ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಬರೆ ಹದಕ್ಕೆ ಬಿತ್ತನೆ ಆರಂಭ

Last Updated 19 ಜುಲೈ 2012, 6:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬಿದ್ದಿರುವ ತುಂತುರು ಮಳೆಗೆ ಮಂಗಳವಾರದಿಂದ ಬಿತ್ತನೆ ಆರಂಭಿಸಲಾಗಿದೆ.

ಭಾನುವಾರ, ಸೋಮವಾರ ಬಿದ್ದ ತುಂತುರು ಮಳೆಗೆ ರಾಯಾಪುರ, ಹಾನಗಲ್, ಮೊಳಕಾಲ್ಮುರು, ಕೋನಸಾಗರ, ಊಡೇವು ಗ್ರಾಮಗಳ ಸುತ್ತಮುತ್ತ ಶೇಂಗಾ ಮತ್ತು ಸೂರ್ಯಕಾಂತಿ, ಸಜ್ಜೆ, ನವಣೆ, ತೊಗರಿ ಬಿತ್ತನೆ ಮಾಡಲಾಗುತ್ತಿದೆ.

ದುಬಾರಿ ಬೆಲೆ ಶೇಂಗಾ ಬಿತ್ತನೆ ಮಾಡುವ ಮುನ್ನ ರೈತರು ತುಸು ಯೋಚನೆ ಮಾಡಬೇಕು. ಅರೆಬರೆ ಹದಕ್ಕೆ ಬಿತ್ತನೆ ಮಾಡಿ ನಂತರ ಕೈ ಸುಟ್ಟುಕೊಳ್ಳುವ ಮುನ್ನ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT