ತಹಶೀಲ್ದಾರ್ ಕೆ.ಪಿ. ಈಶ್ವರಪ್ಪ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುರುವಾರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕೆ.ಆರ್. ನಗರದಿಂದ ಮುಳುಗು ತಜ್ಞರನ್ನು ಶವದ ಶೋಧಕ್ಕಾಗಿ ಕರೆಸಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಈ ತಂಡ, ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶವವನ್ನು ಪತ್ತೆ ಹಚ್ಚಿ ಹೊರ ತೆಗೆಯಲು ಯಶಸ್ವಿಯಾಯಿತು.
ಗಣಪತಿ ವಿಸರ್ಜಿಸಲಾದ ಜಾಗದ ಸ್ವಲ್ಪ ದೂರದಲ್ಲೆ ಮಂಜುನಾಥನ ಶವ ಕೆರೆಯ ತಳ ಭಾಗದ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಶವ ಹೊರ ತೆಗೆಯುತ್ತಿದ್ದಂತೆ ಪೋಷಕರ ಹಾಗೂ ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿತು.
ಬಳಿಕ ಶವವನ್ನು ಅರಕಲಗೂಡಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.
ಅಗ್ನಿಶಾಮಕ ದಳದ ಅಧಿಕಾರಿ ಜ್ಞಾನಮೂರ್ತಿ, ಪಿ.ಎಸ್.ಐ. ಎಂ. ಎಂ.ಭರತ್, ಕಸಬಾ ಹೋಬಳಿ ರೆವಿನ್ಯೂ ಇನ್ಸ್ ಪೆಕ್ಟರ್ಬಸವರಾಜ್್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.