ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಚಳವಳಿಯ ರಾಜಕೀಯ ಬಣ್ಣ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಆರಂಭಿಸಿದ ಅವರ ತಂಡದ ಚಳವಳಿ ದಿನೇ ದಿನೇ ಪಡೆದು ಕೊಳ್ಳುತ್ತಿರುವ ರಾಜಕೀಯ ತಿರುವು ಯಾರೂ ಮೆಚ್ಚುವಂಥದ್ದಲ್ಲ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧವೂ ಅವರು ಚಳವಳಿ ಮಾಡಿದ್ದರೆ ಅದಕ್ಕೆ ಸಮರ್ಥನೆ ಇರುತ್ತಿತ್ತು. ಅದು ಬಿಟ್ಟು, ಹರಿಯಾಣದ ಉಪಚುನಾವಣೆ ಸಂದ ರ್ಭದಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡಿರುವುದು ಸರಿಯಲ್ಲ. ಇದರಿಂದ ಅಣ್ಣಾ ತಂಡದ ರಾಜಕೀಯ ಬಣ್ಣ ಬಯಲಾದಂತಾಗಿದೆ.

ಪ್ರಾಯಶಃ ಇಂಥ ರಾಜಕೀಯ ಧೋರಣೆಯ ಪರಿಣಾಮವಾಗಿ, ನಿವೃತ್ತ ಲೋಕಾಯುಕ್ತರಾದ ನ್ಯಾ.ಸಂತೋಷ ಹೆಗ್ಡೆ ಅವರು ಅಣ್ಣಾ ಹಜಾರೆ ತಂಡದ ಈ ನಿರ್ಧಾರದಿಂದ ದೂರ ಸರಿಯಲು ತೀರ್ಮಾನಿಸಿರುವುದು ಸಮಯೋಚಿತವಾಗಿದೆ. ಅಣ್ಣಾ ಹಜಾರೆ ಸಂಸತ್‌ಗಿಂತಲೂ ದೊಡ್ಡವರು ಎಂಬ ಅರವಿಂದ ಕೇಜ್ರಿವಾಲರ ಹೇಳಿಕೆಯನ್ನು ಸಂವಿಧಾನ ಪರಿಣತರಾದ ನ್ಯಾ. ಸಂತೋಷ ಹೆಗ್ಡೆ ಅವರೂ ಮೆಚ್ಚಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT