ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಾಯುಷಿ ಸರ್ಕಾರ: ಭೂಷಣ್‌ ಶಂಕೆ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಅರವಿಂದ್ ಕೇಜ್ರಿವಾಲ್‌ ಸಂಪುಟ ಸೇರುವ ಸಂಭವ­ನೀಯ ಸಚಿವರ ಪಟ್ಟಿ ಸಿದ್ಧವಾಗಿದ್ದು, ಪಟ್‌ಪಾಡ್‌ಗಂಜ್‌ ಕ್ಷೇತ್ರದಿಂದ ಆಯ್ಕೆ­ಯಾಗಿ­ರುವ ಮಾಜಿ ಪತ್ರಕರ್ತ ಮನೀಷ್‌ ಸಿಸೋಡಿಯಾ ಸೇರಿ ಅನೇ­ಕ­ರಿಗೆ ಅದೃಷ್ಟ ಒಲಿಯುವ ಸಾಧ್ಯತೆಯಿದೆ.
ಜನ ಲೋಕಪಾಲ್‌ ಮಸೂದೆ ಜಾರಿ­ಗಾಗಿ ನಡೆದ ಹೋರಾಟದ ಸಮಯ­ದಲ್ಲಿ ಬೆಳಕಿಗೆ ಬಂದ ಸಿಸೋಡಿಯಾ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಸೌರಭ್‌ ಭಾರದ್ವಾಜ್‌, ವಿನೋದ್‌ ಕುಮಾರ್‌ ಬಿನ್ನಿ, ಸೋಮನಾಥ್‌ ಭಾರ್ತಿ, ರಾಖಿ ಬಿರ್ಲಾ, ಬಂದನ ಕುಮಾರಿ ಹಾಗೂ ಜರ್ನೈಲ್‌ಸಿಂಗ್‌ ಅವರು ಸಂಪುಟ ಸೇರುವ ಸಂಭವವಿದೆ.

ಪ್ರತಿಕ್ರಿಯೆಗೆ ಹಜಾರೆ ನಕಾರ: ದೆಹಲಿ­ಯಲ್ಲಿ ಹೊಸ ಸರ್ಕಾರ ರಚಿಸುವ ಆಮ್‌ ಆದ್ಮಿ ಪಕ್ಷದ ನಿರ್ಧಾರದ ಬಗ್ಗೆ ಅಣ್ಣಾ ಹಜಾರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಲೋಕಾ­ಯುಕ್ತ ವಿಚಾರದ ಬಗ್ಗೆ ಅರವಿಂದ್‌ ಕೇಜ್ರಿ­ವಾಲ್‌ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿ­ಸು­ವುದಾಗಿ ಹಜಾರೆ ತಿಳಿಸಿದ್ದಾರೆ.

‘ಬಹಳ ದಿನ ಉಳಿಯದು’: ದೆಹಲಿ­ಯಲ್ಲಿ ರಚನೆಯಾಗಲಿರುವ ಆಮ್‌ ಆದ್ಮಿ ಪಕ್ಷದ ಸರ್ಕಾರ ಎಷ್ಟು ಕಾಲ ಉಳಿಯಬಹುದು ಎಂಬ ಬಗ್ಗೆ ಆ ಪಕ್ಷದ ನಾಯಕರಿಗೇ ಖಚಿತತೆಯಿಲ್ಲ.

‘ಕಾಂಗ್ರೆಸ್‌ ಪಕ್ಷದ ಹಿನ್ನೆಲೆ ಗಮನಿಸಿದರೆ ಈ ಸರ್ಕಾರ ಬಹಳ ಕಾಲ ಉಳಿಯುವ ನಿರೀಕ್ಷೆ ಇಲ್ಲ. ಒಂದು ತಿಂಗಳೋ, ಎರಡು ತಿಂಗಳೋ ಅಥವಾ ಆರು ತಿಂಗಳೋ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ.

