<p><strong>ನವದೆಹಲಿ (ಪಿಟಿಐ):</strong> ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್ಎಂಡಿಸಿ) ಅಕ್ಟೋಬರ್ 14ರಂದು (ಶುಕ್ರವಾರ) ಕರ್ನಾಟಕದಲ್ಲಿ 3 ಲಕ್ಷ ಟನ್ ಕಬ್ಬಿಣದ ಅದಿರಿನ `ಇ- ಹರಾಜು~ ನಡೆಸಲಿದೆ.</p>.<p>ಕಳೆದ10 ದಿನಗಳಲ್ಲಿ `ಎನ್ಎಂಡಿಸಿ~ ನಡೆಸುತ್ತಿರುವ ಎರಡನೆಯ`ಇ-ಹರಾಜು~ ಪ್ರಕ್ರಿಯೆ ಇದಾಗಿದೆ. ಅಕ್ಟೋಬರ್ 4ರಂದು ನಡೆದ `ಇ-ಹರಾಜಿನಲ್ಲಿ~ 2 ಲಕ್ಷ ಟನ್ ಕಬ್ಬಿಣ ಅದಿರು ಮಾರಾಟ ಮಾಡಲಾಗಿತ್ತು.</p>.<p>ಕಬ್ಬಿಣ ಅದಿರು ಕೊರತೆಯಿಂದ ಕರ್ನಾಟಕದ ಹಲವು ಉಕ್ಕು ತಯಾರಿಕೆ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಮೂರನೆಯ ಸುತ್ತಿನ `ಇ-ಹರಾಜು~ ಪ್ರಕ್ರಿಯೆ ಮೂಲಕ 3 ಲಕ್ಷ ಟನ್ ಕಬ್ಬಿಣದ ಅದಿರು ಮಾರಾಟಕ್ಕೆ ಮುಂದಾಗಿದ್ದೇವೆ ಎಂದು `ಎನ್ಎಂಡಿಸಿ~ಯ ಅಧ್ಯಕ್ಷ ರಾಣಾ ಸೋಮ್ ತಿಳಿಸಿದ್ದಾರೆ.</p>.<p>ಮುಂಬರುವ ದಿನಗಳಲ್ಲಿ `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುವ ಕಬ್ಬಿಣದ ಅದಿರಿನ ಪ್ರಮಾಣವನ್ನು ಹೆಚ್ಚಿಸುವ ಕುರಿತು `ಎನ್ಎಂಡಿಸಿ~ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, `ನಿಗಾ ಸಮಿತಿ~ಯೊಂದನ್ನು ನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿದೆ. ಇದರಿಂದ ಈಗ ಪ್ರತಿ ವಾರ ನಡೆಯುತ್ತಿರುವ ಅದಿರು `ಇ-ಹರಾಜು~ಗಳ ಸಂಖ್ಯೆ ಹೆಚ್ಚಿಸಬಹುದು. ಇದರಿಂದ ಕಂಪೆನಿಗೆ ಹೆಚ್ಚುವರಿ ಅದಿರು ಸಂಗ್ರಹಿಸುವುದು ತಪ್ಪಿ, ವಿಲೇವಾರಿ ಸರಳವಾಗುತ್ತದೆ ಎಂದು ರಾಣಾ ಹೇಳಿದ್ದಾರೆ. </p>.<p>ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ, `ಎನ್ಎಂಡಿಸಿ~ ಕರ್ನಾಟಕದಲ್ಲಿ ಹೊರ ತೆಗೆಯುವ ಕಬ್ಬಿಣದ ಅದಿರನ್ನು `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುತ್ತಿದೆ. ಸದ್ಯ `ಎನ್ಎಂಡಿಸಿ~ ರಾಜ್ಯದಲ್ಲಿರುವ ಎರಡು ಘಟಕಗಳ ಮೂಲಕ ಪ್ರತಿ ದಿನ 20 ಸಾವಿರ್ ಟನ್ಗಳಷ್ಟು ಕಬ್ಬಿಣ ಅದಿರನ್ನು ಹೊರ ತೆಗೆಯುತ್ತಿದೆ. `ಇ-ಹರಾಜು~ ಪ್ರಕ್ರಿಯೆ ಪ್ರಾರಂಭಗೊಂಡ ನಂತರ ಅದಿರು ಶೀಘ್ರ ವಿಲೇವಾರಿ ಆಗುತ್ತಿದ್ದು, ಇದರಿಂದ ಪ್ರತಿ ದಿನದ ಉತ್ಪಾದನೆ ಸಾಮರ್ಥ್ಯವನ್ನು 30 ಸಾವಿರ ಟನ್ಗಳಿಗೆ ಹೆಚ್ಚಿಸಬೇಕಾಗಿದೆ ಎಂದು ರಾಣಾ ಹೇಳಿದ್ದಾರೆ.</p>.<p>ಕಳೆದ ಸೆಪ್ಟೆಂಬರ್ 14ರಿಂದ ಇಲ್ಲಿಯವರೆಗೆ `ಎನ್ಎಂಡಿಸಿ~ ಒಟ್ಟು 3.54 ಲಕ್ಷ ಟನ್ ಅದಿರನ್ನು `ಇ-ಹರಾಜು~ ಮೂಲಕ ಮಾರಾಟ ಮಾಡಿದೆ. ಅದಿರು `ಇ-ಹರಾಜು~ ಪ್ರಾರಂಭಗೊಂಡಿರುವುದರಿಂದ ರಾಜ್ಯದ ಉಕ್ಕು, ಮೆದು ಕಬ್ಬಿಣ ಮತ್ತು ಕಬ್ಬಿಣದ ಅದಿರು ಆಧಾರಿತ ಕಂಪೆನಿಗಳು ನಿಟ್ಟುಸಿರು ಬಿಟ್ಟಿವೆ. ಸುಪ್ರೀಂಕೋರ್ಟ್ ಗಣಿಗಾರಿಕೆ ನಿಷೇಧಿಸಿದ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ಅದಿರಿನ ತೀವ್ರ ಕೊರತೆ ಎದುರಿಸುತ್ತಿದ್ದು, ಘಟಕಗಳನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ.</p>.<p>ರಾಜ್ಯದ ಅತಿ ದೊಡ್ಡ ಉಕ್ಕು ತಯಾರಿಕೆ ಕಂಪೆನಿ `ಜೆಎಸ್ಡಬ್ಲ್ಯು~ ವಾರ್ಷಿಕ 10 ದಶಲಕ್ಷ ಟನ್ಗಳಷ್ಟು ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಅದಿರಿನ ಕೊರತೆಯಿಂದ ಕಳೆದ ತಿಂಗಳು ಒಟ್ಟು ಉತ್ಪಾದನೆಯನ್ನು ಶೇ 70ರಷ್ಟು ತಗ್ಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್ಎಂಡಿಸಿ) ಅಕ್ಟೋಬರ್ 14ರಂದು (ಶುಕ್ರವಾರ) ಕರ್ನಾಟಕದಲ್ಲಿ 3 ಲಕ್ಷ ಟನ್ ಕಬ್ಬಿಣದ ಅದಿರಿನ `ಇ- ಹರಾಜು~ ನಡೆಸಲಿದೆ.</p>.<p>ಕಳೆದ10 ದಿನಗಳಲ್ಲಿ `ಎನ್ಎಂಡಿಸಿ~ ನಡೆಸುತ್ತಿರುವ ಎರಡನೆಯ`ಇ-ಹರಾಜು~ ಪ್ರಕ್ರಿಯೆ ಇದಾಗಿದೆ. ಅಕ್ಟೋಬರ್ 4ರಂದು ನಡೆದ `ಇ-ಹರಾಜಿನಲ್ಲಿ~ 2 ಲಕ್ಷ ಟನ್ ಕಬ್ಬಿಣ ಅದಿರು ಮಾರಾಟ ಮಾಡಲಾಗಿತ್ತು.</p>.<p>ಕಬ್ಬಿಣ ಅದಿರು ಕೊರತೆಯಿಂದ ಕರ್ನಾಟಕದ ಹಲವು ಉಕ್ಕು ತಯಾರಿಕೆ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಮೂರನೆಯ ಸುತ್ತಿನ `ಇ-ಹರಾಜು~ ಪ್ರಕ್ರಿಯೆ ಮೂಲಕ 3 ಲಕ್ಷ ಟನ್ ಕಬ್ಬಿಣದ ಅದಿರು ಮಾರಾಟಕ್ಕೆ ಮುಂದಾಗಿದ್ದೇವೆ ಎಂದು `ಎನ್ಎಂಡಿಸಿ~ಯ ಅಧ್ಯಕ್ಷ ರಾಣಾ ಸೋಮ್ ತಿಳಿಸಿದ್ದಾರೆ.</p>.<p>ಮುಂಬರುವ ದಿನಗಳಲ್ಲಿ `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುವ ಕಬ್ಬಿಣದ ಅದಿರಿನ ಪ್ರಮಾಣವನ್ನು ಹೆಚ್ಚಿಸುವ ಕುರಿತು `ಎನ್ಎಂಡಿಸಿ~ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, `ನಿಗಾ ಸಮಿತಿ~ಯೊಂದನ್ನು ನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿದೆ. ಇದರಿಂದ ಈಗ ಪ್ರತಿ ವಾರ ನಡೆಯುತ್ತಿರುವ ಅದಿರು `ಇ-ಹರಾಜು~ಗಳ ಸಂಖ್ಯೆ ಹೆಚ್ಚಿಸಬಹುದು. ಇದರಿಂದ ಕಂಪೆನಿಗೆ ಹೆಚ್ಚುವರಿ ಅದಿರು ಸಂಗ್ರಹಿಸುವುದು ತಪ್ಪಿ, ವಿಲೇವಾರಿ ಸರಳವಾಗುತ್ತದೆ ಎಂದು ರಾಣಾ ಹೇಳಿದ್ದಾರೆ. </p>.<p>ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ, `ಎನ್ಎಂಡಿಸಿ~ ಕರ್ನಾಟಕದಲ್ಲಿ ಹೊರ ತೆಗೆಯುವ ಕಬ್ಬಿಣದ ಅದಿರನ್ನು `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುತ್ತಿದೆ. ಸದ್ಯ `ಎನ್ಎಂಡಿಸಿ~ ರಾಜ್ಯದಲ್ಲಿರುವ ಎರಡು ಘಟಕಗಳ ಮೂಲಕ ಪ್ರತಿ ದಿನ 20 ಸಾವಿರ್ ಟನ್ಗಳಷ್ಟು ಕಬ್ಬಿಣ ಅದಿರನ್ನು ಹೊರ ತೆಗೆಯುತ್ತಿದೆ. `ಇ-ಹರಾಜು~ ಪ್ರಕ್ರಿಯೆ ಪ್ರಾರಂಭಗೊಂಡ ನಂತರ ಅದಿರು ಶೀಘ್ರ ವಿಲೇವಾರಿ ಆಗುತ್ತಿದ್ದು, ಇದರಿಂದ ಪ್ರತಿ ದಿನದ ಉತ್ಪಾದನೆ ಸಾಮರ್ಥ್ಯವನ್ನು 30 ಸಾವಿರ ಟನ್ಗಳಿಗೆ ಹೆಚ್ಚಿಸಬೇಕಾಗಿದೆ ಎಂದು ರಾಣಾ ಹೇಳಿದ್ದಾರೆ.</p>.<p>ಕಳೆದ ಸೆಪ್ಟೆಂಬರ್ 14ರಿಂದ ಇಲ್ಲಿಯವರೆಗೆ `ಎನ್ಎಂಡಿಸಿ~ ಒಟ್ಟು 3.54 ಲಕ್ಷ ಟನ್ ಅದಿರನ್ನು `ಇ-ಹರಾಜು~ ಮೂಲಕ ಮಾರಾಟ ಮಾಡಿದೆ. ಅದಿರು `ಇ-ಹರಾಜು~ ಪ್ರಾರಂಭಗೊಂಡಿರುವುದರಿಂದ ರಾಜ್ಯದ ಉಕ್ಕು, ಮೆದು ಕಬ್ಬಿಣ ಮತ್ತು ಕಬ್ಬಿಣದ ಅದಿರು ಆಧಾರಿತ ಕಂಪೆನಿಗಳು ನಿಟ್ಟುಸಿರು ಬಿಟ್ಟಿವೆ. ಸುಪ್ರೀಂಕೋರ್ಟ್ ಗಣಿಗಾರಿಕೆ ನಿಷೇಧಿಸಿದ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ಅದಿರಿನ ತೀವ್ರ ಕೊರತೆ ಎದುರಿಸುತ್ತಿದ್ದು, ಘಟಕಗಳನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ.</p>.<p>ರಾಜ್ಯದ ಅತಿ ದೊಡ್ಡ ಉಕ್ಕು ತಯಾರಿಕೆ ಕಂಪೆನಿ `ಜೆಎಸ್ಡಬ್ಲ್ಯು~ ವಾರ್ಷಿಕ 10 ದಶಲಕ್ಷ ಟನ್ಗಳಷ್ಟು ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಅದಿರಿನ ಕೊರತೆಯಿಂದ ಕಳೆದ ತಿಂಗಳು ಒಟ್ಟು ಉತ್ಪಾದನೆಯನ್ನು ಶೇ 70ರಷ್ಟು ತಗ್ಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>