<p><strong>ವಾಷಿಂಗ್ಟನ್ (ಪಿಟಿಐ): </strong>`2ಜಿ ತರಂಗಾಂತರ ಹಂಚಿಕೆ ಹಗರಣದ ಸುಳಿಗೆ ಗೃಹ ಸಚಿವ ಪಿ. ಚಿದಂಬರಂ ಸಿಲುಕಿಕೊಂಡಿರುವ ವಿವಾದದ ಬಗ್ಗೆ ಭಾರತಕ್ಕೆ ಮರಳಿದ ನಂತರ ಮಾತನಾಡುವೆ~ ಎಂದು ಹಣಕಾಸು ಸಚಿವ ಪ್ರಣವ್ ಅವರು ತಮ್ಮನ್ನು ಭೇಟಿ ಮಾಡಿದ ಭಾರತ ಪತ್ರಕರ್ತರ ತಂಡಕ್ಕೆ ತಿಳಿಸಿದ್ದಾರೆ.<br /> <br /> ಇದೇ ವಿಚಾರವಾಗಿ ಪ್ರಣವ್, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನ್ಯೂಯಾರ್ಕ್ನಲ್ಲಿ ಭಾನುವಾರ ಭೇಟಿ ಮಾಡಿ, ಅಂದು ಸಂಜೆಯೇ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ.<br /> <br /> ಪ್ರಧಾನಿ ಅವರನ್ನು ನ್ಯೂಯಾರ್ಕ್ನಲ್ಲಿ ಭೇಟಿ ಮಾಡುವ ಸಲುವಾಗಿಯೇ ಪ್ರಣವ್ ವಾಷಿಂಗ್ಟನ್ನಿಂದ ಒಂದು ದಿನ ಮೊದಲೇ ನಿರ್ಗಮಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ನಿಗದಿಯಾದ ಎಲ್ಲಾ ಕಾರ್ಯವನ್ನು ಪೂರೈಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.<br /> <br /> ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಪ್ರಣವ್ ಮುಖರ್ಜಿ ಭಾನುವಾರ ಮಧ್ಯಾಹ್ನ ಇಲ್ಲಿಂದ ತೆರಳಬೇಕಿತ್ತು. ಆದರೆ ಈಗ ಶನಿವಾರ ಸಂಜೆಯೇ ಇಲ್ಲಿಂದ ನ್ಯೂಯಾರ್ಕ್ಗೆ ತೆರಳಲಿದ್ದಾರೆ.<br /> <br /> <strong>`ಆರೋಪ ತರವಲ್ಲ~ (ನ್ಯೂಯಾರ್ಕ್ ವರದಿ): </strong> 2ಜಿ ಹಗರಣದ ಸುಳಿಗೆ ಸಿಲುಕಿರುವ ಗೃಹ ಸಚಿವ ಪಿ. ಚಿದಂಬರಂ ಅವರ ರಕ್ಷಣೆಗೆ ಧಾವಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮ, `ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ತರವಲ್ಲ ಮತ್ತು ಅವರು ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಜನರು ಬರಬಾರದು~ ಎಂದು ಹೇಳಿದ್ದಾರೆ.<br /> <br /> `ಹಗರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಅಲ್ಲಿ ತೀರ್ಮಾನವಾಗುವುದಕ್ಕೂ ಮುನ್ನವೇ ಅವಸರದ ನಿರ್ಣಯಕ್ಕೆ ಬರುವುದು ಸರಿಯಲ್ಲ ~ ಎಂದು ಹೂಡಿಕೆದಾರರ ವೇದಿಕೆ ಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ (ಪಿಟಿಐ): </strong>`2ಜಿ ತರಂಗಾಂತರ ಹಂಚಿಕೆ ಹಗರಣದ ಸುಳಿಗೆ ಗೃಹ ಸಚಿವ ಪಿ. ಚಿದಂಬರಂ ಸಿಲುಕಿಕೊಂಡಿರುವ ವಿವಾದದ ಬಗ್ಗೆ ಭಾರತಕ್ಕೆ ಮರಳಿದ ನಂತರ ಮಾತನಾಡುವೆ~ ಎಂದು ಹಣಕಾಸು ಸಚಿವ ಪ್ರಣವ್ ಅವರು ತಮ್ಮನ್ನು ಭೇಟಿ ಮಾಡಿದ ಭಾರತ ಪತ್ರಕರ್ತರ ತಂಡಕ್ಕೆ ತಿಳಿಸಿದ್ದಾರೆ.<br /> <br /> ಇದೇ ವಿಚಾರವಾಗಿ ಪ್ರಣವ್, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನ್ಯೂಯಾರ್ಕ್ನಲ್ಲಿ ಭಾನುವಾರ ಭೇಟಿ ಮಾಡಿ, ಅಂದು ಸಂಜೆಯೇ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ.<br /> <br /> ಪ್ರಧಾನಿ ಅವರನ್ನು ನ್ಯೂಯಾರ್ಕ್ನಲ್ಲಿ ಭೇಟಿ ಮಾಡುವ ಸಲುವಾಗಿಯೇ ಪ್ರಣವ್ ವಾಷಿಂಗ್ಟನ್ನಿಂದ ಒಂದು ದಿನ ಮೊದಲೇ ನಿರ್ಗಮಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ನಿಗದಿಯಾದ ಎಲ್ಲಾ ಕಾರ್ಯವನ್ನು ಪೂರೈಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.<br /> <br /> ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಪ್ರಣವ್ ಮುಖರ್ಜಿ ಭಾನುವಾರ ಮಧ್ಯಾಹ್ನ ಇಲ್ಲಿಂದ ತೆರಳಬೇಕಿತ್ತು. ಆದರೆ ಈಗ ಶನಿವಾರ ಸಂಜೆಯೇ ಇಲ್ಲಿಂದ ನ್ಯೂಯಾರ್ಕ್ಗೆ ತೆರಳಲಿದ್ದಾರೆ.<br /> <br /> <strong>`ಆರೋಪ ತರವಲ್ಲ~ (ನ್ಯೂಯಾರ್ಕ್ ವರದಿ): </strong> 2ಜಿ ಹಗರಣದ ಸುಳಿಗೆ ಸಿಲುಕಿರುವ ಗೃಹ ಸಚಿವ ಪಿ. ಚಿದಂಬರಂ ಅವರ ರಕ್ಷಣೆಗೆ ಧಾವಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮ, `ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ತರವಲ್ಲ ಮತ್ತು ಅವರು ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಜನರು ಬರಬಾರದು~ ಎಂದು ಹೇಳಿದ್ದಾರೆ.<br /> <br /> `ಹಗರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಅಲ್ಲಿ ತೀರ್ಮಾನವಾಗುವುದಕ್ಕೂ ಮುನ್ನವೇ ಅವಸರದ ನಿರ್ಣಯಕ್ಕೆ ಬರುವುದು ಸರಿಯಲ್ಲ ~ ಎಂದು ಹೂಡಿಕೆದಾರರ ವೇದಿಕೆ ಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>