ವಾಷಿಂಗ್ಟನ್ (ಐಎಎನ್ಎಸ್):))- ಚಂಡೀಗಡ ಮೂಲದ ಕಾನೂನು ತಜ್ಞ 46 ವರ್ಷದ ಶ್ರೀನಿವಾಸನ್ ಅವರು ಕೊಲಂಬಿಯಾದ ಸಂಚಾರಿ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಇದೇ ಪ್ರಥಮ ಬಾರಿಗೆ ಭಾರತ ಮೂಲದವರು ಅಮೆರಿಕದ ಎರಡನೇ ಉನ್ನತ ನ್ಯಾಯಾಲಯದ ನ್ಯಾಯಾಧೀಶರಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಂದ್ರಾ ಡೇ ಒಕೊನೂರ್, ಶ್ರೀನಿವಾಸ್ ಅವರ ತಾಯಿ ಸರೋಜಾ ಮತ್ತು ಕುಟುಂಬದ ಸದಸ್ಯರು, ಮಿತ್ರರಾದ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಸಮಕ್ಷಮದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು.