ನವದೆಹಲಿ (ಪಿಟಿಐ): ಅರಣ್ಯ ನೀತಿ ಅನುಷ್ಠಾನದ ಮೇಲ್ವಿಚಾರಣೆಗೆ ರಾಷ್ಟ್ರೀಯ ನಿಯಂತ್ರಣ ಸಂಸ್ಥೆ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ನಿರ್ದೇಶನ ನೀಡಿದೆ. ಇಂತಹ ಸಂಸ್ಥೆಯ ಅಗತ್ಯ ಇಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಕೋರ್ಟ್ ತಿರಸ್ಕರಿಸಿದೆ.
ಈ ನಿರ್ದೇಶನವನ್ನು ಪಾಲಿಸಿರುವ ಬಗ್ಗೆ 2014ರ ಮಾರ್ಚ್ 31ರೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಅರಣ್ಯ ಪೀಠ ಆದೇಶ ನೀಡಿದೆ. ಎಷ್ಟು ರಾಜ್ಯಗಳಲ್ಲಿ ಸಾಧ್ಯವೋ ಅಷ್ಟು ರಾಜ್ಯಗಳಲ್ಲಿ ನಿಯಂತ್ರಕರನ್ನು ನೇಮಿಸಬೇಕು ಎಂದೂ ಪೀಠ ಸೂಚಿಸಿದೆ.