‘ಕಾಂಗ್ರೆಸ್‌ನ ಯಾವುದೇ ಷರತ್ತು­ಗಳನ್ನು ಒಪ್ಪಿಕೊಳ್ಳುವುದಿಲ್ಲ.  ನಾವು ನಮ್ಮದೇ ಕಾರ್ಯಸೂಚಿ ಅನುಷ್ಠಾ­ನ­­ಗೊಳಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ದೆಹಲಿ ಜನರಿಗೆ ಮೋಸ’: ಆಮ್‌ ಆದ್ಮಿ ಪಕ್ಷದ ಸರ್ಕಾರ ರಚಿಸುವ ನಿರ್ಧಾರ­ವನ್ನು ಬಿಜೆಪಿ ಟೀಕಿಸಿದೆ.

‘ಆಮ್‌ ಆದ್ಮಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟದ ಭರವಸೆ ನೀಡಿದೆ. ಆದರೆ ಈಗ  ಭ್ರಷ್ಟ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿ­ಕೊಳ್ಳುವ ಮೂಲಕ ತನ್ನ ತತ್ವ­ಗಳೊಂದಿಗೆ ರಾಜಿ ಮಾಡಿಕೊಂ­ಡಿದೆ. ಚುನಾ­ವಣೆ­ಯಲ್ಲಿ ದೆಹಲಿ ಜನರು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌­ನೊಂದಿಗೆ ಸೇರಿ ರಚಿ­ಸುವ ಸರ್ಕಾರ ದೆಹಲಿ ಜನರಿಗೆ ಮಾಡುವ ಮೋಸ’ ಎಂದು ಬಿಜೆಪಿ ನಾಯಕ ಹರ್ಷವರ್ಧನ್‌ ಹೇಳಿದ್ದಾರೆ.

‘ಬೆಂಬಲ ಬೇಷರತ್‌ ಅಲ್ಲ’: ಆಮ್‌ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್‌ ನೀಡುತ್ತಿರುವ ಬೆಂಬಲ ಬೇಷರತ್‌ ಅಲ್ಲ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಹೇಳಿದ್ದಾರೆ.

‘ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೇವೆ. ಇದು ಬೇಷ­ರತ್‌ ಅಲ್ಲ. ಸರ್ಕಾರ ರಚಿಸುವ ಅವ­ರ ನಿರ್ಧಾ­ರ­ವನ್ನು ನಾನು ಅಭಿನಂದಿ­ಸು­ತ್ತೇನೆ. ಎಎಪಿ ನೀಡಿದ ಭರವಸೆ­ಗ­ಳನ್ನು ಈಡೇರಿ­ಸು­ತ್ತದೆ ಎಂದು ನಂಬಿದ್ದೇನೆ’ ಎಂದಿದ್ದಾರೆ.

‘ದೇವರೇ ರಕ್ಷಕ’
ಅರವಿಂದ್‌ ಕೇಜ್ರಿವಾಲ್‌ ತಮಗೆ ಒದಗಿಸಲಾದ ಭದ್ರತೆ­ನಿರಾಕರಿಸಿದ್ದಾರೆ. ‘ದೇವರೇ ನನಗೆ ಅತ್ಯಂತ ದೊಡ್ಡ ಭದ್ರತೆ’ ಎಂದು ಅವರು ಹೇಳಿದ್ದಾರೆ.

ತಮಗೆ ಝೆಡ್‌ ಶ್ರೇಣಿ ಭದ್ರತೆ ನೀಡಲಾಗುವುದು ಎಂದು ದೆಹಲಿ ಹೆಚ್ಚುವರಿ ಆಯುಕ್ತ ವಿ. ರಂಗ­ನಾಥನ್‌, ಕೇಜ್ರಿ­­ವಾಲ್‌ ಅವ­ರಿಗೆ ಪತ್ರ ಬರೆದು ತಿಳಿಸಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್‌, ತನಗೆ ಯಾವುದೇ ಭದ್ರತೆ, ಬೆಂಗಾವಲು ಅಥವಾ ವೈಯಕ್ತಿಕ ಭದ್ರತಾ ಅಧಿಕಾರಿ ಅಗತ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT