ಹೈದರಾಬಾದ್ (ಪಿಟಿಐ): ಏಳು ವರ್ಷದ ತಮ್ಮ ಮಗುವಿಗೆ ಬುದ್ಧಿ ಮಾತು ಹೇಳಲು ಹೋಗಿ ಜೈಲುಪಾಲಾದ ಆಂಧ್ರ ಮೂಲದ ನಾರ್ವೆ ದಂಪತಿಗಳ ಬಿಡುಗಡೆಗೆ ಕೇಂದ್ರ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಒತ್ತಾಯಿಸಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಅವರಿಗೆ ಪತ್ರ ಬರೆದಿದ್ದಾರೆ.