<p><strong>ಬೆಂಗಳೂರು:</strong> ರಾಜ್ಯದ ಮೈಸೂರು, ಹಾಸನ, ಬೀದರ್, ಯಾದಗಿರಿ ಜಿಲ್ಲೆ ಗಳಲ್ಲಿ ಔಷಧ ಉದ್ಯಮದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸ ಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.<br /> <br /> ನಗರದಲ್ಲಿ ಗುರುವಾರ ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ, ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಕರ್ನಾಟಕ ಔಷಧ ತಯಾರಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಉದ್ಘಾಟಿಸಿದ ಅವರು, ಈ ಜಿಲ್ಲೆಗಳಲ್ಲಿ ಭೂಮಿ ಸಹ ಲಭ್ಯವಿರುವು ದರಿಂದ ಉದ್ಯಮಗಳ ಸ್ಥಾಪನೆಗೆ ಅನು ಕೂಲವಾಗಲಿದೆ ಎಂದರು.<br /> <br /> ಔಷಧ ಉದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈ ಉದ್ಯಮ ದಲ್ಲಿ ಕರ್ನಾಟಕ ಉತ್ತಮ ಪ್ರಗತಿ ತೋರುತ್ತಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕ ಶೇ 8ರಷ್ಟು ಪಾಲು ಹೊಂದಿದೆ ಎಂದು ವಿವರಿಸಿದರು.<br /> <br /> ಕರ್ನಾಟಕ ಔಷಧ ತಯಾರಕರ ಸಂಘದ ಅಧ್ಯಕ್ಷ ಜಗನ್ನಾಥ ಶೇಟ್, ಔಷಧಗಳ ರಫ್ತು ಪ್ರಮಾಣ ಗಣನೀಯ ವಾಗಿ ಏರಿಕೆಯಾಗಿದ್ದರೂ ಭವಿಷ್ಯದಲ್ಲಿ ಉದ್ಯಮದ ಬೆಳವಣಿಗೆಯ ಲಕ್ಷಣ ಗೋಚರಿಸುತ್ತಿಲ್ಲ. ಉತ್ಪಾದನೆ ವೆಚ್ಚ ದುಬಾರಿಯಾಗಿರುವುದು ಸಹ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದರು.<br /> <br /> ಉತ್ತಮ ಸಂಶೋಧನೆ ಕೈಗೊಳ್ಳಲು ಔಷಧವಿಜ್ಞಾನ ಮಹಾವಿದ್ಯಾಲಯಗಳು ಮತ್ತು ಉದ್ಯಮಗಳ ನಡುವೆ ಉತ್ತಮ ಸಂಬಂಧ ಸಾಧಿಸಬೇಕಾಗಿದೆ. ಶಿಕ್ಷಣ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸ ಬೇಕು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉದ್ಯಮ ಜಂಟಿಯಾಗಿ ಸಂಶೋಧನೆ ಕಾರ್ಯ ಕೈಗೊಂಡಿವೆ ಎಂದು ನುಡಿದರು.<br /> <br /> ರಾಜ್ಯ ಔಷಧ ನಿಯಂತ್ರಕ ರಘು ರಾಮ ಭಂಡಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ಮೈಸೂರು, ಹಾಸನ, ಬೀದರ್, ಯಾದಗಿರಿ ಜಿಲ್ಲೆ ಗಳಲ್ಲಿ ಔಷಧ ಉದ್ಯಮದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸ ಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.<br /> <br /> ನಗರದಲ್ಲಿ ಗುರುವಾರ ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ, ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಕರ್ನಾಟಕ ಔಷಧ ತಯಾರಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಉದ್ಘಾಟಿಸಿದ ಅವರು, ಈ ಜಿಲ್ಲೆಗಳಲ್ಲಿ ಭೂಮಿ ಸಹ ಲಭ್ಯವಿರುವು ದರಿಂದ ಉದ್ಯಮಗಳ ಸ್ಥಾಪನೆಗೆ ಅನು ಕೂಲವಾಗಲಿದೆ ಎಂದರು.<br /> <br /> ಔಷಧ ಉದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈ ಉದ್ಯಮ ದಲ್ಲಿ ಕರ್ನಾಟಕ ಉತ್ತಮ ಪ್ರಗತಿ ತೋರುತ್ತಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕ ಶೇ 8ರಷ್ಟು ಪಾಲು ಹೊಂದಿದೆ ಎಂದು ವಿವರಿಸಿದರು.<br /> <br /> ಕರ್ನಾಟಕ ಔಷಧ ತಯಾರಕರ ಸಂಘದ ಅಧ್ಯಕ್ಷ ಜಗನ್ನಾಥ ಶೇಟ್, ಔಷಧಗಳ ರಫ್ತು ಪ್ರಮಾಣ ಗಣನೀಯ ವಾಗಿ ಏರಿಕೆಯಾಗಿದ್ದರೂ ಭವಿಷ್ಯದಲ್ಲಿ ಉದ್ಯಮದ ಬೆಳವಣಿಗೆಯ ಲಕ್ಷಣ ಗೋಚರಿಸುತ್ತಿಲ್ಲ. ಉತ್ಪಾದನೆ ವೆಚ್ಚ ದುಬಾರಿಯಾಗಿರುವುದು ಸಹ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದರು.<br /> <br /> ಉತ್ತಮ ಸಂಶೋಧನೆ ಕೈಗೊಳ್ಳಲು ಔಷಧವಿಜ್ಞಾನ ಮಹಾವಿದ್ಯಾಲಯಗಳು ಮತ್ತು ಉದ್ಯಮಗಳ ನಡುವೆ ಉತ್ತಮ ಸಂಬಂಧ ಸಾಧಿಸಬೇಕಾಗಿದೆ. ಶಿಕ್ಷಣ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸ ಬೇಕು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉದ್ಯಮ ಜಂಟಿಯಾಗಿ ಸಂಶೋಧನೆ ಕಾರ್ಯ ಕೈಗೊಂಡಿವೆ ಎಂದು ನುಡಿದರು.<br /> <br /> ರಾಜ್ಯ ಔಷಧ ನಿಯಂತ್ರಕ ರಘು ರಾಮ ಭಂಡಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>