ಮೊಳಕಾಲ್ಮುರು: ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬಿದ್ದಿರುವ ತುಂತುರು ಮಳೆಗೆ ಮಂಗಳವಾರದಿಂದ ಬಿತ್ತನೆ ಆರಂಭಿಸಲಾಗಿದೆ.
ಭಾನುವಾರ, ಸೋಮವಾರ ಬಿದ್ದ ತುಂತುರು ಮಳೆಗೆ ರಾಯಾಪುರ, ಹಾನಗಲ್, ಮೊಳಕಾಲ್ಮುರು, ಕೋನಸಾಗರ, ಊಡೇವು ಗ್ರಾಮಗಳ ಸುತ್ತಮುತ್ತ ಶೇಂಗಾ ಮತ್ತು ಸೂರ್ಯಕಾಂತಿ, ಸಜ್ಜೆ, ನವಣೆ, ತೊಗರಿ ಬಿತ್ತನೆ ಮಾಡಲಾಗುತ್ತಿದೆ.
ದುಬಾರಿ ಬೆಲೆ ಶೇಂಗಾ ಬಿತ್ತನೆ ಮಾಡುವ ಮುನ್ನ ರೈತರು ತುಸು ಯೋಚನೆ ಮಾಡಬೇಕು. ಅರೆಬರೆ ಹದಕ್ಕೆ ಬಿತ್ತನೆ ಮಾಡಿ ನಂತರ ಕೈ ಸುಟ್ಟುಕೊಳ್ಳುವ ಮುನ್ನ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.