<p><strong>ಕಡಬ (ಉಪ್ಪಿನಂಗಡಿ): </strong>ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಘಟ್ಟದ ಮೇಲಿನಿಂದ ನೀರಿನ ಪ್ರವಾಹ ಒಂದೇ ಸವನೆ ಜಾಸ್ತಿಯಾಗಿರುವುದರಿಂದಾಗಿ ಗುಂಡ್ಯ ಹೊಳೆ ಹರಿಯುವ ಹೊಸ್ಮಠ ಮುಳುಗು ಸೇತುವೆ ಕಳೆದ 28 ಗಂಟೆಯಿಂದ ಮುಳುಗಡೆಯಾಗಿದೆ.<br /> <br /> ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ಸೇತುವೆ ಮುಳುಗಡೆ ಆಗಿದ್ದು, ಮಂಗಳವಾರ ರಾತ್ರಿಯವರೆಗೂ ಮುಳುಗಡೆಯಾಗಿಯೇ ಇತ್ತು. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಈ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. <br /> <br /> ಸೋಮವಾರ ಸಂಜೆ ಸೇತುವೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಹರಿಯುತ್ತಿದ್ದುದು, ಸಂಜೆ ತುಸು ಇಳಿಕೆಯಾಗಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮೇಲೆ ಸುಮಾರು 6 ಅಡಿ ನೀರು ಹರಿಯುತ್ತಿತ್ತು. ಸೇತುವೆಯ ರಕ್ಷಣಾ ಗೇಟು, ಪೊಲೀಸರು ಪಹರೆ ಕಾಯುತ್ತಿದ್ದ ಶೆಡ್ವರೆಗೆ ನೀರು ಹರಿದಾಡತೊಡಗಿತ್ತು. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೇತುವೆಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗಿದೆ.<br /> <br /> ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ಸೋಮವಾರ ಸಂಜೆಯಿಂದಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಮಧ್ಯೆ, ಈ ಮಾರ್ಗವಾಗಿ ಸಂಚರಿಸುವ ಬಸ್, ಟೂರಿಸ್ಟ್ ಟೆಂಪೊಗಳಲ್ಲಿ ಕೆಲವು ಪುತ್ತೂರು-ಕಾಣಿಯೂರು ರಸ್ತೆಯಾಗಿ ಸಂಚಾರ ಮುಂದುವರಿಸಿದ್ದವು. ಉಳಿದಂತೆ ಟೂರಿಸ್ಟ್, ಸರ್ವಿಸ್ ವಾಹನಗಳು ಸಂಚಾರ ಸ್ಥಗಿತಗೊಳಿಸಿದವು.<br /> <strong><br /> ದ್ವೀಪವಾದ ಕಡಬ:</strong> ಕಡಬ-ಉಪ್ಪಿನಂಗಡಿ ಮಧ್ಯೆ ಯಾನ ಮಾಡುವ ಉದ್ಯೋಗಿಗಳು, ಉದ್ಯಮಿಗಳು, ವ್ಯಾಪಾರ, ವ್ಯವಹಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಹನಗಳ ಸಂಚಾರವಿಲ್ಲದೆ ಸಮಸ್ಯೆ ಎದುರಿಸುವಂತಾಯಿತು.<br /> <br /> ಹೊಸ್ಮಠ ಸೇತುವೆ ಮುಳುಗಡೆ ಆಗಿರುವುದರಿಂದ ಮತ್ತು ಅತ್ತ ಬಿಳಿನೆಲೆ ಮತ್ತು ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸೇತುವೆ ಮುಳುಗಡೆ ಆಗಿರುವುದರಿಂದ ಸೋಮವಾರದಿಂದ ಕಡಬ ಜನತೆಯ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದೆ. ಒಂದು ರೀತಿಯಲ್ಲಿ ಕಡಬ ದ್ವೀಪದಂತಾಗಿ ಮಾರ್ಪಾಟು ಹೊಂದಿದಂತಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡಬ (ಉಪ್ಪಿನಂಗಡಿ): </strong>ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಘಟ್ಟದ ಮೇಲಿನಿಂದ ನೀರಿನ ಪ್ರವಾಹ ಒಂದೇ ಸವನೆ ಜಾಸ್ತಿಯಾಗಿರುವುದರಿಂದಾಗಿ ಗುಂಡ್ಯ ಹೊಳೆ ಹರಿಯುವ ಹೊಸ್ಮಠ ಮುಳುಗು ಸೇತುವೆ ಕಳೆದ 28 ಗಂಟೆಯಿಂದ ಮುಳುಗಡೆಯಾಗಿದೆ.