<p>ರಾಣೆಬೆನ್ನೂರು: ಬಡ ಜನರ ಅಭಿವೃದ್ಧಿ ಗಾಗಿ ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳನ್ನು ಪ.ಜಾ. ಪ.ಪಂಗಡ ದವರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.<br /> <br /> ಇಲ್ಲಿನ ನಗರಸಭೆ ಆವರಣದಲ್ಲಿ 2013–14 ನೇ ಸಾಲಿನ ಎಸ್ಎಫ್ಸಿ ಮುಕ್ತನಿಧಿ ಮತ್ತು ನಗರಸಭೆ ಆದಾಯದ ಶೇ.22.75ರ ಕಾಯ್ದಿರಿಸಿದ ನಿಧಿಯ ಅಡಿಯಲ್ಲಿ ಪ.ಜಾ., ಪಂಗಡದ ಜನರ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬಡ ಜನತೆ ಮಧ್ಯವರ್ತಿಗಳನ್ನು ಕರೆದುಕೊಂಡು ಬರದೇ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗಳ ಲಾಭ ಪಡೆಯಬೇಕು ಎಂದು ಶಾಸಕರು ಸಲಹೆ ನೀಡಿದರು.<br /> <br /> ವೈಯಕ್ತಿಕ ಶೌಚಾಯಲ ನಿರ್ಮಾಣ, ಗ್ಯಾಸ್ ಸಿಲಿಂಡರ್, ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಗವಿಕ ಸ್ವಯಂ ಉದ್ಯೋಗ ಮಾಡಲು ಸಹಾಯಧನದ ಆದೇಶ ಪತ್ರಗಳನ್ನು ವಿತರಣೆ ಮಾಡಿದರು.<br /> <br /> 2013–14 ನೇ ಎಸ್ಎಫ್ಸಿ ಮುಕ್ತ ನಿಧಿ ಅನುದಾನದಲ್ಲಿ ಹಾಗೂ ನಗರಸಭೆ ಆಧಾಯದ ಶೇ.22.75, 7.25 ಹಾಗೂ ಶೇ.3 ರಡಿ ಕಾಯ್ದಿರಿಸಿದ ಅನುದಾನದಲ್ಲಿ ಒಟ್ಟು ₨ 1.74 ಕೋಟಿ ರೂಪಾಯಿಗಳ ಅನುದಾನದ ಪರಿಹಾರದ ಆದೇಶ ಪತ್ರಗಳನ್ನು ಶಾಸಕರು ವಿತರಣೆ ಮಾಡಿದರು.<br /> <br /> ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುಲ್ಲಾ ಖಾಜಿ ಹಾಗೂ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ರತ್ನಾಪುನೀತ, ಸುರೇಶ ಕಲಾಲ, ಸೈಯದ್ ಬಾಷಾ , ಪ್ರಕಾಶ ಜೈನ, ಪ್ರಭು ಸ್ವಾಮಿ , ರಾಘವೇಂದ್ರ ಚಿನ್ನಿಕಟ್ಟಿ, ಬಸವರಾಜ ಹುಚಗೊಂಡರ, ಆಯೂಬ್ ಖಾನ್ ಮತ್ತು ಸಹಾಯಕ ಎಂಜಿನಿಯರ್ ಬಿ.ಎಸ್.ಪಾಟೀಲ, ಸುರೇಶ ಚಲುವಾದಿ, ಮಧು ಕೋಳಿವಾಡ ಉಪಸ್ಥಿತರಿದ್ದರು.<br /> <br /> ರುದ್ರಮುನೀಶ್ವರ ಕಾರ್ಯಕ್ರಮ ನಿರೂಪಿಸಿದರು, ಪೌರಾಯಕ್ತ ಬಿ.ಎಸ್. ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಮುದಾಯ ಸಂಘಟನಾಧಿಕಾರಿ ಎನ್.ಕೆಂಚಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ಬಡ ಜನರ ಅಭಿವೃದ್ಧಿ ಗಾಗಿ ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳನ್ನು ಪ.ಜಾ. ಪ.ಪಂಗಡ ದವರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.<br /> <br /> ಇಲ್ಲಿನ ನಗರಸಭೆ ಆವರಣದಲ್ಲಿ 2013–14 ನೇ ಸಾಲಿನ ಎಸ್ಎಫ್ಸಿ ಮುಕ್ತನಿಧಿ ಮತ್ತು ನಗರಸಭೆ ಆದಾಯದ ಶೇ.22.75ರ ಕಾಯ್ದಿರಿಸಿದ ನಿಧಿಯ ಅಡಿಯಲ್ಲಿ ಪ.ಜಾ., ಪಂಗಡದ ಜನರ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬಡ ಜನತೆ ಮಧ್ಯವರ್ತಿಗಳನ್ನು ಕರೆದುಕೊಂಡು ಬರದೇ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗಳ ಲಾಭ ಪಡೆಯಬೇಕು ಎಂದು ಶಾಸಕರು ಸಲಹೆ ನೀಡಿದರು.<br /> <br /> ವೈಯಕ್ತಿಕ ಶೌಚಾಯಲ ನಿರ್ಮಾಣ, ಗ್ಯಾಸ್ ಸಿಲಿಂಡರ್, ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಗವಿಕ ಸ್ವಯಂ ಉದ್ಯೋಗ ಮಾಡಲು ಸಹಾಯಧನದ ಆದೇಶ ಪತ್ರಗಳನ್ನು ವಿತರಣೆ ಮಾಡಿದರು.<br /> <br /> 2013–14 ನೇ ಎಸ್ಎಫ್ಸಿ ಮುಕ್ತ ನಿಧಿ ಅನುದಾನದಲ್ಲಿ ಹಾಗೂ ನಗರಸಭೆ ಆಧಾಯದ ಶೇ.22.75, 7.25 ಹಾಗೂ ಶೇ.3 ರಡಿ ಕಾಯ್ದಿರಿಸಿದ ಅನುದಾನದಲ್ಲಿ ಒಟ್ಟು ₨ 1.74 ಕೋಟಿ ರೂಪಾಯಿಗಳ ಅನುದಾನದ ಪರಿಹಾರದ ಆದೇಶ ಪತ್ರಗಳನ್ನು ಶಾಸಕರು ವಿತರಣೆ ಮಾಡಿದರು.<br /> <br /> ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುಲ್ಲಾ ಖಾಜಿ ಹಾಗೂ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ರತ್ನಾಪುನೀತ, ಸುರೇಶ ಕಲಾಲ, ಸೈಯದ್ ಬಾಷಾ , ಪ್ರಕಾಶ ಜೈನ, ಪ್ರಭು ಸ್ವಾಮಿ , ರಾಘವೇಂದ್ರ ಚಿನ್ನಿಕಟ್ಟಿ, ಬಸವರಾಜ ಹುಚಗೊಂಡರ, ಆಯೂಬ್ ಖಾನ್ ಮತ್ತು ಸಹಾಯಕ ಎಂಜಿನಿಯರ್ ಬಿ.ಎಸ್.ಪಾಟೀಲ, ಸುರೇಶ ಚಲುವಾದಿ, ಮಧು ಕೋಳಿವಾಡ ಉಪಸ್ಥಿತರಿದ್ದರು.<br /> <br /> ರುದ್ರಮುನೀಶ್ವರ ಕಾರ್ಯಕ್ರಮ ನಿರೂಪಿಸಿದರು, ಪೌರಾಯಕ್ತ ಬಿ.ಎಸ್. ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಮುದಾಯ ಸಂಘಟನಾಧಿಕಾರಿ ಎನ್.ಕೆಂಚಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>