<p><strong>ಬೆಂಗಳೂರು: </strong>ಭೂಮಿಕಾ ಪುರವಣಿಯು ಮಹಿಳೆಯರಿಗಾಗಿ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ 2016 ಲಲಿತ ಪ್ರಬಂಧ ಸ್ಪರ್ಧೆಯು ಈ ಸಲವೂ ವೈವಿಧ್ಯಮಯವಾಗಿತ್ತು. ಎಸ್.ಎಫ್. ಯೋಗಪ್ಪನವರ್ ಹಾಗೂ ಎಚ್. ನಾಗವೇಣಿ ಅವರು ತೀರ್ಪುಗಾರರಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿಯೇ ತೀರ್ಪು ನೀಡಿದ್ದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು.<br /> <br /> ಪ್ರತಿ ವರ್ಷವೂ ಹೊಸತನ, ವೈವಿಧ್ಯಮಯ ವಿಷಯ ಹಾಗೂ ಅಭಿವ್ಯಕ್ತಿಯ ಮಾಧ್ಯಮ ಪ್ರತಿ ವರ್ಷವೂ ಪ್ರಬಲ ಸ್ಪರ್ಧೆ ಒಡ್ಡುವ ಗುಣಗಳಾಗಿವೆ. ನಾಡಿನುದ್ದಗಲದಿಂದಷ್ಟೇ ಅಲ್ಲ, ಸಾಗರೋತ್ತರ ಸ್ಪರ್ಧಿಗಳೂ ಭಾಗವಹಿಸಿ ವಿಜೇತರಾಗಿರುವುದು ಈ ವರ್ಷದ ವಿಶೇಷ.<br /> <br /> <strong>ಮೆಚ್ಚುಗೆ ಪಡೆದ ಪ್ರಬಂಧಗಳು:<br /> 1) ದುರಸ್ತಿಯೆಂಬುದು ಬೇಕು ತಂದುರಸ್ತಿಯ ಬದುಕಿಗೆ: </strong>ವೈಶಾಲಿ ಹೆಗಡೆ (ಬಾಸ್ಟನ್, ಯು.ಎಸ್.ಎ.)<br /> <strong>2) ಸಮರಸವೇ ಜೀವನ: </strong>ಜಯಂತಿ ಅಮೃತೇಶ್ (ಮೈಸೂರು)<br /> <strong>3) ಹಾವಿನ ಸುತ್ತ ಭಾವಗಳ ಹುತ್ತ: </strong>ಮಾಲತಿ ಹೆಗಡೆ (ಧಾರವಾಡ)<br /> <strong>4) ಕಳೆಯದ ಬಳೆಯ ನಿನಾದ: </strong>ಲಲಿತಾ ಕೆ ಹೊಸಪ್ಯಾಟಿ (ಬಾಗಲಕೋಟೆ)<br /> <br /> ತೀರ್ಪುಗಾರರ ಮಾತು ಹಾಗೂ ಬಹುಮಾನಿತ ಪ್ರಬಂಧಗಳನ್ನು ‘ಭೂಮಿಕಾ’ ಪುರವಣಿಯಲ್ಲಿ ಪ್ರಕಟಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಭೂಮಿಕಾ ಪುರವಣಿಯು ಮಹಿಳೆಯರಿಗಾಗಿ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ 2016 ಲಲಿತ ಪ್ರಬಂಧ ಸ್ಪರ್ಧೆಯು ಈ ಸಲವೂ ವೈವಿಧ್ಯಮಯವಾಗಿತ್ತು. ಎಸ್.ಎಫ್. ಯೋಗಪ್ಪನವರ್ ಹಾಗೂ ಎಚ್. ನಾಗವೇಣಿ ಅವರು ತೀರ್ಪುಗಾರರಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿಯೇ ತೀರ್ಪು ನೀಡಿದ್ದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು.<br /> <br /> ಪ್ರತಿ ವರ್ಷವೂ ಹೊಸತನ, ವೈವಿಧ್ಯಮಯ ವಿಷಯ ಹಾಗೂ ಅಭಿವ್ಯಕ್ತಿಯ ಮಾಧ್ಯಮ ಪ್ರತಿ ವರ್ಷವೂ ಪ್ರಬಲ ಸ್ಪರ್ಧೆ ಒಡ್ಡುವ ಗುಣಗಳಾಗಿವೆ. ನಾಡಿನುದ್ದಗಲದಿಂದಷ್ಟೇ ಅಲ್ಲ, ಸಾಗರೋತ್ತರ ಸ್ಪರ್ಧಿಗಳೂ ಭಾಗವಹಿಸಿ ವಿಜೇತರಾಗಿರುವುದು ಈ ವರ್ಷದ ವಿಶೇಷ.<br /> <br /> <strong>ಮೆಚ್ಚುಗೆ ಪಡೆದ ಪ್ರಬಂಧಗಳು:<br /> 1) ದುರಸ್ತಿಯೆಂಬುದು ಬೇಕು ತಂದುರಸ್ತಿಯ ಬದುಕಿಗೆ: </strong>ವೈಶಾಲಿ ಹೆಗಡೆ (ಬಾಸ್ಟನ್, ಯು.ಎಸ್.ಎ.)<br /> <strong>2) ಸಮರಸವೇ ಜೀವನ: </strong>ಜಯಂತಿ ಅಮೃತೇಶ್ (ಮೈಸೂರು)<br /> <strong>3) ಹಾವಿನ ಸುತ್ತ ಭಾವಗಳ ಹುತ್ತ: </strong>ಮಾಲತಿ ಹೆಗಡೆ (ಧಾರವಾಡ)<br /> <strong>4) ಕಳೆಯದ ಬಳೆಯ ನಿನಾದ: </strong>ಲಲಿತಾ ಕೆ ಹೊಸಪ್ಯಾಟಿ (ಬಾಗಲಕೋಟೆ)<br /> <br /> ತೀರ್ಪುಗಾರರ ಮಾತು ಹಾಗೂ ಬಹುಮಾನಿತ ಪ್ರಬಂಧಗಳನ್ನು ‘ಭೂಮಿಕಾ’ ಪುರವಣಿಯಲ್ಲಿ ಪ್ರಕಟಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>