ಬಾಣಾವರ: ಸಮೀಪದ ತೊಂಡಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಸಂಪ್ರದಾಯದಂತೆ ರಥೋತ್ಸವ ಕಾರ್ಯಗಳು ಶುಕ್ರವಾರದಿಂದಲೇ ಆರಂಭವಾಗಿದ್ದವು. ನಿತ್ಯ ಸಂಪ್ರದಾಯದಂತೆ ಮೂಲವಿಗ್ರಹಕ್ಕೆ ಅಭಿಷೇಕ ಹಾಗೂ ರಾಮನವಮಿ ಪೂಜೆಗಳು, ಕುಂಕುಮ ಅಭಿಷೇಕ, ಮದುವಣಿಗೆ ಶಾಸ್ತ್ರ, ಸೀತಾಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಅಮೃತಸೇವೆ, ಗರುಡೋತ್ಸವ, ಪಲ್ಲಕಿ ಉತ್ಸವದ ಪೂಜೆಗಳನ್ನು ನೆರವೇರಿದವು.