<p>ಮೈಸೂರು: ‘ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರ ಚಿಂತನೆಗಳು ಕನ್ನಡ ಸಾಹಿತ್ಯವನ್ನು ಪರಿಭಾವಿಸುವ ಕ್ರಮಗಳನ್ನು ಪುನರ್ ಅವಲೋಕನ ಮಾಡುವಂತೆ ಮಾಡಿವೆ’ ಎಂದು ಕುವೆಂಪು ವಿಶ್ವಿವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.<br /> <br /> 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ಸಮ್ಮೇಳನ ಅಧ್ಯಕ್ಷಅವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> ‘ತಂತ್ರ, ಕಾಳಾಮುಖ, ಪಾಶುಪತ ಮೊದಲಾದ ಶೈವ ಪಂಥೀಯ ವಿಚಾರಧಾರೆಗಳನ್ನು ಅಭ್ಯಾಸ ಮಾಡಿ ಅದರಲ್ಲಿ ತಳ ಸಮುದಾಯವನ್ನು ಅವರು ಹುಡುಕಿದರು. ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿ ಕನ್ನಡಕ್ಕೆ ಅದನ್ನು ಕಸಿ ಮಾಡಿದರು’ ಎಂದು ಅವರ ಸಾಹಿತ್ಯಕ ಚಿಂತನೆಗಳನ್ನು ಕುರಿತು ಅವರು ಮಾತನಾಡಿದರು.<br /> <br /> ‘ತಳ ಸಮುದಾಯಗಳ ಜ್ಞಾನ ಶಿಸ್ತುಗಳನ್ನು ಪುನರ್ ಪರಿಶೀಲಿಸುವಂತೆ ಮಾಡುವಲ್ಲಿ ಅವರು ಸಫಲರಾದರು. ತಳ ಸಂಸ್ಕೃತಿಯಿಂದ ಪ್ರಧಾನ ಸಂಸ್ಕೃತಿಯ ಗೋಡೆಗಳನ್ನು ಮೀರಿದರು’ ಎಂದು ವಿವರಿಸಿದರು.<br /> <br /> ‘ಶೋಷಣೆ ಮಾಡುವ ಪುರೋಹಿತಶಾಹಿ ವರ್ಗದವರ ವಿರುದ್ಧ ಅಬ್ಬರಿಸಿದವರಲ್ಲ. ಆದರೆ, ಮೆಲ್ಲಗೆ ಚುರುಕನ್ನು ಮುಟ್ಟಿಸಿದವರು. ಬಾಲ್ಯದಲ್ಲಿ ಕಡು ಬಡತನ, ನೋವು, ಅಪಮಾನ, ಹಸಿವುಗಳ ಮಧ್ಯೆಯೇ ಬೆಳೆದು ಶ್ರೇಷ್ಠ ಚಿಂತಕರಾದರು’ ಎಂದು ಅವರು ಮಲ್ಲೇಪುರಂ ಅವರ ಬದುಕನ್ನು ಕುರಿತು ವಿವರಿಸಿದರು.<br /> ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ಡಾ.ಸಿ.ಪಿ. ಸಿದ್ಧಾಶ್ರಮ, ಸತ್ಯಮಂಗಲ ಮಹಾದೇವ,<br /> ಡಾ.ಬಿ.ಎಂ. ಕಟ್ಟಿ, ಡಾ.ಕುಶಾಲ ಬರಗೂರ ಸೇರಿದಂತೆ ಹಲವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರ ಚಿಂತನೆಗಳು ಕನ್ನಡ ಸಾಹಿತ್ಯವನ್ನು ಪರಿಭಾವಿಸುವ ಕ್ರಮಗಳನ್ನು ಪುನರ್ ಅವಲೋಕನ ಮಾಡುವಂತೆ ಮಾಡಿವೆ’ ಎಂದು ಕುವೆಂಪು ವಿಶ್ವಿವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.<br /> <br /> 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ಸಮ್ಮೇಳನ ಅಧ್ಯಕ್ಷಅವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> ‘ತಂತ್ರ, ಕಾಳಾಮುಖ, ಪಾಶುಪತ ಮೊದಲಾದ ಶೈವ ಪಂಥೀಯ ವಿಚಾರಧಾರೆಗಳನ್ನು ಅಭ್ಯಾಸ ಮಾಡಿ ಅದರಲ್ಲಿ ತಳ ಸಮುದಾಯವನ್ನು ಅವರು ಹುಡುಕಿದರು. ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿ ಕನ್ನಡಕ್ಕೆ ಅದನ್ನು ಕಸಿ ಮಾಡಿದರು’ ಎಂದು ಅವರ ಸಾಹಿತ್ಯಕ ಚಿಂತನೆಗಳನ್ನು ಕುರಿತು ಅವರು ಮಾತನಾಡಿದರು.<br /> <br /> ‘ತಳ ಸಮುದಾಯಗಳ ಜ್ಞಾನ ಶಿಸ್ತುಗಳನ್ನು ಪುನರ್ ಪರಿಶೀಲಿಸುವಂತೆ ಮಾಡುವಲ್ಲಿ ಅವರು ಸಫಲರಾದರು. ತಳ ಸಂಸ್ಕೃತಿಯಿಂದ ಪ್ರಧಾನ ಸಂಸ್ಕೃತಿಯ ಗೋಡೆಗಳನ್ನು ಮೀರಿದರು’ ಎಂದು ವಿವರಿಸಿದರು.<br /> <br /> ‘ಶೋಷಣೆ ಮಾಡುವ ಪುರೋಹಿತಶಾಹಿ ವರ್ಗದವರ ವಿರುದ್ಧ ಅಬ್ಬರಿಸಿದವರಲ್ಲ. ಆದರೆ, ಮೆಲ್ಲಗೆ ಚುರುಕನ್ನು ಮುಟ್ಟಿಸಿದವರು. ಬಾಲ್ಯದಲ್ಲಿ ಕಡು ಬಡತನ, ನೋವು, ಅಪಮಾನ, ಹಸಿವುಗಳ ಮಧ್ಯೆಯೇ ಬೆಳೆದು ಶ್ರೇಷ್ಠ ಚಿಂತಕರಾದರು’ ಎಂದು ಅವರು ಮಲ್ಲೇಪುರಂ ಅವರ ಬದುಕನ್ನು ಕುರಿತು ವಿವರಿಸಿದರು.<br /> ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ಡಾ.ಸಿ.ಪಿ. ಸಿದ್ಧಾಶ್ರಮ, ಸತ್ಯಮಂಗಲ ಮಹಾದೇವ,<br /> ಡಾ.ಬಿ.ಎಂ. ಕಟ್ಟಿ, ಡಾ.ಕುಶಾಲ ಬರಗೂರ ಸೇರಿದಂತೆ ಹಲವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>