ನವದೆಹಲಿ (ಐಎಎನ್ಎಸ್): ‘ಅಪರಾಧಿಗಳಿಗೆ ಜೀವಿಸುವ ಹಕ್ಕಿಲ್ಲ. ಅವರನ್ನು ನೇಣಿಗೆ ಹಾಕಬೇಕು’ ಎಂದು ಸಾಮೂಹಿಕ ಅತ್ಯಾಚಾರದಿಂದ ಸಾವನ್ನಪ್ಪಿದ ಯುವತಿ ತಂದೆ ಬುಧವಾರ ಹೇಳಿದರು.
‘ಅವರೆಲ್ಲರೂ (ಅಪರಾಧಿಗಳು) ನನ್ನ ಮಗಳನ್ನು ಕೊಂದಿದ್ದಾರೆ ಅವರನ್ನು ಬದುಕಲು ಬಿಡಬೇಡಿ. ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ. ಇಂತಹ ತೀರ್ಪಿನ ಮೂಲಕ ಅತ್ಯಾಚಾರ ಎಸಗುವವರಿಗೆ ಕಠಿಣ ಎಚ್ಚರಿಕೆಯನ್ನೂ ನೀಡಬೇಕು’ ಎಂದು ಕೋರ್ಟ್ ಆವರಣದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಅಪರಾಧಿಗಳು ದಯೆ ತೋರುವಂತೆ ಮನವಿ ಮಾಡಿಕೊಂಡಿರುವ ಪ್ರಶ್ನೆಗೆ ಉತ್ತರಿಸಿದ ಯುವತಿಯ ತಾಯಿ, ‘ನಾವು ಕೂಡ ನ್ಯಾಯದ ಭಿಕ್ಷೆಗಾಗಿ ಅಂಗಲಾಚಿದ್ದೇವೆ. ನ್ಯಾಯಾಲಯವು ಅಪರಾಧಿಗಳ ಭಾವನಾತ್ಮಕ ಮನವಿಯನ್ನು ಪುರಸ್ಕೃರಿಸುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.