<br /> <br /> ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ಸೇತುವೆ ಮುಳುಗಡೆ ಆಗಿದ್ದು, ಮಂಗಳವಾರ ರಾತ್ರಿಯವರೆಗೂ ಮುಳುಗಡೆಯಾಗಿಯೇ ಇತ್ತು. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಈ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. <br /> <br /> ಸೋಮವಾರ ಸಂಜೆ ಸೇತುವೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಹರಿಯುತ್ತಿದ್ದುದು, ಸಂಜೆ ತುಸು ಇಳಿಕೆಯಾಗಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮೇಲೆ ಸುಮಾರು 6 ಅಡಿ ನೀರು ಹರಿಯುತ್ತಿತ್ತು. ಸೇತುವೆಯ ರಕ್ಷಣಾ ಗೇಟು, ಪೊಲೀಸರು ಪಹರೆ ಕಾಯುತ್ತಿದ್ದ ಶೆಡ್ವರೆಗೆ ನೀರು ಹರಿದಾಡತೊಡಗಿತ್ತು. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೇತುವೆಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗಿದೆ.<br /> <br /> ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ಸೋಮವಾರ ಸಂಜೆಯಿಂದಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಮಧ್ಯೆ, ಈ ಮಾರ್ಗವಾಗಿ ಸಂಚರಿಸುವ ಬಸ್, ಟೂರಿಸ್ಟ್ ಟೆಂಪೊಗಳಲ್ಲಿ ಕೆಲವು ಪುತ್ತೂರು-ಕಾಣಿಯೂರು ರಸ್ತೆಯಾಗಿ ಸಂಚಾರ ಮುಂದುವರಿಸಿದ್ದವು. ಉಳಿದಂತೆ ಟೂರಿಸ್ಟ್, ಸರ್ವಿಸ್ ವಾಹನಗಳು ಸಂಚಾರ ಸ್ಥಗಿತಗೊಳಿಸಿದವು.<br /> <strong><br /> ದ್ವೀಪವಾದ ಕಡಬ:</strong> ಕಡಬ-ಉಪ್ಪಿನಂಗಡಿ ಮಧ್ಯೆ ಯಾನ ಮಾಡುವ ಉದ್ಯೋಗಿಗಳು, ಉದ್ಯಮಿಗಳು, ವ್ಯಾಪಾರ, ವ್ಯವಹಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಹನಗಳ ಸಂಚಾರವಿಲ್ಲದೆ ಸಮಸ್ಯೆ ಎದುರಿಸುವಂತಾಯಿತು.<br /> <br /> ಹೊಸ್ಮಠ ಸೇತುವೆ ಮುಳುಗಡೆ ಆಗಿರುವುದರಿಂದ ಮತ್ತು ಅತ್ತ ಬಿಳಿನೆಲೆ ಮತ್ತು ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸೇತುವೆ ಮುಳುಗಡೆ ಆಗಿರುವುದರಿಂದ ಸೋಮವಾರದಿಂದ ಕಡಬ ಜನತೆಯ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದೆ. ಒಂದು ರೀತಿಯಲ್ಲಿ ಕಡಬ ದ್ವೀಪದಂತಾಗಿ ಮಾರ್ಪಾಟು ಹೊಂದಿದಂತಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>