ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ 19 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.
ಹುಮನಾಬಾದ್ನ ಬುಗ್ಗಿ ಬಸವಣ್ಣ ಕೆರೆಯಲ್ಲಿ ಮೂವರು ಬಾಲಕಿಯರು ಮತ್ತು ಒಬ್ಬ ಬಾಲಕ ಜಲಸಮಾಧಿಯಾಗಿದ್ದಾರೆ. ಧಾರವಾಡದ ಗಾಂಧಿನಗರದಲ್ಲಿ ಗಣೇಶ ವಿಸರ್ಜನೆಗೆ ನಿರ್ಮಿಸಿದ್ದ ಹೊಂಡಕ್ಕೆ ಬಿದ್ದು 2 ಮಕ್ಕಳು ಸತ್ತಿದ್ದಾರೆ.
ಕನಕಪುರ ರಸ್ತೆ ಸೋಮನಹಳ್ಳಿ ಬಳಿ ಬಸ್–ಕಾರು ಡಿಕ್ಕಿಯಲ್ಲಿ ಐವರು, ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು, ವರ್ತೂರು ಕೆರೆಯಲ್ಲಿ ಮುಳುಗಿ ಇಬ್ಬರು, ಮಳೆಯಿಂದ ಮನೆ ಗೋಡೆ ಕುಸಿದು ದೊಮ್ಮಲೂರಿನಲ್ಲಿ ಇಬ್ಬರು ಮತ್ತು ತುಮಕೂರು ಜಿಲ್ಲೆ ಚಿ ನಾ ಹಳ್ಳಿ ತಾಲ್ಲೂಕು ಕಾತ್ರಿಕೆಹಾಳದಲ್ಲಿ ಒಬ್ಬರು, ಸಿಡಿಲು ಬಡಿದು ಹುಬ್ಬಳ್ಳಿ ಬಳಿ ಕುಸುಗಲ್ನಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದಾರೆ.