<p>ಯಳಂದೂರು: ಪಟ್ಟಣದ ಪಶುಸಂಗೋಪನಾ ಇಲಾಖೆಯ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಬೃಹತ್ ಗಾತ್ರದ 70 ವರ್ಷ ಹಳೆಯ `ಸುರಾಯಿ~ ಮರವನ್ನುಯಾರ ಗಮನಕ್ಕೂ ಬಾರದ ಹಾಗೆ ಗಾಂಧಿ ಜಯಂತಿ ದಿನವಾದ ಭಾನುವಾರ ಕಡಿದು ಹಾಕಿದ ಘಟನೆ ನಡೆದಿದೆ. <br /> <br /> ಮರವನ್ನು ಕಡಿದು ಹಾಕಬೇಕಾದರೆ ಅರಣ್ಯ ಇಲಾಖೆಯ ಅನುಮತಿಬೇಕು, ಜೊತೆಗೆ ಸಂಬಂಧಪಟ್ಟ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕು. ಆದರೆ ಈ ಮರವನ್ನು ತಾಲ್ಲೂಕು ಪಂಚಾಯಿತಿಯ ಗಮನಕ್ಕೂ ತರದೇ ಕಡಿದು ಹಾಕಲಾಗುತ್ತಿದೆ ಎಂದು ವಿಷಯ ತಿಳಿದು ತಾ.ಪಂ. ಸದಸ್ಯೆ ವೆಂಕಟಾಚಲ ಸ್ಥಳಕ್ಕೆ ಭೇಟಿ ನೀಡಿದರು. ಅವರು ದೂರವಾಣಿ ಕರೆಯ ಮೂಲಕ ಇಲಾಖೆಯ ಡಾ. ಬಾಲಸುಂದರ್ ಅವರ ಜೊತೆ ಚರ್ಚಿಸಿದ ಮೇಲೆ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. <br /> <br /> `ಮಹಾತ್ಮರು ಹುಟ್ಟಿದ ದಿನ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸುವ ವಾಡಿಕೆ ಇದೆ. ಇದೆ ಆದರೆ ಸ್ವತಂತ್ರ ಪೂರ್ವದ ಮರವನ್ನು ಯಾರ ಗಮನಕ್ಕೂ ಬಾರದೇ ಕಡಿದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.<br /> <br /> ಈ ಮರವು ಸುಮಾರು 50 ಸಾವಿರ ರೂ. ಬೆಲೆ ಬಾಳುತ್ತದೆ. ಇದನ್ನು ಏಕಾಏಕಿ ಕತ್ತರಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇದನ್ನು ಕತ್ತರಿಸುವ ವೇಳೆ ಆಸ್ಪತ್ರೆಯ ಹೆಂಚಿನ ಮೇಲೆ ಕೊಂಬೆಯೊಂದು ಬಿದ್ದು ಅದೂ ಕೂಡ ಜಖಂ ಆಗಿದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುವುದಾಗಿ ವೆಂಕಟಾಚಲ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಳಂದೂರು: ಪಟ್ಟಣದ ಪಶುಸಂಗೋಪನಾ ಇಲಾಖೆಯ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಬೃಹತ್ ಗಾತ್ರದ 70 ವರ್ಷ ಹಳೆಯ `ಸುರಾಯಿ~ ಮರವನ್ನುಯಾರ ಗಮನಕ್ಕೂ ಬಾರದ ಹಾಗೆ ಗಾಂಧಿ ಜಯಂತಿ ದಿನವಾದ ಭಾನುವಾರ ಕಡಿದು ಹಾಕಿದ ಘಟನೆ ನಡೆದಿದೆ. <br /> <br /> ಮರವನ್ನು ಕಡಿದು ಹಾಕಬೇಕಾದರೆ ಅರಣ್ಯ ಇಲಾಖೆಯ ಅನುಮತಿಬೇಕು, ಜೊತೆಗೆ ಸಂಬಂಧಪಟ್ಟ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕು. ಆದರೆ ಈ ಮರವನ್ನು ತಾಲ್ಲೂಕು ಪಂಚಾಯಿತಿಯ ಗಮನಕ್ಕೂ ತರದೇ ಕಡಿದು ಹಾಕಲಾಗುತ್ತಿದೆ ಎಂದು ವಿಷಯ ತಿಳಿದು ತಾ.ಪಂ. ಸದಸ್ಯೆ ವೆಂಕಟಾಚಲ ಸ್ಥಳಕ್ಕೆ ಭೇಟಿ ನೀಡಿದರು. ಅವರು ದೂರವಾಣಿ ಕರೆಯ ಮೂಲಕ ಇಲಾಖೆಯ ಡಾ. ಬಾಲಸುಂದರ್ ಅವರ ಜೊತೆ ಚರ್ಚಿಸಿದ ಮೇಲೆ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. <br /> <br /> `ಮಹಾತ್ಮರು ಹುಟ್ಟಿದ ದಿನ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸುವ ವಾಡಿಕೆ ಇದೆ. ಇದೆ ಆದರೆ ಸ್ವತಂತ್ರ ಪೂರ್ವದ ಮರವನ್ನು ಯಾರ ಗಮನಕ್ಕೂ ಬಾರದೇ ಕಡಿದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.<br /> <br /> ಈ ಮರವು ಸುಮಾರು 50 ಸಾವಿರ ರೂ. ಬೆಲೆ ಬಾಳುತ್ತದೆ. ಇದನ್ನು ಏಕಾಏಕಿ ಕತ್ತರಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇದನ್ನು ಕತ್ತರಿಸುವ ವೇಳೆ ಆಸ್ಪತ್ರೆಯ ಹೆಂಚಿನ ಮೇಲೆ ಕೊಂಬೆಯೊಂದು ಬಿದ್ದು ಅದೂ ಕೂಡ ಜಖಂ ಆಗಿದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುವುದಾಗಿ ವೆಂಕಟಾಚಲ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>