ಮುಂಬೈ (ಪಿಟಿಐ): ಭಾರತ ರತ್ನ ಪ್ರಶಸ್ತಿಯನ್ನು ಬಾಲಿವುಡ್ನ ಮೇರು ನಟ ಅಮಿತಾಭ್ ಬಚ್ಚನ್ ಅವರಿಗೆ ನೀಡಬೇಕು ಎಂದು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಆಗ್ರಹಿಸಿದ್ದಾರೆ.
ಶಿವಸೇನೆಯ ಮುಖವಾಣಿ `ಸಾಮ್ನಾ~ ಪತ್ರಿಕೆಯ ಸಂಪಾದಕೀಯದಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ಅಮಿತಾಭ್ ಬಚ್ಚನ್ ಅವರು ಭಾರತದ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸಲು ಕಾರಣರಾಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು `ಭಾರತದ ರತ್ನ~ ಎಂದು ಬಣ್ಣಿಸಿದ್ದಾರೆ.