಾಡಿ ಅವರಿಗೂ ಮಣೆ ಹಾಕಿದೆ’ ಎಂದರು.<br /> <br /> ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಸರ್ಕಾರ ತಪ್ಪು ಮಾಡಿದೆ ನಿಜ. ಅದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಮತ್ತೊಂದು ಅವಕಾಶ ನೀಡಬೇಕು’ ಎಂದರು.<br /> <br /> ‘ರಾಜ್ಯದಲ್ಲಿ ಮಹಿಳೆಗೆ ರಕ್ಷಣೆ ಇಲ್ಲ. ಸಚಿವರೊಬ್ಬರು ಪತ್ರಕರ್ತೆ ಸಹಿತ ಮಾಧ್ಯಮದ ಮಂದಿಯನ್ನು ಒತ್ತೆ ಇಟ್ಟುಕೊಂಡು ಹಲ್ಲೆ ನಡೆಸಿದ್ದಾರೆ. ಪತ್ರಕರ್ತರು ನೀಡಿದ ದೂರನ್ನೂ ಸರ್ಕಾರ ದಾಖಲಿಸದಂತೆ ಸಚಿವರು ಒತ್ತಡ ಹೇರಿದ್ದಾರೆ’ ಎಂದು ಅವರು ಆರೋಪಿಸಿದರು.<br /> <br /> ‘ಹಿಂದೂಗಳ ಮತ ಬೇಡ ಎಂದು ಹೇಳಲಿ’ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದ ಅವರು, ‘ಮೋದಿ ಅವರನ್ನು ಕಾಂಗ್ರೆಸ್ ಕನ್ನಡಕದಲ್ಲಿ ನೋಡಬೇಡಿ’ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದರು.<br /> <br /> ‘ಈ ಬಾರಿಯದು ನಳಿನ್ ಕುಮಾರ್ ಕಟೀಲ್ ಹಾಗೂ ಜನಾರ್ದನ ಪೂಜಾರಿ ಅವರ ನಡುವಿನ ಹೋರಾಟ ಅಲ್ಲ. ಈ ಚುನಾವಣೆಯಲ್ಲಿ ವ್ಯಕ್ತಿ ಮುಖ್ಯ ಅಲ್ಲ’ ಎಂದರು. ಮುಖಂಡರಾದ ಸುಲೋಚನಾ ಭಟ್, ಶಾಂತಾ ಆರ್, ಪುಷ್ಪಲತಾ, ಪ್ರಭಾಮಾಲಿನಿ, ಶಕೀಲಾ ಕಾವ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>